ಪ್ರೀತಿಯ ಸಾರದ ಗುಟ್ಟು
ಇನ್ನು ಡೇಟ್ (ಪ್ರೀತಿ?) ಮಾಡುವುದಕ್ಕೆ ಇವರುಗಳು ಸಂಗಾತಿಗಳನ್ನು ಆರಿಸಿಕೊಳ್ಳುವ ರೀತಿಗೂ ನಮ್ಮ ಗಂಡು ಹೆಣ್ಣಿನ ಹುಡುಕಾಟಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಹುಡುಗನಾದರೆ, ಲಾಯರ್ ಅಥವಾ ಡಾಕ್ಟರ್ ಆಗಿದ್ದರೆ, ಪ್ರೀತಿ ಪ್ರೇಮ ಸುಲಭವಾಗಿ ಹುಟ್ಟುತ್ತದೆ. ಇಲ್ಲ ಕೊನೆ ಪಕ್ಷ ಒಳ್ಳೆ ಕೆಲಸದಲ್ಲಿದ್ದು ದುಬಾರಿ ಕಾರು ಓಡಿಸುವವನಾಗಿದ್ದರೆ ಪ್ರೀತಿಗೆ ರಹದಾರಿ ಸುಲಭ. ಇವೇನೂ ಆಗಿರದೆ ಪ್ರೇಮ ಭಿಕ್ಷೆ ಯಾಚಿಸಿದವನಿಗೆ ‘ಲೂಸರ್’ ಎಂಬ ಪಟ್ಟ ಕಟ್ಟಿಟ್ಟದ್ದೆನ್ನಿ. ಒಟ್ಟಿನಲ್ಲಿ ನಮ್ಮಲ್ಲಿನ ಮದುವೆಯ ದೊಂಬರಾಟಕ್ಕೂ, ಇಲ್ಲಿನವರ ಪ್ರೇಮದಾಟಕ್ಕೂ ನನಗೆ ಹೆಚ್ಚಿನ ವ್ಯತ್ಯಾಸವೇನೂ ಕಂಡುಬರದ್ದಕ್ಕೋ ಏನೋ, ವಾಲೆಂಟೈನ್ ದಿನ ನನ್ನನ್ನು ರೋಮಾಂಚನಗೊಳಿಸಿವ ಬದಲು ನನ್ನ ಸುತ್ತಣ ಸಂಸ್ಕೃತಿಯಾಂದರ ನಿರ್ದಿಷ್ಟ ಹಬ್ಬವೊಂದರ ಆಚರಣೆಯಲ್ಲಿ ಭಾಗಿಯಾಗುತ್ತಿದ್ದೇನೆ ಅನ್ನುವ ಭಾವ ಹುಟ್ಟಿಸುತ್ತಿತ್ತು.
ಇಲ್ಲಿನವರ ಬದುಕಿನಲ್ಲಿನ ಪ್ರೇಮಕ್ಕೆ ಅರ್ಥವಿಲ್ಲವೆಂಬುದಾಗಲೀ, ನಮ್ಮ ಮದುವೆಯ ರೀತಿಯನ್ನು ಸಮರ್ಥಿಸಿಕೊಳ್ಳುವ ಉದ್ದೇಶವಾಗಲೀ ನನಗೆ ಖಂಡಿತಾ ಇಲ್ಲ. ಹೆಣ್ಣಿನ ವೈಯಕ್ತಿಕ ಬದುಕಿಗೆ ಹೆಚ್ಚು ಸ್ವಾತಂತ್ರ್ಯವಿತ್ತಿರುವ ಈ ಸಮಾಜದ ರೀತಿಯನ್ನು ಖಂಡಿತಾ ಮೆಚ್ಚಿಕೊಳ್ಳಲೇಬೇಕು. ಆದರೆ, ಹೊರ ಸಂಸ್ಕೃತಿಯಾಂದರ ಒಳ್ಳೆಯದಷ್ಟನ್ನೇ ಅನುಸರಿಸಬೇಕೆಂದುಕೊಂಡ ನನಗೆ ಇಲ್ಲಿನವರ ಪ್ರೀತಿ ಪ್ರೇಮಗಳಿಗಿಂತ ಹೆಚ್ಚು ನಮ್ಮವರ ಬದುಕಿನಲ್ಲಿ ಪ್ರೇಮ ಪ್ರಣಯವನ್ನು ಕಂಡಿದ್ದೇನೆ ಅನ್ನಿಸಿದಾಗೆಲ್ಲ, ಬೆಂಗಳೂರು, ಮೈಸೂರಿನಿಂದ ಬರುವ ವಾಲೆಂಟೈನ್ ಕಾರ್ಡುಗಳ ಟೊಳ್ಳುತನದ ಬಗ್ಗೆ ದುಃಖವಾಗುತ್ತದೆ ಅಷ್ಟೇ. ಮೊನ್ನೆ ಅನಂತಮೂರ್ತಿಯವರೊಡನೆ ಎಸ್ತರ್ ಪತ್ರಿಕಾಲಯದ ಮುಂದೆ ಪ್ರತಿಭಟಿಸಿ ಧರಣಿಗೆ ಕುಳಿತ ಚಿತ್ರ ನೆನೆಯುತ್ತಲೇ ನಮ್ಮವರ ಪ್ರೀತಿಯ ಬಗ್ಗೆ ಇನ್ನಷ್ಟು ಕೋಡು ಮೂಡಿ ಬಂದಿತ್ತು. ಕಷ್ಟದಲ್ಲೂ ಸುಖದಲ್ಲೂ ಭಾಗಿಯಾಗಿ ಬದುಕುವ ನಮ್ಮ ಸಂಸ್ಕೃತಿಯ ಜೋಡಿಗಳಿಗೆ ಸರಿಯಾಗಿ ನಿಲ್ಲಲಾರದ ಬೇರೊಂದು ಸಂಸ್ಕೃತಿಯ ಆಚರಣೆಗೇಕೆ ಜೋತು ಬೀಳಬೇಕೆಂಬ ಭಾವ ಸಹಾ ಆಗ ಬರುತ್ತದೆನ್ನಿ...! ಹಾಗಂತ ಮರೆಯೋ ಹಾಗಿಲ್ಲ, ನನ್ನ ಪುಟ್ಟ ಪುಟ್ಟಿಗೆ, ಎರಡು ಮಕ್ಕಳ ತಾಯಿಗೆ, ಅವಳ ನನ್ನ ಮೇಲಿನ ಭಾರತೀಯ ಪ್ರೇಮಕ್ಕೆ ಕೃತಜ್ಞತೆ ಭರಿತ ನನ್ನ ಪ್ರೇಮದ ಅರಿವು ಮಾಡಿಸುವ ಕೆಲಸವಿನ್ನೂ ಇದೆ. ಏನಾದರೂ ‘ಒರಿಜಿನಲ್ ಐಡಿಯಾ’ ಇದ್ದರೆ ದಯವಿಟ್ಟು ಹೇಳಿ.
