ಚಂದ್ರಯಾನ ನಿಮಗೆ ನೋಡಲು ಕಾಣಿಸಿತ್ತೇ?: ಪ್ರಸಿದ್ಧ ಹಾಲಿವುಡ್ ನಟನಿಗೆ ಕುತೂಹಲ
ವಾಷಿಂಗ್ಟನ್, ಸೆಪ್ಟೆಂಬರ್ 17: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆ ಇಡೀ ಜಗತ್ತಿನ ಗಮನ ಸೆಳೆದಿದ್ದು ಗೊತ್ತಿರುವ ಸಂಗತಿ. ಯೋಜನೆ ಭಾಗಶಃ ಯಶಸ್ವಿಯಾದಾಗ ಇಡೀ ಜಗತ್ತೇ ಇಸ್ರೋದ ಬೆನ್ನುತಟ್ಟಿತ್ತು. ಈಗಲೂ ವಿಕ್ರಂ ಲ್ಯಾಂಡರ್ ತನ್ನ ಜೀವಂತಿಕೆಯನ್ನು ಪ್ರದರ್ಶಿಸಲಿದೆ ಎಂಬ ನಿರೀಕ್ಷೆ ವಿಜ್ಞಾನ ಲೋಕದಲ್ಲಿದೆ. ಇದು ವಿಜ್ಞಾನ ಮತ್ತು ಬಾಹ್ಯಾಕಾಶದ ಕುರಿತು ಆಸಕ್ತಿ ಉಳ್ಳವರನ್ನು ಮಾತ್ರವಲ್ಲ, ಸಿನಿಮಾ ನಟರನ್ನೂ ಕಾಡುತ್ತಿದೆ ಎಂಬುದು ಗಮನಾರ್ಹ.
ಹಾಲಿವುಡ್ನ ಖ್ಯಾತ ನಟ ಬ್ರಾಡ್ ಪಿಟ್ ಅವರು ಅಮೆರಿಕದ ಗಗನಯಾತ್ರಿಗಳೊಂದಿಗೆ ಮಾತನಾಡುವಾಗ ಇಸ್ರೋದ ಚಂದ್ರಯಾನ-2 ಕುರಿತು ಪ್ರಶ್ನಿಸಿದ್ದಾರೆ. ಹಾಲಿವುಡ್ನ ಸೆಲೆಬ್ರಿಟಿ ಭಾರತದ ಈ ಯೋಜನೆ ಬಗ್ಗೆ ಕೇಳಿರುವ ಸುದ್ದಿ ಸಹಜವಾಗಿಯೇ ವೈರಲ್ ಆಗಿದೆ.
ಬಾಹ್ಯಾಕಾಶದ ಕುರಿತು ಮಾಡಿರುವ 'ಆಡ್ ಆಸ್ಟ್ರಾ' ಸಿನಿಮಾದ ಪ್ರಚಾರದಲ್ಲಿ ಭಾಗವಹಿಸಿರುವ ಬ್ರಾಡ್ ಪಿಟ್, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ (ಐಎಸ್ಎಸ್) ಗಗನಯಾನಿ ನಿಕ್ ಹಾಗ್ ಅವರಿಗೆ ಕರೆ ಮಾಡಿ ಮಾತನಾಡಿದ್ದರು. ಈ ಸಂದರ್ಭದಲ್ಲಿ ಅವರು ಐಎಸ್ಎಸ್ನಲ್ಲಿನ ಜೀವನದ ಬಗ್ಗೆ ವಿಚಾರಿಸಿದ್ದರು. ಈ ವಿಚಾರಗಳನ್ನು ತಮ್ಮ ಸಿನಿಮಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಪಿಟ್, ಬಳಿಕ ಚಂದ್ರಯಾನ-2ರ ವಿಕ್ರಂ ಲ್ಯಾಂಡರ್ ಕುರಿತೂ ವಿಚಾರಿಸಿದ್ದಾರೆ.

'ನಾನು ಕಳೆದ ವಾರ ಜೆಟ್ ಪ್ರೊಪೊಲ್ಷನ್ ಲ್ಯಾಬೊರೇಟರಿಗೆ ಹೋಗಿದ್ದೆ. ಅದೇ ದಿನ ಭಾರತವು ಚಂದ್ರನ ಮೇಲೆ ಇಳಿಯುತ್ತಿತ್ತು. ಅವರ ಪ್ರಯತ್ನಕ್ಕೆ ಅಮೆರಿಕ ನೆರವು ನೀಡುತ್ತಿತ್ತು. ಲ್ಯಾಂಡರ್ ಅನ್ನು ನೀವು ಇದ್ದ ಜಾಗದಿಂದ ನೋಡಲು ಸಾಧ್ಯವಿದೆಯೇ? ಎಂದು ಬ್ರಾಡ್ ಪಿಟ್ ಪ್ರಶ್ನಿಸಿದ್ದರು.
ಅದಕ್ಕೆ ಹಾಗ್, 'ದುರದೃಷ್ಟವಶಾತ್ ನಮಗೆ ನೋಡಲು ಸಾಧ್ಯವಾಗುವುದಿಲ್ಲ. ನಾನು ಮತ್ತು ನಮ್ಮ ತಂಡ ಸುದ್ದಿ ವರದಿಗಳಿಂದ ಮಾತ್ರ ಅದನ್ನು ತಿಳಿದುಕೊಳ್ಳುವಂತಾಗಿತ್ತು' ಎಂದು ಪ್ರತಿಕ್ರಿಯಿಸಿದ್ದರು. ಬಾಹ್ಯಾಕಾಶ ಕೇಂದ್ರದಲ್ಲಿ ಹಾಗ್ ಅವರೊಂದಿಗೆ ಇನ್ನಿಬ್ಬರು ಅಮೆರಿಕನ್ನರು, ಇಬ್ಬರು ರಷ್ಯನ್ನರು ಮತ್ತು ಒಬ್ಬ ಇಟಲಿಯ ಗಗನಯಾನಿ ಇದ್ದಾರೆ.
ಪಿಟ್ ಮತ್ತು ಹಾಗ್ ಅವರ ಮಾತುಕತೆಗಳು ಬಾಹ್ಯಾಕಾಶ ಜಗತ್ತಿನ ಅನುಭವಗಳ ಕುರಿತು ಮುಂದುವರಿದಿತ್ತು. ಈ ಸಂಭಾಷಣೆಯನ್ನು ನಾಸಾ ಟಿವಿ ಪ್ರಸಾರ ಮಾಡಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications