ಯಾದಗಿರಿ: ರಸ್ತೆ ಅಪಘಾತ, ನಾಲ್ವರ ದುರ್ಮರಣ
ಯಾದಗಿರಿ, ಜೂನ್ 1: ಲಾರಿ ಮತ್ತು ಜೀಪ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಯಾದಗಿರಿ ತಾಲೂಕಿನ ಮುಂಡರಗಿ ಬಳಿ ಗುರುವಾರ ತಡ ರಾತ್ರಿ ನಡೆದಿದೆ.
ರಸ್ತೆ ಅಪಘಾತದಲ್ಲಿ ಜಮಖಂಡಿ ಕ್ಷೇತ್ರದ ಶಾಸಕ ಸಿದ್ದು ನ್ಯಾಮಗೌಡ ಮರಣ
ಘಟನೆಯಲ್ಲಿ ಯಾದಗಿರಿ ನಗರ ನಿವಾಸಿಗಳಾದ ಜಾನ್ ಫಾಸ್ಟರ್ ,ಸ್ಟೀಫನ್ ಪೀಟರ್, ಓರ್ವ ಮಹಿಳೆ ಹಾಗೂ ಜೀಪ್ ಚಾಲಕ ಬಸವರಾಜ ಮೃತ ಪಟ್ಟಿದ್ದಾರೆ. ಇನ್ನು, ದುರ್ಘಟನೆಯಲ್ಲಿ 7 ಜನರಿಗೆ ಗಂಭೀರ ಗಾಯಗಳಾಗಿದ್ದು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯ ಗಾಜರಕೊಟ್ ಎಂಬಲ್ಲಿಗೆ ತೆರಳಿದ್ದ ಯಾದಗಿರಿ ನಗರದ ನಿವಾಸಿಗಳು, ಮರಳಿ ಜೀಪ್ನಲ್ಲಿ ಬರುವಾಗ ಮುಂಡರಗಿ ಬಳಿ ಅಪಘಾತ ಸಂಭವಿಸಿದೆ. ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಯಾದಗಿರಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments
English summary
Four people have died while Lorry and Jeep have collided near Mundargi in Yadgir district on Thursday night.