ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಭಟ್ಟರ ವರ್ಧಂತಿ
*ಶಿಕಾರಿಪುರ ಹರಿಹರೇಶ್ವರ
ದಕ್ಷಿಣ
ಕ್ಯಾಲಿಫೋರ್ನಿಯಾದ
ಪೊಮೋನಾದಲ್ಲಿರುವ
ಶ್ರೀನಿವಾಸ
ಎಸ್.
ಭಟ್ಟರು
ಮತ್ತು
ಸುಮಾ
ಭಟ್ಟರು
ನಿಮಗೆ
ಗೊತ್ತು
ಅಲ್ಲವೇ
?ಕ್ಯಾಲಿಫೋರ್ನಿಯಾದಲ್ಲಿ
ಅವರು
ನನಗೆ
ಗೊತ್ತಿಲ್ಲ
ಎನ್ನುವವರು
ಬಹಳ
ಕಡಿಮೆ.
ದಂಪತಿಗಳು
ಇಲ್ಲಿನ
ಸಾಂಸ್ಕೃತಿಕ
ಚಟುವಟಿಕೆಗಳಲ್ಲಿ
ಎಷ್ಟೊಂದು
ಆಸಕ್ತಿಯಿಂದ
ಪಾಲ್ಗೊಳ್ಳುತ್ತಾರೆ
ಎಂದರೆ
ಇವರಿಗೆ
ಬೇರೆ
ಏನೂ
ಕೆಲಸವಿಲ್ಲವೇ
?
ಕೇಳಿದವರಿಗೆಲ್ಲ,
ಕೇಳಿದಾಗಲೆಲ್ಲ
ಸಹಾಯ
ಮಾಡುವುದೊಂದೇ
ಕೆಲಸವಾ,
ಇವರಿಗೆ
?
ಎಂದು
ಪ್ರಶ್ನಿಸಿದವರು
ಇದ್ದಾರೆ.
ಅಷ್ಟೊಂದು
ಪರೋಪಕಾರೀ
ಜನ
ಇವರು.
ಕನ್ನಡದ
ಕೆಲಸ
ಅಂದರೂ
ಅಷ್ಟೆ
-
ಪದವಿ,
ಹೆಸರು,
ಉಪಕಾರ
ಸ್ಮರಣೆ
,
ಕೃತಜ್ಞತೆ-
ಏನನನ್ನೂ
ಬಯಸದೆ
ನಿಸ್ಪೃಹತೆಯಿಂದ
ದುಡಿದ
ಜನ.
ವನಸುಮದೊಲು
ಎನ್ನ
ಜೀವನ
ವಿಕಸಿಸಿ
ಇರಲೆಂದು
ಆಶಿಸುವ
ಮನ.
ಸುಮಾ
ಭಟ್
ಅವರು
ಹೆಸರಾಂತ
ಸುಗಮ
ಸಂಗೀತ
ಗಾಯಕಿ.
ದಕ್ಷಿಣ
ಕ್ಯಾಲಿಫೋರ್ನಿಯಾದಲ್ಲಿ
ಕರ್ನಾಟಕ
ಮತ್ತು
ಹಿಂದೂಸ್ತಾನಿ
ಸಂಗೀತವನ್ನು
ಶಾಸ್ತ್ರೀಯವಾಗಿ
ಅಭ್ಯಸಿಸಿದ್ದಾರೆ.
ಬೇರೆ
ಬೇರೆ
ಊರುಗಳಿಗೆ
ಹೋಗಿ
ಸಂಗೀತ
ಕಚೇರಿಗಳನ್ನು
ನಡೆಸಿದ್ದಾರೆ.
ಮನರಂಜನಾ
ಕಾರ್ಯದರ್ಶಿಗಳಾಗಿ
ಕನ್ನಡ
ಸಂಘಗಳಲ್ಲಿ
ಶ್ರೀನಿವಾಸ
ಭಟ್ಟರ
ಹೆಗಲೆಣೆಯಾಗಿ
ಶ್ರಮಿಸಿದ್ದಾರೆ.
ಸಲ್ಲುವುದ
ಬಯಸುವುದು,
ಮೆಲ್ಲದೆ
ಹರಸುವುದು,
ಗುಲ್ಲನೆಬ್ಬಿಸದಂತೆ,
ಎಲ್ಲರಿಗೆ
ಇನಿತಿನಿತು
ಒಳ್ಳೆಯದನೆಸಗುವುದು
ಬಲ್ಲಿದನು
ತಾನೆಂಬ
ಬಲು
ಹೆಮ್ಮೆ
ಕಳೆಯುವುದು,
ಹೊಲ್ಲ
ಮನದೊಳು
ಬಿಡದೆ
ಅದನಲ್ಲೆ
ಕೊಲ್ಲುವುದು
ಇಲ್ಲ
ಎನದೆ
ಹಂಚಿ,
ಇದ್ದುದನು
ಮೆಲ್ಲುವುದು,
ಕಲ್ಲು
ಆಗದ
ರೀತಿ,
ಎದೆ
ತೇವ
ಕಾಯುವುದು,
ಆಗಬಾರದದೆದುರು
ಸಿಡಿದೆದ್ದು
ಮುರಿಯುವುದು-
ಇವು
ಭಟ್ಟರ
ಹಂಬಲ
!
