ಚೀನಾ ಎಚ್ಚರಿಕೆ ಲೆಕ್ಕಿಸದ ಟ್ರಂಪ್: ದಲೈಲಾಮ ಆಯ್ಕೆಯ ಕಾನೂನಿಗೆ ಸಹಿ
ವಾಷಿಂಗ್ಟನ್, ಡಿಸೆಂಬರ್ 28: ದಲೈಲಾಮ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಹಕ್ಕು ಟಿಬೆಟ್ಗೆ ಇದೆ ಎಂಬ ಹೇಳಿಕೆಯನ್ನು ಪುನರುಚ್ಚರಿಸುವ ಮಸೂದೆಗೆ ಚೀನಾ ಎಚ್ಚರಿಕೆಯನ್ನೂ ಮೀರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಟಿಬೆಟ್ನಲ್ಲಿ ನೆಲೆಸಿರುವ ಟಿಬೆಟ್ಟಿಯನ್ನರಿಗೆ ಭರವಸೆ ಮತ್ತು ನ್ಯಾಯವನ್ನು ಒದಗಿಸುವ ಕಠಿಣ ಸಂದೇಶ ಇದು ಎಂದು ಟಿಬೆಟ್ ಸರ್ಕಾರ ಈ ನಡೆಯನ್ನು ಸ್ವಾಗತಿಸಿದೆ.
ಟಿಬೆಟ್ ನೀತಿ ಮತ್ತು ಬೆಂಬಲ ಕಾಯ್ದೆಯನ್ನು ಅಮೆರಿಕದ ಸಂಸತ್ತು ಕಳೆದ ವಾರ ಅಂಗೀಕರಿಸಿತ್ತು. ಇದಕ್ಕೆ ಚೀನಾ ಕೆರಳಿತ್ತು. ಈ ಮಸೂದೆಯು ಚೀನಾದ ವ್ಯವಹಾರಗಳ ನಡುವೆ ಮೂಗುತೂರಿಸುವ ಪ್ರಯತ್ನ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿತ್ತು.
'ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸುವಂತೆ ಮತ್ತು ಈ ನಕಾರಾತ್ಮಕ ವಿಧಿಗಳು ಹಾಗೂ ಕಾಯ್ದೆಗಳಿಗೆ ಸಹಿ ಹಾಕುವ ಮೂಲಕ ಕಾನೂನು ರೂಪಿಸದಂತೆ ಅಮೆರಿಕಕ್ಕೆ ಕೋರುತ್ತೇವೆ. ಇದು ನಮ್ಮ ಮುಂದಿನ ಸಹಕಾರ ಹಾಗೂ ದ್ವಿಪಕ್ಷೀಯ ಸಂಬಂಧಗಳಿಗೆ ಹಾನಿಯುಂಟುಮಾಡುತ್ತದೆ' ಎಂದು ಮಸೂದೆಯನ್ನು ಅಮೆರಿಕ ಸಂಸತ್ತು ಅಂಗೀಕರಿಸಿದ ಬಳಿಕ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಮಗ್ ವೆನ್ಬಿನ್ ಹೇಳಿದ್ದರು.

ಈ ಮಸೂದೆಯು ಟಿಬೆಟ್ನ ಮುಖ್ಯ ನಗರ ಲ್ಹಾಸಾದಲ್ಲಿ ಅಮೆರಿಕದ ರಾಯಭಾರ ಕಚೇರಿಯನ್ನು ಸ್ಥಾಪಿಸುವುದು ಮತ್ತು 14ನೇ ದಲೈಲಾಮ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಟಿಬೆಟ್ಟಿಯನ್ನರ ಪರಮಾಧಿಕಾರವನ್ನು ಎತ್ತಿಹಿಡಿಯುವುದು ಹಾಗೂ ಟಿಬೆಟ್ ಪರಿಸರವನ್ನು ಸಂರಕ್ಷಿಸುವುದನ್ನು ಒಳಗೊಂಡಿದೆ.
ಮುಂದಿನ ದಲೈಲಾಮರ ಆಯ್ಕೆಯಲ್ಲಿ ಚೀನಾ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಲು ಅಂತಾರಾಷ್ಟ್ರೀಯ ಸಹಭಾಗಿತ್ವವನ್ನು ರಚಿಸುವ ಬಗ್ಗೆ ಅಮೆರಿಕ ಉದ್ದೇಶಿಸಿದೆ. ತಮ್ಮ ಪೂರ್ವಾಧಿಕಾರಿ ಪಂಚೆನ್ ಲಾಮರನ್ನಾಗಿ ದಲೈಲಾಮ ಆಯ್ಕೆ ಮಾಡಿದ್ದ ಬಾಲಕ ಗೆದುಮ್ ನ್ಯಿಮಾ ಅವರನ್ನು 1995ರಲ್ಲಿ ಬಂಧಿಸಿದ್ದ ಚೀನಾ, ತನ್ನದೇ ಪಂಚೆನ್ ಲಾಮರನ್ನು ನೇಮಕ ಮಾಡಿತ್ತು. ಆಕ ಬಾಲಕ ಗೆದುಮ್ ಅವರಿಗೆ ಆರು ವರ್ಷವಷ್ಟೇ ಆಗಿತ್ತು. ದಲೈಲಾಮ ಸ್ಥಾನಕ್ಕೆ ಆಯ್ಕೆ ಮಾಡುವಾಗ ಬೀಜಿಂಗ್ನ ಒಪ್ಪಿಗೆ ಅತ್ಯಗತ್ಯ ಎಂದು ಚೀನಾ ಹೇಳಿಕೊಂಡಿದೆ. ಇದನ್ನು ಟಿಬೆಟ್ ತಿರಸ್ಕರಿಸಿದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications