ಸಾಹಿತ್ಯೋತ್ಸವದ ಸ‘ರಸ’ ಘಳಿಗೆಗಳು...
- ವರದಿ: ಶ್ರೀವತ್ಸ ಜೋಶಿ ; ವಾಷಿಂಗ್ಟನ್ ಡಿಸಿ.
[email protected]
- ‘ಸಮಯಪಾಲನೆ’ ಎನ್ನುವುದರ ವ್ಯಾಖ್ಯೆ ಮತ್ತು ಬೆಲೆಯನ್ನು ಅರಿಯಬೇಕೆಂದವರು ಈ ಕಾರ್ಯಕ್ರಮ ಹೇಗೆ ನಡೆಯಿತೆಂದು ನೋಡಬೇಕಿತ್ತು. ದಿನವಿಡೀ ಇಷ್ಟೊಂದು ಕಾರ್ಯಕ್ರಮಗಳಿದ್ದರೂ ಯಾವುದೊಂದೂ ಆರಂಭವಾಗುವುದರಲ್ಲಿ ಒಂದು ನಿಮಿಷವೂ ತಡವಾಗಲಿಲ್ಲ, ನಿಗದಿತ ಅವಧಿಗಿಂತ ಒಂದು ನಿಮಿಷವೂ ವಿಸ್ತರಿಸಲಿಲ್ಲ !
- ವೇದಿಕೆಯ ಮೇಲೆ ಸಾಹಿತ್ಯಪ್ರಸ್ತುತಿ ಪಡಿಸಿದವರೆಲ್ಲ , ಕಾರ್ಯಾಗಾರಗಳನ್ನು ನಡೆಸಿದವರೆಲ್ಲ ನಿನ್ನೆಯ ಕಾರ್ಯಕ್ರಮದಿಂದಾಗಿ ‘ಅಷ್ಟಾವಧಾನ ಕಲೆ’ಯ ಎಂಟನೇ ಒಂದಂಶವನ್ನು ಕರಗತಮಾಡಿಕೊಂಡರೆನ್ನಲಡ್ಡಿಯಿಲ್ಲ. ಏಕೆಂದರೆ ನಿಗದಿತ ಸಮಯಸೂಚಕ ಜಯರಾಮ ಉಡುಪರ ‘ಘಂಟಾನಾದ’ದತ್ತ ಗಮನವಿಟ್ಟೇ ಮಾತನಾಡಬೇಕಾದ ಪರಿಸ್ಥಿತಿ ಪ್ರತಿಯಾಬ್ಬರಿಗೂ!
- ಒಪ್ಪೊತ್ತು ಉಂಡವ ಯೋಗಿ, ಎರಡ್ಹೊತ್ತು ಉಂಡವ ಭೋಗಿ, ಮೂರ್ಹೊತ್ತು ಉಂಡವ ರೋಗಿ, ನಾಲ್ಕು ಸಲ ಊಟ ಮಾಡಿದವನನ್ನು ಹೊತ್ಕೊಂಡ್ಹೋಗಿ... ಅಂತ ಒಂದು ನಾಣ್ನುಡಿ ಇದೆ. ಸಾಹಿತ್ಯೋತ್ಸವದ ಇಡೀದಿನದ (ಮೂರು ಹೊತ್ತುಗಳ) ಊಟೋಪಚಾರವನ್ನು ಶುಚಿರುಚಿಯಾಗಿ ಹಿತಮಿತವಾಗಿ ಪೂರೈಕೆ ಮಾಡಿದ್ದು ‘ಯೋಗಿ’ ಕೇಟರರ್ಸ್ ! ಅತ್ಯಂತ ಅಚ್ಚುಕಟ್ಟಿನ ವ್ಯವಸ್ಥೆಯ ಹಿಂದೆ ಫಿಲಡೆಲ್ಫಿಯಾ ಪ್ರದೇಶದ ಕೆಲ ಕನ್ನಡಿಗ ಸ್ವಯಂಸೇವಕರ ನಿಷ್ಠೆಯೂ ಇತ್ತು.
- ಸಾಹಿತ್ಯೋತ್ಸವ ನಡೆದ ವಿಲನೋವಾ ವಿಶ್ವವಿದ್ಯಾಲಯದ ಸೈಂಟ್ ಮೇರಿ ಸಭಾಂಗಣಕ್ಕೆ ಡ್ರೆೃವಿಂಗ್ ಡೈರಕ್ಷನ್ಸ್ ಸರಿಯಾಗಿ ಇಲ್ಲದ್ದರಿಂದ ದೂರದೂರುಗಳಿಂದ ಆಗಮಿಸಿದ ಹೆಚ್ಚಿನವರು ಸ್ವಲ್ಪ ಹೊತ್ತು ‘ವಿಲನೋವಾ ಸೈಟ್ ಸೀಯಿಂಗ್’ ನಂತರವೇ ಸಮಾರಂಭದ ಸ್ಥಳಕ್ಕೆ ಬಂದು ತಲುಪಿದ ಉದಾಹರಣೆಗಳು ಅನೇಕ (ಈ ವರದಿಗಾರನೂ ಸೇರಿದಂತೆ!)
- ಐಯೋವಾದಿಂದ ಬಂದಿದ್ದ ಕೃಷ್ಣಶಾಸ್ತ್ರಿಗಳು ಅಮೆರಿಕನ್ನಡಿಗ ಲೇಖಕರ ಪುಸ್ತಕಗಳ ಮಳಿಗೆಯನ್ನಿಟ್ಟು ರಿಯಾಯತಿ ದರದಲ್ಲಿ ಕನ್ನಡ ಪುಸ್ತಕಗಳೊಂದಷ್ಟನ್ನು ಮಾರುವುದರಲ್ಲಿ ಯಶಸ್ವಿಯಾದರು. ಉತ್ಸವದಲ್ಲಿ ಬಿಡುಗಡೆಯಾದ ‘ಕುವೆಂಪು ಸಾಹಿತ್ಯ ಸಮೀಕ್ಷೆ’ ಪುಸ್ತಕದ ಪ್ರತಿ, ಆಕರ್ಷಕ ಕೈಚೀಲದಲ್ಲಿ ‘ರಿಜಿಸ್ಟ್ರೇಷನ್ ಕಿಟ್’ ನಲ್ಲೇ ಕುಟುಂಬಕ್ಕೊಂದರಂತೆ ಕೊಡಲ್ಪಟ್ಟಿತ್ತು.
- Very focussed audience for the entire proceedings. ಹಾಗಾಗಿ ಜನರಲ್ ಲೋಕಾಭಿರಾಮ ಹರಟೆಗಳ ಗುಂಪುಗಳು (ಸೀರೆ, ಒಡವೆ, ಲೇ-ಆಫ್ಸ್, ಇಕಾನಮಿ, ಸ್ಟಾಕ್ಸ್, ಟೆರರಿಸ್ಟ್ಸ್, ಎಲೆಕ್ಷನ್ಸ್, ಇಂಡಿಯಾ ವಿಸಿಟ್... ಎಟ್ಸೆಟ್ರಾ) ಕಂಡುಬರುತ್ತಲೇ ಇರಲಿಲ್ಲ . ಒಂದು ನಮೂನೆಯಲ್ಲಿ ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರು ಮಾತ್ರ ಸೇರಿದಂತೆ ವಿಲನೋವಾದಲ್ಲಿ ಸಾಹಿತ್ಯಾಸಕ್ತರು ಮಾತ್ರ! ‘ಜಾತ್ರೆ’ಯ ಗೌಜಿ ಗದ್ದಲವಿಲ್ಲ.
- ಸಾಹಿತ್ಯ ಮತ್ತು ಲಲಿತಕಲೆಗೇ ಮೀಸಲಾದ ವಾಷಿಂಗ್ಟನ್ ಡಿಸಿ ಪ್ರಾಂತದ ಸಂಸ್ಥೆ ‘ಭೂಮಿಕಾ’ ವಸಂತ ಸಾಹಿತ್ಯೋತ್ಸವದಲ್ಲಿ ಏಕೆ ಕಾಣಿಸಿಕೊಳ್ಳಲಿಲ್ಲ !? ಎಂಬುದು ಕೆಲ ಸಾಹಿತ್ಯಾಸಕ್ತರ ಕುತೂಹಲ. ಭೂಮಿಕಾ ಇಲ್ಲದಿದ್ದರೇನಂತೆ, ರಾಜಧಾನಿಯ ಹೆಮ್ಮೆಯ ಕನ್ನಡಸಂಘ ‘ಕಾವೇರಿ’ ಸಾಹಿತ್ಯೋತ್ಸವದ ವಿವಿಧ ಮಜಲುಗಳಲ್ಲಿ ಸಕ್ರಿಯ ಪಾತ್ರವಹಿಸಿತ್ತು !
- ಸಾಹಿತ್ಯದ ಅಂಥಾ ಗಂಧಗಾಳಿಯೇನೂ ಇಲ್ಲದ, ಕೇವಲ ‘ಸ್ಪೌಸ್ಗೆ ಕಂಪ್ನಿ ಕೊಡೋಕೊಸ್ಕರ ಮಾತ್ರ ಭಾಗವಹಿಸಿದ್ದ’ವರಿಗೂ ಒಂಚೂರೂ ಬೋರ್ ಎನಿಸದಂತೆ ಕಾಲಕ್ಷೇಪವಾದದ್ದು ಈ ಸಾಹಿತ್ಯೋತ್ಸವದ ಇನ್ನೊಂದು ಅಗ್ಗಳಿಕೆ!
- ಒಟ್ಟಿನಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಮೈತುಂಬಿಸಿಕೊಂಡು ಅದರಲ್ಲಿ ಮುಳುಗಿ ತೇಲುವ ಕಾರ್ಯಕ್ರಮ’ ಎಂಬ ಆಯೋಜಕರ ಮಾತುಗಳು ನೂರಕ್ಕೆ ನೂರು ಪಾಲು ಸತ್ಯದವು. ಇಂಥದೊಂದು ಉತ್ಸವ ವರ್ಷಕ್ಕೊಮ್ಮೆ ಒಂದು ದಿನ ಸ್ವಾಗತಾರ್ಹ ಮತ್ತು ಅಪೇಕ್ಷಣೀಯ.
ಪೂರಕ ಓದಿಗೆ-
ವಸಂತನ ರುಜುವಿನಲ್ಲಿ ಸಾಹಿತ್ಯೋತ್ಸವ ಫಿಲಡೆಲ್ಫಿಯಾದಲ್ಲಿ ಕನ್ನಡದ ವೈಭವ !
ಕುವೆಂಪು ಕೃತಿಗೆ ಪ್ರಭುಶಂಕರರ ಸಾಕ್ಷಿ
ವಸಂತ ಸಾಹಿತ್ಯೋತ್ಸವದ ಚಿತ್ರಗಳು
More From
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?













Click it and Unblock the Notifications