ಸ್ಥಳನಾಮ ಪುರಾಣ - ಒಂದು ಲಹರಿ
- ಟಿ. ಮಹದೇವ ರಾವ್; ಬ್ರಾಕ್ಪೋರ್ಟ್, ನ್ಯೂಯಾರ್ಕ್
[email protected]
‘ಯೋಳ್ಕೊಳ್ಳಕ್ ಒಂದೂರು, ತಲೆ ಮ್ಯಾಗೊಂದ್ ಸೂರು’ ಅಂತ ಹಾಡಿದ್ದಾರೆ ರಾಜರತ್ನಂ. ಊರು ಯಾವುದಾದರೇನು, ಅದು ನನ್ನೂರು ಎಂಬುದೇ ಮುಖ್ಯ. ನಾನು ಇಂಥ ಊರಿನವನು ಅಂತ ಹೇಳಿಕೊಳ್ಳೋದೇ ಒಂದು ಹೆಮ್ಮೆ. ಒಂದೊಂದು ಊರಿಗೂ ಒಂದು ಹೆಸರಿದೆ. ಹೆಸರೊಂದೇ ಏಕೆ, ಇತಿಹಾಸ ಸ್ಥಳ ಪುರಾಣಗಳೇ ಇವೆ. ನಮ್ಮ ನಾಡಿನಲ್ಲಿ ಊರ ಹೆಸರುಗಳ ವೈವಿಧ್ಯವನ್ನು ಗಮನಿಸಿದ್ದೀರಾ?
ಕೆಲವು ಹೆಸರುಗಳು ‘ಊರು’ ಎಂದು ಕೊನೆಯಾಗುತ್ತವೆ: ಬೆಂಗಳೂರು, ಮೈಸೂರು ಇತ್ಯಾದಿ. ಕೆಲವು ‘ನಗರ’ ಗಳು: ರಾಮನಗರ, ಜಯನಗರ, ಚಾಮರಾಜನಗರ, ಹೊಸನಗರ ಇತ್ಯಾದಿ. ಇನ್ನು ‘ಹಳ್ಳಿ’ಗಳಂತೂ ಸರ್ವೇಸಾಮಾನ್ಯ: ತಂಬ್ರಹಳ್ಳಿ (ನನ್ನ ತವರು), ತೀರ್ಥ ಹಳ್ಳಿ. ಹಳ್ಳಿ ಚಿಕ್ಕ ಊರೇನೂ ಆಗಬೇಕಿಲ್ಲ : ಹುಬ್ಬಳ್ಳಿ. ಪಟ್ಟಣಗಳೂ ಬೇಕಾದಷ್ಟಿವೆ: ಚನ್ನಪಟ್ಟಣ, ಪಿರಿಯಾ ಪಟ್ಟಣ, ಬಸವಾಪಟ್ಟಣ. ಊರೆಂಬುದು ಒಂದು ಸ್ಥಳ ಅಲ್ಲವೆ? ಇಲ್ಲಿ ಸ್ಥಳಗಳಿವೆ: ಧರ್ಮಸ್ಥಳ. ಪುರಗಳಿವೆ: ವಿಜಯಪುರ, ಸುರಪುರ. ಪೇಟೆಗಳಿವೆ: ಹೊಸಪೇಟೆ, ಡಾಬಸ್ ಪೇಟೆ. ಕೊಪ್ಪ, ಕೊಪ್ಪಲು, ಹಟ್ಟಿಗಳೂ ಇವೆ: ಬನ್ನಿಕೊಪ್ಪ, ಗೋಣಿಕೊಪ್ಪಲು, ನಾಯಕನ ಹಟ್ಟಿ., ಬನಹಟ್ಟಿ . ಹತ್ತಾರು ಸಂದ್ರಗಳಿವೆ: ಅಮ್ಮಸಂದ್ರ, ಕ್ಯಾತ್ಸಂದ್ರ. ವಾಡ, ವಾಡಿ ಗಳಿವೆ: ಧಾರವಾಡ, ವಾಡಿ, ಬಾಗೇವಾಡಿ. ಗುಂದಗಳು, ಗುಪ್ಪಗಳು ಇವೆ - ನರಗುಂದ, ನವಿಲುಗುಂದ, ಸಿರುಗುಪ್ಪ, ತಾಳಗುಪ್ಪ.