***
ಪ್ರೀತಿಯ ಸಾರದ ಗುಟ್ಟು
ತಾನು ಬಡವ ಆಕೆ ಬಡವಿಯಾದರೂ ಪ್ರೀತಿಸುವ ಗಂಟು
ಮರೆಯದಿರಿಂದು ವ್ಯಾಲೆಂಟೈನ್ ಎಂಬೀ ಥಳುಕಿನ ದಿನಗಳ ಅಂಟು
ಬದುಕು ಕಸಕಿ ಹೊಸಕಿದಾಗ, ‘ನೀ ಹೀಂಗ ನೋಡ ಬ್ಯಾಡ..’ ಎಂದ ನಂಟು
ಮುಪ್ಪಿನ ನೆರಿಗೆಗಳನೆ ಬೆಸೆದುಕೊಂಡು ಬೊಚ್ಚು ಬಾಯಲೆ ಮುತ್ತಿನ ತುತ್ತನಿಟ್ಟು
ನಡೆದು ಬಂದ ದಾರಿಯಲ್ಲೆಲ್ಲ ಕೆಂಪು ಗುಲಾಬಿಯನ್ನೆ ಆಯ್ದುಕೊಂಡು
ಇಲ್ಲ ಜಾಜಿ ಮಲ್ಲಿಗೆ ಕೆಂಪು ಕೇದಿಗೆ ಸಂಪಿಗೆಯ ಮೊಗ್ಗನಷ್ಟೆ ಕೊಯ್ದು
ಹಾದಿಯಲ್ಲಿನ ಕಲ್ಲು ಮುಳ್ಳುಗಳ ನೋವನ್ನೆಲ್ಲ ಮರೆತು
ಚಂದ್ರ ಮಂಚದ ಚಕೋರಿಯನ್ನ, ಕಾಲದುದ್ದಗಲಕ್ಕು ನೆನೆದು
ಚಂದ್ರನಿರದ ರಾತ್ರಿಗಳಿಗೆ ಬೆಳಕಾಗಿ ನೆನೆದುಕೊಂಡು
ಹರಿದುಬಂದ ಸಮಯಗತಿಗಿದೋ ಓತಪ್ರೋತ ಪ್ರೀತಿ ಇತ್ತು
ಡೇಟು ಗೀಟುಗಳ ಭರಾಟೆಗೂ ಮೊದಲೇ
ಕಾರು ಬಾರುಗಳ ನಾಟಕದಾಟಕ್ಕು ಮೊದಲೇ
ಕಣ್ಣ ನೋಟದಲ್ಲೆ ಪ್ರೇಮದ ಸಂಚು ಹೊತ್ತು
ಸೆರಗಿನಂಚಿನಲೆ ಪ್ರಿಯಕರಗೆ ಬುತ್ತಿ ಕಟ್ಟಿಟ್ಟು
ಚಂದ್ರ ಮೂಡುವವರೆಗೆ ಕೈಯ ಹೂ ಮುತ್ತನಿತ್ತು
ಹುಟ್ಟು ಸಾವಿನವರೆಗೆ ಪ್ರೇಮಕ್ಕೆ ತಾಳಿ ಕಟ್ಬಿಟ್ಟು
ಅಮರ ಪ್ರೇಮಕ್ಕೆ ಕೊಟ್ಟ ಅರ್ಥ ಕುಂಕುಮದ ಬೊಟ್ಟು
ನೀ ಹೋದೆಡೆ ನಾ ಬರುವೆನೆಂಬ ಪಾಶದ ಪಟ್ಟು
ಸಹಸ್ರಾರು ವರ್ಷಗಳಿಗು ನಡೆಸಿರುವವರ ಗುಟ್ಟು
ಹೊಸನೀರ ಕೆಸರಿನಲ್ಲಿ ಮರೆಯದಿರೋ ಲೋ ಪುಟ್ಟು
ಐ ಲವ್ ಯು ಎಂಬುದಷ್ಟೆ ಪ್ರೀತಿಯಲ್ಲವೋ ಕಿಟ್ಟು
ಕಲಿತುಕೊಳ್ಳೋ ನಿನ್ನ ಪುಟ್ಟಿಗಾಗಿ ತಾತ ತಾತಿಯರ ಪಟ್ಟು
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications