ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೆ.ಸಿ.ಎ. ಅಂಗಳದಲ್ಲಿ ಯುಗಾದಿ ಬೆಳದಿಂಗಳು
ಎಂದಿನಂತೆ ಈ ಬಾರಿಯೂ ಯುಗಾದಿಗೆ ಕೆ. ಸಿ. ಎ. ಜೋರಾಗಿ ಅಣಿಯಾಗಿದೆ. ಏಪ್ರಿಲ್ 19ನೇ ತಾರೀಕು ಯಥಾ ಪ್ರಕಾರ ಮಾಲಿಬು ದೇಗುಲದಲ್ಲಿ ಎಳ್ಳು- ಬೆಲ್ಲ ಮೆಲ್ಲಲು ರೆಡಿಯಾಗಿ. ದಿನ ಇನ್ನೂ ದೂರವಿದೆ ಎಂದು ತಣ್ಣಗೆ ಕೂರಬೇಡಿ. ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಯುಗಾದಿ ಆಚರಣೆಗೆ ನಾನು ಬರ್ತೀನಿ ಅಂತ ಕೆ. ಸಿ. ಎ. ಅಧ್ಯಕ್ಷ ಬಿ.ಎನ್.ನಾಗರಾಜ್ ಅವರಿಗೆ ಇ- ಪತ್ರ ಕಳಿಸಿ ಅಥವಾ 714---441--1420 ನಂಬರಿಗೆ ಫೋನ್ ಮಾಡಿ. ಏಪ್ರಿಲ್ 15ರೊಳಗೆ ಈ ಕೆಲಸವನ್ನು ಮಾಡಿ ಮುಗಿಸಬೇಕಾದ್ದು ಕಡ್ಡಾಯ.
ಅವತ್ತು
ಮಧ್ಯಾಹ್ನ
2
ಗಂಟೆಗೆ
ಶುರುವಾಗುವ
ಕಾರ್ಯಕ್ರಮದ
ಆಯ್ದ
ಸೆಳಕುಗಳು
ಇಂತಿವೆ-
- ಸ್ಥಳೀಯ ಪ್ರತಿಭೆಗಳಿಂದ ಸಮೂಹ ಗಾಯನ.
- ಉದರ ನಿಮಿತ್ತ ರುಚಿಕಟ್ಟು ಭೋಜನವೂ ಉಂಟು. ಇದಕ್ಕೆ ನೀವು ತೆರಬೇಕಾದ ನಾಮಿನಲ್ ಹಣ ಕೇವಲ 2 ಡಾಲರ್.
- ವಾರ್ಷಿಕ ನಿಯತಕಾಲಿಕ ‘ಸಂಗಮ’ವನ್ನು ಇದೇ ದಿನ ಬಿಡುಗಡೆ ಮಾಡಲಾಗುವುದು. ನಿಮಗೂ ಒಂದು ಪ್ರತಿ ಲಭ್ಯ.
ಅಂದಹಾಗೆ,
ನಿಮ್ಮ
ಸದಸ್ಯತ್ವವನ್ನು
ನವೀಕರಿಸಿಕೊಳ್ಳುವ
ಸಮಯ
ಬಂದಿದೆ.
ಕೆ.
ಸಿ.
ಎ.ಗೆ
ಚೆಕ್ಕನ್ನು
ಕಳುಹಿಸಿ.
ಕೆ.
ಸಿ.
ಎ.
ವಿಳಾಸ
ಇಂತಿದೆ-
KCA
Dr.
Nagana
Goud
PO
Box
11016
Torrance,
CA
90510
ಬೇವು- ಬೆಲ್ಲ , ಎಳ್ಳು- ಬೆಲ್ಲ ಮೆಲ್ಲಲು ನೀವೂ ಎಲ್ಲರೊಳಗೊಂದಾಗುವಿರಲ್ಲವೇ?
(ಇನ್ಫೋ ವಾರ್ತೆ)
Story first published: Thursday, March 20, 2003, 5:30 [IST]