ಕೆ.ಸಿ.ಎ. ಅಂಗಳದಲ್ಲಿ ಯುಗಾದಿ ಬೆಳದಿಂಗಳು
ಎಂದಿನಂತೆ ಈ ಬಾರಿಯೂ ಯುಗಾದಿಗೆ ಕೆ. ಸಿ. ಎ. ಜೋರಾಗಿ ಅಣಿಯಾಗಿದೆ. ಏಪ್ರಿಲ್ 19ನೇ ತಾರೀಕು ಯಥಾ ಪ್ರಕಾರ ಮಾಲಿಬು ದೇಗುಲದಲ್ಲಿ ಎಳ್ಳು- ಬೆಲ್ಲ ಮೆಲ್ಲಲು ರೆಡಿಯಾಗಿ. ದಿನ ಇನ್ನೂ ದೂರವಿದೆ ಎಂದು ತಣ್ಣಗೆ ಕೂರಬೇಡಿ. ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಯುಗಾದಿ ಆಚರಣೆಗೆ ನಾನು ಬರ್ತೀನಿ ಅಂತ ಕೆ. ಸಿ. ಎ. ಅಧ್ಯಕ್ಷ ಬಿ.ಎನ್.ನಾಗರಾಜ್ ಅವರಿಗೆ ಇ- ಪತ್ರ ಕಳಿಸಿ ಅಥವಾ 714---441--1420 ನಂಬರಿಗೆ ಫೋನ್ ಮಾಡಿ. ಏಪ್ರಿಲ್ 15ರೊಳಗೆ ಈ ಕೆಲಸವನ್ನು ಮಾಡಿ ಮುಗಿಸಬೇಕಾದ್ದು ಕಡ್ಡಾಯ.
ಅವತ್ತು ಮಧ್ಯಾಹ್ನ 2 ಗಂಟೆಗೆ ಶುರುವಾಗುವ ಕಾರ್ಯಕ್ರಮದ ಆಯ್ದ ಸೆಳಕುಗಳು ಇಂತಿವೆ-
- ಸ್ಥಳೀಯ ಪ್ರತಿಭೆಗಳಿಂದ ಸಮೂಹ ಗಾಯನ.
- ಉದರ ನಿಮಿತ್ತ ರುಚಿಕಟ್ಟು ಭೋಜನವೂ ಉಂಟು. ಇದಕ್ಕೆ ನೀವು ತೆರಬೇಕಾದ ನಾಮಿನಲ್ ಹಣ ಕೇವಲ 2 ಡಾಲರ್.
- ವಾರ್ಷಿಕ ನಿಯತಕಾಲಿಕ ‘ಸಂಗಮ’ವನ್ನು ಇದೇ ದಿನ ಬಿಡುಗಡೆ ಮಾಡಲಾಗುವುದು. ನಿಮಗೂ ಒಂದು ಪ್ರತಿ ಲಭ್ಯ.
ಅಂದಹಾಗೆ, ನಿಮ್ಮ ಸದಸ್ಯತ್ವವನ್ನು ನವೀಕರಿಸಿಕೊಳ್ಳುವ ಸಮಯ ಬಂದಿದೆ. ಕೆ. ಸಿ. ಎ.ಗೆ ಚೆಕ್ಕನ್ನು ಕಳುಹಿಸಿ. ಕೆ. ಸಿ. ಎ. ವಿಳಾಸ ಇಂತಿದೆ-
KCA
Dr. Nagana Goud
PO Box 11016
Torrance, CA 90510
ಬೇವು- ಬೆಲ್ಲ , ಎಳ್ಳು- ಬೆಲ್ಲ ಮೆಲ್ಲಲು ನೀವೂ ಎಲ್ಲರೊಳಗೊಂದಾಗುವಿರಲ್ಲವೇ?
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು










Click it and Unblock the Notifications