ನಮ್ಮ
ಶ್ರೀನಿವಾಸ
ಭಟ್ಟರಿಗೆ
ಐವತ್ತು
ತುಂಬಿತು
ಶ್ರೀನಿವಾಸ
ಭಟ್ಟರು
ಸುಮಾರು
ಹದಿನೈದು
ವರ್ಷಗಳ
ಹಿಂದೆ
ಇಲಿನಾಯ್
ರಾಜ್ಯದ
ಷಿಕಾಗೋ
ಕನ್ನಡ
ಸಂಘ
ವಿದ್ಯಾರಣ್ಯದ
ಅಧ್ಯಕ್ಷರು
ಆಗಿದ್ದರು.
ಆಗ,
ಅಲ್ಲಿ
ಹೊಸ
ಹೊಸ
ವಿಶೇಷ
ಕಾರ್ಯಕ್ರಮಗಳಿಗೆ
ಅಡಿಪಾಯ
ಹಾಕಿದವರು.
ಪಶ್ಚಿಮಾಭಿಮುಖವಾಗಿ
ಪ್ರಯಾಣ
ಬೆಳೆಸಿ
ಲಾಸ್
ಏಂಜಲೀಸ್ಗೆ
ಬಂದ
ಮೇಲೆ
ಅವರು
ಇಲ್ಲಿನ
ಕನ್ನಡ
ಸಂಘ
ದಕ್ಷಿಣ
ಕ್ಯಾಲಿಫೋರ್ನಿಯಾ
ಕರ್ನಾಟಕ
ಸಾಂಸ್ಕೃತಿಕ
ಸಂಘಕ್ಕೆ
ಅಧ್ಯಕ್ಷರಾಗಿದ್ದರು.
ಒಂದು
ಉತ್ತಮ
ಸಾಹಿತ್ಯಾತ್ಮಕ
ಸಂಸ್ಮರಣ
ಸಂಚಿಕೆಯನ್ನು
ಹೊರತಂದರು.
ಆ
ವರ್ಷ
ಅಭೂತಪೂರ್ವವಾಗಿ
ಒಂದು
ನಾಟಕೋತ್ಸವವನ್ನು
ನಡೆಸಿದರು.
ಸಂಘದ
ಹಿಂದಿನ
ಎಲ್ಲ
ಅಧ್ಯಕ್ಷರುಗಳೂ
ವೇದಿಕೆಯ
ಮೇಲೆ
ಬರುವಂತೆ
ಮಾಡಿ,
ಕ್ರಿಯಾತ್ಮಕವಾಗಿ
ಅವರುಗಳನ್ನು
ಗೌರವಿಸಿದರು.
(ಫೆಬ್ರವರಿ
17ರಂದು
ನಡೆದ
ನಾಟಕೋತ್ಸವ
ಶ್ರೀನಿವಾಸ
ಭಟ್ಟರು
ಹಾಕಿಕೊಟ್ಟ
ಸಂಪ್ರದಾಯದ
ಫಲಶ್ರುತಿಯೇ.)ಅಲ್ಲಿಂದ
ಮುಂದೆಯೂ
ಸತತವಾಗಿ
ಇಲ್ಲಿನ
ಕನ್ನಡ
ಸಂಘದ
ಕಾರ್ಯಕ್ರಮಗಳಲ್ಲಿ
ಅವರೂ,
ಅವರ
ಪತ್ನಿ
ಸುಮಾ
ಅವರೂ
ಹಾಗೂ
ಅವರ
ಮಕ್ಕಳು
ಅನಿತಾ
ಭಟ್
ಮತ್ತು
ಶೀಲಾ
ಭಟ್
ಸಹ
ಸಕ್ರಿಯವಾಗಿ
ಭಾಗವಹಿಸಿ
ದುಡಿಯುತ್ತಿರುವವರು.
ಭಟ್ಟರು
ಒಳ್ಳೆಯ
ಬರಹಗಾರರು.
ಕವನ,
ಕತೆ,
ಪ್ರಬಂಧಗಳನ್ನು
ಬರೆದಿದ್ದಾರೆ.
ಅಮೆರಿಕನ್ನಡದ
ಸಂಪಾದಕ
ಸಲಹಾ
ಸಮಿತಿಯಲ್ಲಿ
ಇದ್ದವರು.
ನಾಟಕಗಳನ್ನು
ಆಡಿಸಿದ್ದಾರೆ.
ಪಾತ್ರವಹಿಸಿದ್ದಾರೆ.
ಸಂಗೀತ
ಸಭೆಗಳನ್ನು
ಏರ್ಪಡಿಸಿದ್ದಾರೆ.
ಪ್ರತಿವಾರವು
ಸಂಗೀತಮಯ
ಸಂತೋಷ
ಕೂಟಗಳನ್ನು
,
ಕನ್ನಡ
ಮಕ್ಕಳ
ಗೀತ
ಪ್ರಧಾನ
ಬಾಲ
ವಿಹಾರಗಳನ್ನೂ
ಏರ್ಪಡಿಸಲು
ನೆರವಾಗಿಯೂ
ನೇರವಾಗಿಯೂ
ಸಂಘಟನೆಗೆ
ಎತ್ತಿದ
ಕೈ
ಆಗಿರುವವರು.
ಒಟ್ಟಾರೆ
ನಮ್ಮ
ಭಟ್ಟರು
ಎಲ್ಲರಿಗೂ
ಬೇಕಾದವರು.
ಮನಸ್ಸಿಗಂತೂ
ವಯಸ್ಸಾಗಿರದ,
ಹೊಸ
ಹುರುಪಿಗೆ
ಇನ್ನೂ
ತರುಣಕಾಯದ,
ಪರೋಪಕಾರೀ
ಪ್ರವೃತ್ತಿಗೆ
ಹೃದಯವಿತ್ತಿರುವ
ಭಟ್ಟರ
ಐವತ್ತನೆಯ
ವರ್ಷದ
ಹುಟ್ಟು
ಹಬ್ಬವನ್ನು
ಒಂದು
ಆಶ್ಚರ್ಯ
ಕೂಟವನ್ನಾಗಿ
ಅವರ
ಗೆಳೆಯರೆಲ್ಲ
ಸೇರಿ
ಏರ್ಪಡಿಸಿದ್ದರು.
ಈ
ಫೆಬ್ರವರಿ
ಹದಿನೆಂಟು
ಭಾನುವಾರ
ಅವರ
ಊರಿನ
ಹತ್ತಿರದ
ವುಡ್
ಲಾಂಡ್ಸ್ನ
ವಿಶೇಷ
ಭೋಜನಾಂಗಣದಲ್ಲಿ
ಈ
ಆಶ್ಚರ್ಯ
ಕೂಟ
ಕಾರ್ಯಕ್ರಮ
ಆಯೋಜಿಸಲಾಗಿತ್ತು.
ಭೋಜನಾಂಗಣ
ತುಂಬಿತ್ತು.
ದೂರದೂರದಿಂದ
(ಸ್ಯಾನ್
ಫ್ರಾನ್ಸಿಸ್ಕೋ,
ಷಿಕಾಗೋದಿಂದದಲೂ)
ಗೆಳೆಯರು
ಬಂದಿದ್ದರು.
ಹಾಸ್ಯದ
ರಸ
ಮಂಜರಿಯ,
ಮಕ್ಕಳ
ನೃತ್ಯ,
ಪ್ರಹಸನಗಳ,
ಸುಗಮ
ಸಂಗೀತದ
ಸಾಹಿತ್ಯ
ಸಂಜೆಯಾಗಿ
ರೂಪಾಂತರಗೊಂಡು
ಭಟ್ಟರ
ವರ್ಧಂತಿ
ಎಲ್ಲರ
ಮನ
ರಂಜಿಸಿತು.
ಭಟ್ಟರ
ತಾಯಿ
ಬೆಂಗಳೂರಿನಿಂದ
ಆಶೀರ್ವಾದಪೂರಕ
ಕಳಿಸಿದ
ಚಿನ್ನದುಂಗುರವನ್ನು
ಮಡದಿ
ಸುಮಾ
ತೊಡಿಸಿದರು.
ಶ್ರೀನಿವಾಸ
ಭಟ್ಟರೇ
ಬರೆದ
ಕವನಗಳನ್ನು
ಗೆಳೆಯರು
ಓದಿದರು.
ಭಟ್ಟರನ್ನು
ಕುರಿತು
ಬೇರೆಯವರು
ಬರೆದ
ವಿನೋದ-ಕವನ,
ಅಣಕುವಾಡುಗಳನ್ನ
ಸ್ನೇಹಿತರು
ಹಾಡಿದರು.
ಸಭಿಕರು
ನಲಿದಾಡಿದರು.
ಶುಭಕೋರಿದರು.