‘ಕೆಸಿಎ’ ಯಿಂದ ಕರ್ನಾಟಕ ಸಂಗೀತ ಕಚೇರಿ
‘ಕರ್ನಾಟಕ ಸಾಂಸ್ಕೃತಿಕ ಸಂಘ’ ಜುಲೈ 1ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಏರ್ಪಡಿಸಿದೆ. ಡಾ. ಜಿ.ಆರ್. ಮತ್ತು ಜಯಂತಿ ರವಿಕುಮಾರ್ ಹಾಗೂ ಟಿ.ವಿ. ರಾಮ್ಪ್ರಸಾದ್ ಸಕುಂಟುಬಿಕರಾಗಿ ನೀವು ಸಂಗೀತ ಕಚೇರಿಗೆ ಬರಬೇಕು ಅಂತ ಕರೆಯೋಲೆ ಕಳುಹಿಸಿದ್ದಾರೆ.
ದೀಪಾ ರವಿಕುಮಾರ್ ಶಾಸ್ತ್ರೀಯ ಗಾಯನ ಕಚೇರಿ ಪ್ರಸ್ತುತ ಪಡಿಸುತ್ತಾರೆ. ದೆಹಲಿಯ ಪಿ. ಸುಂದರ್ರಾಜನ್ ವಯಲಿನ್ ಹಾಗೂ ನೈವೇಲಿ ಆರ್. ನಾರಾಯಣನ್ ಮೃದಂಗಂ ಸಾಥ್ ನೀಡಲಿದ್ದಾರೆ. ಜುಲೈ ಒಂದು ಭಾನುವಾರ. ಸಂಜೆ ನಾಲ್ಕುಗಂಟೆಗೆ ಲಘು ಉಪಾಹಾರದೊಂದಿಗೆ ಕಾರ್ಯಕ್ರಮ ಆರಂಭವಾಗುತ್ತೆ. ಏಳು ಗಂಟೆಗೆ ಊಟ ಮುಗಿಸಿಕೊಂಡು ಮನೆಗೆ ಹೋಗಬಹುದು.
ಕಾರ್ಯಕ್ರಮ ನಡೆಯುವ ಸ್ಥಳ- The la Mirada Theater for the Arts, 14900, La Mirada blvd., La Mirada .ಚಿನ್ಮಯ ಮಿಷನ್ನ ಆಚಾರ್ಯ ಸ್ವಾಮಿ ಈಶ್ವರಾನಂದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾರೆ. ಪಮೋನಾ ವಿಶ್ವ ವಿದ್ಯಾಲಯದ ಸಂಗೀತ ವಿಭಾಗದ ಅಧ್ಯಕ್ಷ ಡಾನ್ ಅಮಬ್ರಾಸನ್ ಮುಖ್ಯ ಅತಿಥಿಗಳು.
ವಿವರಕ್ಕಾಗಿ ಫೋನ್ ಕೈಗೆತ್ತಿಕೊಳ್ಳಿ - 714-838-8505, 714-562-8562 ಮತ್ತು 562-9058 , 9498598042
(ಇನ್ಫೋ ವಾರ್ತೆ)