ಊರ ಹತ್ತಿರ ನೀರಿರಬೇಕಲ್ಲವೆ? ಕೆಲವು ಊರುಗಳಿಗೆ ಜಲಾಶಯದ ಹೆಸರುಗಳಿವೆ. ಇಲ್ಲಿ ಕೆರೆಗಳಿವೆ: ತರೀಕೆರೆ, ಅರಸೀಕೆರೆ. ಬಾವಿಗಳೂ ಇವೆ: ತೊಂಡೇಭಾವಿ, ಹಂಸಭಾವಿ. ಅಷ್ಟೇ ಏಕೆ? ಹೊಳೆ, ಸಮುದ್ರ, ಸಾಗರಗಳೂ ಇವೆ: ಐತಿಹಾಸಿಕ ಐಹೊಳೆ ಇದೆ. ಬಳ್ಳಾರಿ ಜಿಲ್ಲೆಯಲ್ಲಿ ಸಮುದ್ರವಂತೂ ಇಲ್ಲ, ಆದರೆ ಅಂಕಸಮುದ್ರ, ಹಂಪಸಾಗರ ಎಂಬ ಗ್ರಾಮಗಳಿವೆ. ಒಂದೇ ಊರಿನ ಹೆಸರನ್ನು ಬೇರೆ ಬೇರೆ ಜನ ಎರಡು ಬೇರೆ ಹೆಸರಿನಿಂದ ಕರೆಯುವುದೂ ಉಂಟು. ಕರ್ನಾಟಕದ ಮಧ್ಯದಲ್ಲಿರುವ ದಾವಣಗೆರೆಯನ್ನೇ ತೆಗೆದುಕೊಳ್ಳಿ: ಮೈಸೂರಿನವರಿಗೆ ಅದು ದಾವಣಗೆರೆ, ನದಿ ದಾಟಿ ಹೋದರೆ ಅದು ಡಾವಣಗೇರಿ.
ಊರ ಸುತ್ತಲೂ ಕೋಟೆ ಇರುವುದೂ ಉಂಟು. ಕೆಲವು ಕೋಟೆಗಳು: ಹೊಸಕೋಟೆ, ಮೇಲುಕೋಟೆ. ಕೆಲವು ದುರ್ಗಗಳು: ಚಿತ್ರದುರ್ಗ, ರಾಮದುರ್ಗ. ಕೋಟೆ ಕಲ್ಲಿಂದ ಕಟ್ಟಿದ್ದಲ್ಲವೆ? ಇನ್ನು ‘ಕಲ್ಲು’ಗಳೂ ಇವೆ: ಇಳಕಲ್ಲು, ಪಟ್ಟದಕಲ್ಲು. ‘ಗಡ’ ಎಂದರೂ ಕೋಟೆಯೇ: ಪಾವಗಡ, ಗಜೇಂದ್ರಗಡ. ಕೋಟೆ ಬೆಟ್ಟದ ಮೇಲಲ್ಲವೇ ಇರುವುದು? ಬೆಟ್ಟಗಳೂ ಇವೆ, ಗಿರಿಗಳೂ ಇವೆ: ನಂದಿಬೆಟ್ಟ, ಮಧುಗಿರಿ, ರಾಮಗಿರಿ.
ಊರುಗಳಿಗೆ ಕೆಲವು ವಿಶೇಷಣಗಳು ಅಂಟಿಕೊಂಡಿರುವುದೂ ಉಂಟು: ‘ಚಿಕ್ಕ’ಬಳ್ಳಾಪುರ, ‘ತಿರುಮಕೂಡಲು’ ನರಸೀಪುರ, ‘ಹಿರೇ’ ಹಡಗಲಿ, ‘ಕೊಕ್ಕರೆ’ ಬೆಳ್ಳೂರು, ‘ರಾಣಿ’ ಬೆನ್ನೂರು, ಮುಂತಾಗಿ. ಗಿಕಾರಾಂತಗಳು ತುಂಬಾ ಇವೆ: ಕೂಡ್ಲಿಗಿ, ಕುಷ್ಟಗಿ, ಕರಜಗಿ, ಬ್ಯಾಡಿಗಿ.
ಊರ ಹೆಸರುಗಳ ಬಗ್ಗೆ ಸಂಶೋಧನೆ ಮಾಡಿದರೆ ಇನ್ನೂ ಎಷ್ಟೋ ಸ್ವಾರಸ್ಯಕರ ವಿಷಯಗಳು ಹೊರಹೊಮ್ಮಬಹುದೇನೋ. ಸದ್ಯಕ್ಕೆ ನನಗೆ ಹೊಳೆಯುತ್ತಿರುವುದು ಇಷ್ಟೇ. ಅಂದಹಾಗೆ ನಿಮ್ಮೂರು ಯಾವುದು? ನಿಮ್ಮೂರಿನ ವೈಶಿಷ್ಟ್ಯ ಎಂಥದು ? ಊರು, ಹಳ್ಳಿ, ನಗರ, ದುರ್ಗ, ವಾಡಿ, ಸಂಧ್ರ, ಪಟ್ಟಣ ಮುಂತಾದ ಹೆಸರುಗಳ ಬಗ್ಗೆ ನಿಮಗೆ ತಿಳಿದಿರುವ ಸ್ವಾರಸ್ಯಕರ ವಿಷಯಗಳನ್ನು ಬರೆದು ತಿಳಿಸುವಿರಲ್ಲವೆ?
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications