ಮೆಚ್ಚಿದ ಕೈತಟ್ಟಿದ ಅಭಿಮಾನಿಗಳಿಗೆ ಶರಣು
ನಮ್ಮದಿದು ಎದೆಯಾಳದ ಸೆಳೆತ ಮತ್ತು ಮನದ ಮಾತು. ಕವಿ ಪುತಿನ ‘ಹರಿಣಾಭಿಸರಣ’ದಲ್ಲಿ ತಾಯಿ ಸೀತೆಯ ಮಾತಿನಲ್ಲಿ ಹಾಡಿದ ಭಾವ -‘’ಮಾತಿಗಿಂತಲೂ ಮೌನವೇ ಲೇಸು’ ಎಂಬುದು ಸತ್ಯವಾದರೂ ಮಾತಿನ ಮಂಟಪದಲ್ಲಿ ಭಾವವೆಂಬ ಮದುಮಗಳು ಅರಳಲೇಬೇಕಲ್ಲ.ಆತ್ಮೀಯರೇ, ಸೆ 3 ರಂದು ಬಿರುಗಾಳಿಯಾಂದಿಗೆ ಒರ್ಲಾಂಡೋದಲ್ಲಿ ನಮ್ಮ ಕರಾವಳಿಯ ಯಕ್ಷಲೋಕವನ್ನು ಧರೆಗಿಳಿಸಿದೆವು. ಹಾಡಿದೆವು. ಹಾರಾಡಿದೆವು. ಕುಣಿದು ಕುಪ್ಪಳಿಸಿದೆವು. ಅಗಸ್ಟ, ಹ್ಯೂಸ್ಟನ್, ಡೆಟ್ರಾಯಿಟ್, ವೇಯ್ನ್ ಸ್ಟೇಟ್ ಯುನಿವರ್ಸಿಟಿ, ಸ್ಕಾೃಂಟನ್, ನ್ಯೂಜೆರ್ಸಿ, ಎಲ್ ಎ ಶ್ರೀ ಪುತ್ತಿಗೆ ಮಠ, ಸಾಲ್ಟ್ ಲೇಕ್ ಸಿಟಿ, ಸ್ಯಾನ್ ಹೋಸೆ ಹಾಗೂ ಲಾಸ್ ಎಂಜಲೀಸ್ ತಾಣಗಳ ವಿವಿಧ ಸಂಘಟನೆಗಳ ಆಶ್ರಯದಲ್ಲಿ ವಿವಿಧ ಸಭಾಭವನಗಳಲ್ಲಿ ಯಕ್ಷ ರಂಗಸ್ಥಳ ಕಟ್ಟಿದೆವು. ನಿಮ್ಮೆಲ್ಲರ ತುಂಬು ಪ್ರೋತ್ಸಾಹದಿಂದ ರಂಗ ಪೂಜೆ ನೆರವೇರಿಸಿದೆವು. ನಮೋ ನಮಃ.ರುಗ್ಮಿಣೀಶ ವಿಜಯ, ಪಾಂಚಾಲಿ, ಶಬರಿಯಂಥ ರಂಗಪ್ರಯೋಗಗಳಾನ್ನು ವಿಮರ್ಶಾತ್ಮಕವಾಗಿ ಸ್ವೀಕರಿಸಿದಿರಿ. ಶೂರ್ಪನಖಾ ವಿವಾಹ, ಪಂಚವಟಿ, ಲಂಕಾದಹನ, ಜಾಂಬವತಿ ಕಲ್ಯಾಣ, ಗದಾಯುದ್ಧ ಎಂಬೀ ವಿವಿಧ ಪ್ರಸಂಗಗಳನ್ನು ನೇರ ಹಾಡುಗಾರಿಕೆಯ ಹಿಮ್ಮೇಳದೊಂದಿಗೆ ಕಿರೀಟ, ಕೇದಗೆ ಮುಂದಲೆ, ದೊಡ್ಡ ಮುಂಡಾಸು, ಗಂಡು - ಹೆಣ್ಣು ಬಣ್ಣದ ರಾಕ್ಷಸ ರಾಕ್ಷಸಿ ವೇಷ ಸಹಿತ ಆಡಿ ತೋರಿಸಲು ನೀವೆಲ್ಲ ನೀಡಿದ ಸಹಕಾರ, ಸ್ಪಂದನ, ಸಹಯೋಗ, ಸಾಮಿಪ್ಯವನ್ನು ಎಂದೆಂದೂ ಮರೆಯಲಾರೆವು. ಈ 10 - 11 ಪ್ರದರ್ಶನಗಳಲ್ಲಿ ಸಾವಿರಾರು ಕನ್ನಡಿಗರು ಹಾಗೂ ವಿವಿಧ ಭಾಷಾವಲಯದ ಕಲಾ ಸಹೃದಯರು, ಚಿಂತಕರು, ಅಭಿಮಾನಿಗಳು, ಬಂಧುಗಳು ನಮ್ಮ ಪ್ರಯೋಗಗಳನ್ನು ಕಂಡುಂಡು ಮನತಣಿಯಲೂ ನೀವೇ ಕಾರಣರೆಂಬುದು ನಮ್ಮ ಮನದಂಗಳದ ಸ್ಮರಣೆ. ನೀಡಿದ ಆತಿಥ್ಯ, ತೋರಿದ ಅಭಿಮಾನ ಹಾಗೂ ಮನೆಮನೆಯಲ್ಲೂ ನಮ್ಮ ಹಾಡು - ಕುಣಿತ, ಚಿಂತನ ಮಂಥನ ಸಂವಾದಗಳನ್ನು ಕೇಳಿ ನೋಡಿ ಆನಂದಿಸಿದ ನಿಮ್ಮನ್ನು ನೆನಪಿಸುವುದೇ ನಮಗೆ ಸಂತಸದ ವಿಷಯ.ನಮ್ಮೊಂದಿಗಿರಬಹುದಾದ ಕೆಡುಕುಗಳು ಮರೆಯಾಗಲಿ. ಕಲೆಯ ಬಲೆಯ ಒಳಿತುಗಳು ಸದಾ ಅರಳಲಿ. ಯಕ್ಷಗಾನ ಬೆಳಗಿ ಬಾಳಲಿ. ಕಲೆ ಮತ್ತು ಕಲಾವಿದರ ಅಭಿವೃದ್ಧಿಗಾಗಿ ಶ್ರಮಿಸುವ ಅಪೂರ್ವ ಸಂಘಟನೆ - ‘ಯಕ್ಷಗಾನ ಕಲಾರಂಗ ಉಡುಪಿ’ ಹಾಗು ಸುಮಾರು 40 ಭಿನ್ನ ರಂಗಕೃತಿಗಳನ್ನು ನಿರ್ಮಿಸಿ ಸದಾ ಕ್ರಿಯಾಶೀಲವಾಗಿರುವ ರಂಗ ಪ್ರಯೋಗದ ಸಂಘಟನೆ ಸಮೂಹ ಉಡುಪಿ - ನಿಮ್ಮ ನೆರವಿನ ನಿರೀಕ್ಷೆಯಲ್ಲಿ.
| ಕಲಾವಿದರು - ಕೆ ಜೆ ಗಣೇಶ್ ಕೆ ಜೆ ಕೃಷ್ಣ ನೀಲಾವರ ಮಹಾಬಲ ಶೆಟ್ಟಿ ಮುರಳಿ ಕಡೆಕಾರ್ ಡಾ। ವಸುಂಧರಾ ದೊರೆಸ್ವಾಮಿ ಭ್ರಮರಿ ಶಿವಪ್ರಕಾಶ್. |
| - ಉದ್ಯಾವರ ಮಾಧವ ಆಚಾರ್ಯ ಜಯಂತಿ ಮಾಧವ ಆಚಾರ್ಯ 6-1-82 ಸಿ ಸಿರಿಮನೆ ಚಿಟ್ಪಾಡಿ, ಉಡುಪಿ. 576101 ಕರ್ನಾಟಕ, ಭಾರತ. |
(ಇನ್ಫೋ ವಾರ್ತೆ)
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications