ಅಧ್ಯಕ್ಷ ಹೋರಾಟದಲ್ಲಿ ಗೆದ್ದ ಬೈಡನ್ ಭಾವುಕ ಮಾತು
ವಾಷಿಂಗ್ಟನ್, ನವೆಂಬರ್ 7: ಅಮೆರಿಕದ 46ನೇ ಅಧ್ಯಕ್ಷರಾಗಿ ಚುನಾಯಿತರಾದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್, ತಮ್ಮ ಗೆಲುವಿಗಾಗಿ ಅಮೆರಿಕದ ಜನತೆಗೆ ಭಾವಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.
'ಅಮೆರಿಕ, ನಮ್ಮ ಮಹಾನ್ ದೇಶವನ್ನು ನಡೆಸಲು ನೀವು ನನ್ನನ್ನು ಆಯ್ಕೆ ಮಾಡಿರುವುದು ನನ್ನ ಪಾಲಿನ ಗೌರವ. ನಮ್ಮ ಮುಂದೆ ಇರುವ ಕಾರ್ಯಗಳು ಕಠಿಣವಾಗಿವೆ. ಆದರೆ ನಾನು ನಿಮಗೆ ಈ ವಚನವನ್ನು ನೀಡುತ್ತೇನೆ; ನಾನು ಎಲ್ಲ ಅಮೆರಿಕನ್ನರ ಅಧ್ಯಕ್ಷನಾಗುತ್ತೇನೆ- ನೀವು ನನಗೆ ಮತ ನೀಡಿರಲಿ ಅಥವಾ ನೀಡದೇ ಇರಲಿ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸುದ್ದಿ ಮಾಧ್ಯಮಗಳು ಬೈಡೆನ್ ಅವರು ಜಯಶಾಲಿ ಎಂದು ಬಿಂಬಿಸುತ್ತಿದ್ದಂತೆಯೇ ಡೊನಾಲ್ಡ್ ಟ್ರಂಪ್, ತಾವು ಚುನಾವಣಾ ವಿಜಯಶಾಲಿ ಎಂದು ಸುಳ್ಳು ಸುಳ್ಳೇ ತೋರಿಸಿಕೊಳ್ಳಲು ಬೈಡನ್ ಧಾವಿಸುತ್ತಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.
'ನನ್ನ ಮೇಲೆ ನೀವು ಇರಿಸಿರುವ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ' ಎಂದಿರುವ ಜೋ ಬೈಡೆನ್, ಅಮೆರಿಕದ ಕುರಿತಾದ ಹಾಡಿನ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ.

ಕಮಲಾ ಸಂತಸ
ಇದೇ ವಿಡಿಯೋವನ್ನು ಕಮಲಾ ಹ್ಯಾರಿಸ್ ಕೂಡ ಹಂಚಿಕೊಂಡಿದ್ದಾರೆ. ಭಾರತ ಮೂಲದ ಕಮಲಾ ಹ್ಯಾರಿಸ್, ಅಮೆರಿಕದ ಮೊದಲ ಮಹಿಳಾ ಮತ್ತು ಕಪ್ಪು ವರ್ಣೀಯ ಉಪಾಧ್ಯಕ್ಷೆಯಾಗಿ ನೇಮಕವಾಗುತ್ತಿದ್ದಾರೆ. 'ಈ ಚುನಾವಣೆಯು ಜೋ ಬೈಡನ್ ಅಥವಾ ನನಗಿಂತಲೂ ಹೆಚ್ಚು ಮುಖ್ಯವಾಗಿತ್ತು. ಇದು ಅಮೆರಿಕದ ಆತ್ಮ ಮತ್ತು ನಮ್ಮ ಚೇತನ ಹೋರಾಟವಾಗಿತ್ತು. ನಮ್ಮ ಮುಂದೆ ಸಾಕಷ್ಟು ಕೆಲಸಗಳು ಮಾಡಲು ಇವೆ. ಈಗಿನಿಂದಲೇ ಶುರು ಮಾಡೋಣ' ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಅಮ್ಮ ಇದ್ದಿದ್ದರೆ...
'ನಾವು ಏನು ಬೇಕಾದರೂ ಆಗಬಹುದು ಮತ್ತು ಏನು ಬೇಕಾದರೂ ಮಾಡಬಹುದು ಎಂದು ಅಮ್ಮ ನಮಗೆ ಕಲಿಸಿಕೊಟ್ಟಿದ್ದರು. ಆಕೆ ಇಂದು ಇದ್ದಿದ್ದರೆ ಹೆಮ್ಮೆ ಪಡುತ್ತಿದ್ದರು' ಎಂದು ಕಮಲಾ ಹ್ಯಾರಿಸ್ ಅವರ ಸಹೋದರಿ ಮಾಯಾ ಹ್ಯಾರಿಸ್, ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದಾರೆ.

ಹಿಲರಿ ಕೃತಜ್ಞತೆ
'ಮತದಾರರು ಮಾತನಾಡಿದ್ದಾರೆ. ಅವರು ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಅವರನ್ನು ಮುಂದಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದಾರೆ. ಇದು ಇದು ಇತಿಹಾಸ ನಿರ್ಮಾಣದ ಘಟ್ಟ. ಟ್ರಂಪ್ ಅವರ ನಿರಾಕರಣೆ ಮತ್ತು ಅಮೆರಿಕದ ಪಾಲಿಗೆ ಹೊಸ ಪುಟ. ಇದು ನಡೆಯಲು ಸಾಧ್ಯವಾಗಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು' ಎಂದು ಹಿಲರಿ ಕ್ಲಿಂಟನ್ ಟ್ವೀಟ್ ಮಾಡಿದ್ದಾರೆ.

ಟ್ರಂಪ್ ಟ್ವೀಟ್ಗಳು ಡಿಲೀಟ್
ಇನ್ನೊಂದೆಡೆ ಡೊನಾಲ್ಡ್ ಟ್ರಂಪ್ ಈ ಫಲಿತಾಂಶವನ್ನು ತಾವು ಒಪ್ಪಿಕೊಳ್ಳುವುದಿಲ್ಲ. ಇದರ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ. ಆದರೆ ಅವರು ಕೆಲವು ಗಂಟೆಗಳಲ್ಲಿ ಮಾಡಿದ್ದ ಸರಣಿ ಟ್ವೀಟ್ಗಳು ವಿವಾದಾತ್ಮಕ ಅಥವಾ ತಪ್ಪುದಾರಿಗೆ ಎಳೆಯುವಂತಿದೆ ಎಂದು ಟ್ವಿಟ್ಟರ್ ಅವುಗಳನ್ನು ಅಡಗಿಸಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications