‘ಕನ್ನಡದ ಕಣ್ವ’ನ ನೆನೆಯುತ್ತಾ ... ಕಾರಿಹೆಗ್ಗಡೆ ಮಗಳಿಗೊಂದು ಹನಿ...
-
ರೋಹಿಣಿ,
Philly.
[email protected]
ಪಡುವ
ದಿಬ್ಬದ
ಗೌಡನೊಬ್ಬನು
ಬಿಡದೆ
ತೊರೆಯನ
ಕೂಗಿಕೊಡನು;
‘ತಡೆಯದೀಗಲೆ
ಗಡುವ
ಹಾಯಿಸು,
ಕೊಡುವೆ
ಕೇಳಿದ
ಹೊನ್ನನು’
‘ಆರು
ನೀವೀ
ಕರುಗಿ
ಮೊರೆಯುವ
ನೀರ
ಕಾಯಲ
ಹಾಯುವವರು?’
‘ಪಡುವ
ದಿಬ್ಬದ
ಗೌಡ
ನಾನೀ
ಮಡದಿ
ಕಾರಿಯ
ಕುವರಿಯು’
Campbell ನ ಕೃತಿಯ ಪಾತ್ರಗಳ ಪ್ರವೇಶ-
A
chieftain
to
the
highlands
bound,
Cries,"Boatman,
do
not
tarry!
And
Ill
give
thee
a
silver
pound
To
row
us
over
the
ferry!"
"Now,who
be
ye,would
cross
lochgyle,
This
dark
and
stormy
weather?"
"O,Im
the
chief
of
Ulvas
isle,
and
this,
Lord
Ullins
daughter,
ಯುವ ಜೋಡಿಯ ಆತಂಕದ ಛಾಯೆ, ಬಂದೆರಗಬಹುದಾದ ಆಪತ್ತಿನ ಸುಳಿವು, ಮೊರೆಯುವ ಸಾಗರವನ್ನು ದಾಟುವ ಪ್ರಮೇಯವೇನೋ ಎಂಬ ಅಂಬಿಗನ ಕುತೂಹಲ... ಎಲ್ಲ ಭಾವನೆಗಳು ಮೂಲದಲ್ಲಿರುವಂತೆಯೇ ಅಚ್ಚುಕಟ್ಟಾಗಿ ಬಿಂಬಿತವಾಗಿದೆ. ಆದರೆ, ಬೆಚ್ಚನೆಯ ಗೂಡಿನಲ್ಲಿರಬೇಕಾದ ಹಕ್ಕಿಗಳು ಆ ಭಯಂಕರ ರಾತ್ರಿಯಂದು ಕಡಲ ತೀರಕ್ಕೆ ಪಲಾಯನಗೈದದ್ದಾದರೂ ಏಕೆ? ಬಲವಾದ ಕಾರಣವಿಲ್ಲದಿಲ್ಲ.
And
fast
before
her
fathers
men
Three
days
we
have
fled
together,
For
should
he
find
us
in
the
glen,
My
blood
will
stain
the
heather,
His
Horsemen
hard
behind
us
ride;
Should
they
our
steps
discover,
Then
who
will
cheer
my
bonny
bride
When
they
have
slain
her
lover?"
ಇದೇ ಅಗಲಿಕೆಯ ಭಯ, ವಿರಹಿಣಿ ಕಾಂತೆಯ ಬಗ್ಗೆ ಕಾಳಜಿಯನ್ನು ಪಡುವ ದಿಬ್ಬದ ಗೌಡ ವ್ಯಕ್ತಪಡಿಸುವ ರೀತಿ-
‘ಓಡಿ
ಬಂದೆವು
ಮೂರು
ದಿವಸ;
ಜಾಡ
ಹಿಡಿದು
ಹಿಂದೆ
ಬಂದರು
ನಮ್ಮನೀ
ಕಣಿವೆಯಲಿ
ಕಂಡರೆ
ಚಿಮ್ಮಿ
ಹರಿವುದು
ನೆತ್ತರು.
ಹತ್ತಿ
ಕುದುರೆಯ
ತರುಬಿ
ಬರುವರು,
ಮುತ್ತಿಕೊಂಡರೆ
ನನ್ನ
ಕೊಲುವರು;
ಘೋರ
ದುಃಖದ
ನಾರಿಯನು
ಬಳಿ
-ಕಾರು
ನಗಿಸಲು
ಬಲ್ಲರು?’
ಅಂಬಿಗನೂ ಸಹ ಎಲ್ಲರಂತಲ್ಲ ; ಇವರ ಪ್ರೇಮವನ್ನು ಸಲುಹಲು ತನ್ನ ಜೀವವನ್ನೇ ಪಣಕ್ಕಿಡುತ್ತಾನೆ!
Ill
go,
my
chief...
Im
ready
;
It
is
not
for
your
silver
bright;
But
for
your
winsome
lady;
‘ಬೇಗ
ಜೀಯಾ,
ಓಡ
ತರುವೆನು
ಸುಡಲಿ
ಹೊನ್ನು,
ಬೆಡಗಿ,
ನಿನ್ನೀ
ಮಡದಿಗೋಸುಗ
ಬರುವೆನು.’
ಎಂಥ ಧೈರ್ಯ, ಏನು ಔದಾರ್ಯ!!
So,though
the
waves
are
raging
white,
Ill
row
you
oer
the
ferry
‘ಕಡಲು
ನೊರೆಗಡೆದೆದ್ದು
ಕುದಿಯಲಿ
ಗಡುವ
ಹಾಯಿಸಿಬಿಡುವೆನು’
ಯಾರೋ ಅಪರಿಚಿತರಿಗಾಗಿ ಎಂಥ ಆತ್ಮಾರ್ಪಣೆ! ಆದರೆ, ಆ ರುದ್ರರಾತ್ರಿಯಂದು ಕಾರಿಹೆಗ್ಗಡೆ ಮಾತ್ರ ಅಲ್ಲ ; ಪ್ರಕೃತಿಯೂ ಇವರ ವಿರುದ್ಧವಿತ್ತು.
The
boat
has
left
a
stormy
land,
A
stormy
sea
before
her,
When,
O!
too
strong
for
a
human
hand,
The
tempest
gatherd
oer
her.
And
still
they
rowd
amidst
the
roar
Of
waters
fast
prevailing
;
Lord
Ullin
reachd
that
fatal
shore,
His
wrath
was
changed
to
wailing.
ಹೀಗೆ ಮುಂದಿನ ಸಾಲುಗಳಲ್ಲಿ ವಿವರಿಸಲ್ಪಡುವ ಪ್ರಕೃತಿಯ ಪ್ರಳಯ ನರ್ತನವನ್ನು ಬಿ.ಎಂ.ಶ್ರೀ-
ತೂರು
ಗಾಳಿಗೆ
ಕಡಲು
ಕುದಿಯಿತು,
ನೀರ
ದೆವ್ವಗಳರಚಿಕೊಂಡುವು.
ಹೆಪ್ಪು
ಮೋಡದ
ಹುಬ್ಬುಗಂಟಿಗೆ
ಕಪ್ಪಗಾದವು
ಮುಖಗಳು.
ಕೆರಳಿ
ಕೆರಳಿ
ಗಾಳಿ
ಚಚ್ಚಿತು;
ಇರುಳ
ಕತ್ತಲೆ
ಕವಿದು
ಮುಚ್ಚಿತು;
ಕಣಿವೆಯಿಳಿವರ
ಕುದುರೆ
ಕತ್ತಿಯ
ಖಣಿ
ಖಣಿ
ಧ್ವನಿ
ಕೇಳಿತು!
ಎಂದು ವಿವರಿಸುತ್ತಾರೆ; ಕವಿತೆಯ ಹರಿವು, ತಾಳಕ್ಕೆ ಚ್ಯುತಿಯಾಗದಂತೆ. ಸಂದರ್ಭದ ಭೀಕರತೆ ತಗ್ಗದಂತೆ. ಒಂದೆಡೆ ಶರಧಿಯ ಅಟ್ಟಹಾಸ, ಚಂಡಮಾರುತ; ಮತ್ತೊಂದೆಡೆ ತಂದೆಯ ಕೆಂಗಣ್ಣು. ಎರಡನೆಯದೇ ಭೀಷಣವೆನಿಸಿತೇನೋ....
Ill
meet
the
raging
skies,
But
not
an
angry
father,
‘ಮುಳಿದ
ಮುಗಿಲ
ತಡೆಯಬಲ್ಲೆ
,
ಮುಳಿದ
ತಂದೆಯ
ತಡೆಯೆನು’
ಕಡಲ ಆರ್ಭಟ, ಬಿರುಗಾಳಿಗಳ ನಡುವೆ ತರಗೆಲೆಯಾದ ಕರುಳ ಬಳ್ಳಿಯನ್ನು ಕಂಡು ಕಾರಿಹೆಗ್ಗಡೆಯ ಉಗ್ರ ಕೋಪ ಶಮನವಾಗುತ್ತದೆ. ಅವಳ ಜೊತೆಗಾರನನ್ನು ಒಪ್ಪುವುದಾಗಿ ಮಾತು ಕೊಟ್ಟು ಮನೆಗೆ ಮರಳಲು ಬೇಡುತ್ತಾನೆ. ಯುವತಿ ಆಸರೆಗಾಗಿ ಒಂದು ಕೈ ಚಾಚುತ್ತಾಳೆ...
One
lovely
hand
she
stretchd
for
aid,
And
one
was
round
her
lover.
ಒಂದು
ಕೈ
ನೀಡಿದಳು
ನೆರವಿಗೆ,
ಒಂದು
ತಬ್ಬಿತು
ನಲ್ಲನ!
ಎಲ್ಲೂ ಪ್ರೀತಿಯ ಬಗ್ಗೆ ಸುದೀರ್ಘ ಭಾಷಣಗಳಿಲ್ಲ ; ಇರುವುದು ಕೊನೆಗಾಲದಲ್ಲೂ ಜೊತೆಗೆ ನಿಲ್ಲುವ ಒಂದು ಮೌನ ಭರವಸೆ ಮಾತ್ರ! ಆದರೆ ಕಡಲು ತಂದೆಯಷ್ಟು ಕ್ಷಮಾಶೀಲವಾಗಲಿಲ್ಲ.
Twas
vain;
the
loud
waves
lashd
the
shore,
Return
or
aid
preventing
;
The
waters
wild
went
over
his
child,
And
he
was
left
lamenting.
ಮರಳಬಹುದೆ?
ಹೋಗಬಹುದೆ?
ಕರೆಯ
ತೆರೆಯಪ್ಪಳಿಸಿ
ಹೊಯ್ದು
ಮರಳಿ
ಹೋದುವು
ಮಗಳ
ಮೇಲೆ
ಕೊರಗಿನಲಿ
ಅವನುಳಿದನು.
ತಂದೆ ಮಗಳ ಮನಸ್ಸನ್ನರಿಯುವ ವೇಳೆಗೆ ಬಹಳ ತಡವಾಗಿಹೋಗಿತ್ತು. ಅಷ್ಟರಲ್ಲಾಗಲೇ ಮಗಳು ನೆನಪಾಗಿ, ಅವಳ ಕನಸು ಕಥೆಯಾಗಿ, ಶೋಕತಪ್ತ ಕಾರಿಹೆಗ್ಗಡೆ ಏಕಾಂಗಿಯಾಗಿ ಹೋಗಿದ್ದನು.
ಈ ದಂತಕಥೆಯ ತವರು ಸ್ಕಾಟ್ಲೆಂಡ್ನ ಒಂದು ಚಿಕ್ಕ ಊರು. ಆದರೆ Lord Ullins daughter-Chief of Ulvas isle ಕ್ರಮವಾಗಿ ಕಾರಿಹೆಗ್ಗಡೆಯ ಮಗಳು-ಪಡುವ ದಿಬ್ಬದ ಗೌಡರಾದಾಗ ಕರುನಾಡ ಕರಾವಳಿಯಲ್ಲಿ ನಿನ್ನೆ-ಮೊನ್ನೆ ನಡೆದ ಕಥೆಯೇನೊ ಎನಿಸುವಷ್ಟರ ಮಟ್ಟಿಗೆ ಹೃದಯಸ್ಪರ್ಶಿಯಾಗುತ್ತದೆ. ಕನಸು ಇನ್ನೇನು ಕೈಗೂಡಿತು ಎನ್ನುವಾಗಲೇ ಅಕಾಲಿಕ ಮೃತ್ಯುವಿಗೆ ತುತ್ತಾದ ಯುವ ಜೋಡಿಗಾಗಿ ಮನ ವ್ಯಾಕುಲಗೊಳ್ಳುತ್ತದೆ. ವರುಷಗಳ ನಂತರವೂ ನೆನಪಿನಂಗಳದಲ್ಲಿ ಹಸಿರಾಗುಳಿಯುವುದು ಈ ಜೋಡಿಯ ಪ್ರೇಮದ ಉತ್ಕಟತೆ, ತೊರೆಯನ ಮನೋವೈಶಾಲ್ಯತೆ, ಆ ಪ್ರಳಯಾಂತಕ ರಾತ್ರಿ, ಕಾರಿಹೆಗ್ಗಡೆಯ ವೇದನೆ, ಪಶ್ಚಾತ್ತಾಪ....ಮೂಲದಲ್ಲಿರುವ ಹಾಗೆಯೇ.
ಭಾವನೆಗಳಿಗೆ ಭಾಷೆಯ ಹಂಗೇಕೆ? ಭಾವನೆಗಳೇ ಜಾಗತಿಕ ಭಾಷೆ. ಕಾಲ, ದೇಶ, ಭಾಷೆ, ಪಾತ್ರಗಳು ಭಿನ್ನ ಭಿನ್ನವಾದರೂ ಎಲ್ಲರ ಕಥೆ-ವ್ಯಥೆ ಒಂದೇ. ಅಲ್ಲಿಗೆ ಬಿ.ಎಂ.ಶ್ರೀ ಅವರ, ‘ಇವಳ ಸೊಬಗನವಳು ತೊಟ್ಟು ನೋಡಬಯಸಿದ, ಅವಳ ತೊಡಿಗೆ ಇವಳಿಗಿಟ್ಟು ಹಾಡಬಯಸಿದ’ ರೀತಿಯಲ್ಲಿ ಕಾಣುವುದು ಅನನ್ಯತೆ, ಅನ್ಯೋನ್ಯತೆ. ಇಷ್ಟೆಲ್ಲ ಓದಿದ ಕನ್ನಡಿಗನ ಸಂವೇದನಾಶೀಲ ಹೃದಯ ಆರ್ದ್ರವಾಗಿ, ಕಂಗಳು ಒಂದು ಬಿಂದು ಕಂಬನಿಮಿಡಿದರೆ, ಕವಿಗೆ ಅದಕ್ಕಿಂತ ಮಿಗಿಲಾದ ಸಾರ್ಥಕತೆ ಬೇರೊಂದಿದೆಯೇ?