ಅ.14ರಂದು ಭೂಮಿಕಾ ಅಂಗಳದಲ್ಲಿ ಹಸುರುಹೊನ್ನಿನ ಅನಾವರಣ
ಭೂಮಿಕಾದ ತಿಂಗಳ ಅಂಗಳದಲ್ಲಿ ಈ ಬಾರಿಯ ಚರ್ಚೆಯ ವಿಷಯ ಡಾ. ಬಿ.ಜಿ.ಎಲ್. ಸ್ವಾಮಿ ಅವರ ಸಾಹಿತ್ಯ ಮತ್ತು ವ್ಯಕ್ತಿತ್ವ. ಅಕ್ಟೋಬರ್ 14ರ ಶನಿವಾರ ನಡೆಯುವ ಈ ಸಂವಾದ ಗೋಷ್ಠಿಗೆ ಸಾಹಿತ್ಯ ಪ್ರಿಯರೆಲ್ಲರಿಗೂ ಸ್ವಾಗತ, ಗೆಳೆಯರನ್ನೂ ಕರೆತನ್ನಿ!
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರು ಡಾ. ಎಂ. ಕೆ. ಪ್ರಭಾಕರ್. ರಾಕ್ವಿಲ್ಲೆಯ ಸಮುದಾಯಭವನದಲ್ಲಿ (Community Center, Rockville, MD) ಮಧ್ಯಾಹ್ನ ಎರಡು ಗಂಟೆಗೆ ಆರಂಭವಾಗುವ ಕಾರ್ಯಕ್ರಮಕ್ಕೆ ಐದು ನಿಮಿಷ ಮುಂಚಿತವಾಗಿ ಬಂದರೆ ಸಂತೋಷ.
ಹಸುರು ಹೊನ್ನಿನ ಡಾ. ಬಿ.ಜಿ.ಎಲ್. ಸ್ವಾಮಿ
ನಿಮಗೆ
ಡಿ.ವಿ.ಗುಂಡಪ್ಪ
ಗೊತ್ತಲ್ಲ
!
ಮಂಕುತಿಮ್ಮನ
ಕಗ್ಗ
ಎಂದರೆ
ತಕ್ಷಣಕ್ಕೆ
ನೆನಪಾದೀತು.
ಕನ್ನಡದ
ಭಗವದ್ಗೀತೆ
ಎಂದು
ಹೆಸರಾದ
ಕಗ್ಗದ
ಕವಿ
ಡಿ.ವಿ.ಜಿ.
ಅವರ
ಸುಪುತ್ರ
ಬಿ.ಜಿ.ಎಲ್.
ಸ್ವಾಮಿ.
ಅಪ್ಪನಂತೆ
ಕೇಂದ್ರ
ಸಾಹಿತ್ಯ
ಅಕಾಡೆಮಿ
ಪ್ರ
ಶಸ್ತಿಯನ್ನು
ಪಡೆದ
ಸ್ವಾಮಿ,
ಕನ್ನಡದ
ಅಪರೂಪದ
ಲೇಖಕರಲ್ಲೊಬ್ಬರು.
ಬೆಂಗಳೂರು
ಗುಂಡಪ್ಪ
ಲಕ್ಷ್ಮಿನಾರಾಯಣ
ಸ್ವಾಮಿ
ಅವರ
ಪೂರ್ಣ
ಹೆಸರು.
ಮದರಾಸು ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕರಾಗಿದ್ದ ಸ್ವಾಮಿ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಬಲ್ಲಿದರು. ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ ಅವರು ಕನ್ನಡ ಮತ್ತು ತಮಿಳು ಸಾಹಿತ್ಯದಲ್ಲಿ ಕೊಡು ಕೊಳ್ಳುವಿಕೆಯನ್ನು ಬೆಂಬಲಿಸಿದವರು.
ಸಸ್ಯಶಾಸ್ತ್ರವೆಂದರೆ, ಕೇವಲ ಶುಷ್ಕ ಶಾಸ್ತ್ರಸಾಹಿತ್ಯವಲ್ಲ ಎನ್ನುವುದನ್ನು ಹಸುರು ಹೊನ್ನು ಕೃತಿಯ ಮೂಲಕ ಸಾಧಿಸಿ ತೋರಿಸಿದ ಖ್ಯಾತಿ ಬಿ.ಜಿ.ಎಲ್. ಸ್ವಾಮಿ ಅವರದು. ಎದುರಿಗೆ ಕೂತು ಕಥೆ ಹೇಳುವಂತೆ ಬರೆಯುವ ಸ್ವಾಮಿ ಅವರ ಹಸುರು ಹೊನ್ನು ಕಾದಂಬರಿಯಂತೆ ಓದಿಸಿಕೊಳ್ಳುತ್ತದೆ. ಸ್ವಾಮಿ ಅವರ ಇತರ ಕೃತಿಗಳಾದ ಪ್ರಾಧ್ಯಾಪಕನ ಪೀಠದಲ್ಲಿ, ತಮಿಳು ತಲೆಗಳ ನಡುವೆ, ನಡೆದಿದೆ ಬಾಳ ಕಾವೇರಿ, ಕಾಲೇಜು ರಂಗ, ಕಾಲೇಜು ತರಂಗ ಕೃತಿಗಳಲ್ಲಿ ಕೂಡ ಎದ್ದು ಕಾಣುವುದು ಅವುಗಳ ಓದಿಸಿಕೊಳ್ಳುವ ಗುಣವೇ.
ಭೂಮಿಕಾದ ಶನಿವಾರದ ಕಾರ್ಯಕ್ರಮದಲ್ಲಿ ಡಾ. ಪ್ರಭಾಕರ್ ಅವರು ಬಿಜಿಎಲ್ ಅವರ ಸಮಗ್ರ ಕೃತಿಯನ್ನು ವಿಮರ್ಶಿಸಿ, ವೈಜ್ಞಾನಿಕ ಕನ್ನಡಕ್ಕೆ ಅವರು ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಲಿದ್ದಾರೆ. ಇದು ಏಕಮುಖ ಭಾಷಣ ಕಾರ್ಯಕ್ರಮವಲ್ಲ. ನಿಮ್ಮ ಸಂಶಯಗಳಿಗೆ ಉತ್ತರ ನೀಡುವ ಯತ್ನವೂ ನಡೆಯುತ್ತದೆ. ಹೆಚ್ಚಿನ ಮಾಹಿತಿ ಬೇಕಿದ್ದರೆ, ಡಾ. ವಿಜಯ ಮನೋಹರ(301-871-2234) ಅವರಿಗೊಂದು ಫೋನ್ ಹಚ್ಚಿ.
ಕಾರ್ಯಕ್ರಮದ ದಾರಿಕ್ಕೆ ಇಲ್ಲಿದೆ :
From
Beltway
to
I270N
to
Exit
6
From
I270
S
to
Exit
#
6
which
is
Rt
28
(W.Montgomery
Ave)
towards
Rockville.
This
becomes
Viers
Mill
Rd
(Rte
586)
Make
left
at
Norbeck
Rd
(Rt
28)
After
5
traffic
lights,
make
right
on
to
Bauer
Drive.
Community
center
is
on
your
left
Tel:
3014684015
(ಇನ್ಫೋ ವಾರ್ತೆ)