ಅಮೆರಿಕಾದಲ್ಲಿ ಸಾಂಕ್ರಾಮಿಕ ಪಿಡುಗಿನ ನಡುವೆ ಸಂಭ್ರಮದ ದೀಪಾವಳಿ
ಕ್ಯಾಲಿಫೋರ್ನಿಯಾ, ನವೆಂಬರ್.16: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಹಬ್ಬ-ಹರಿದಿನ, ಆಚರಣೆ ರಜಾದಿನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಇದರ ಮಧ್ಯೆ ಸ್ಯಾಕ್ರಮೆಂಟೊದಲ್ಲಿ ಭಾರತೀಯ ಅಮೆರಿಕನ್ನರು ಸಂಭ್ರಮದಿಂದ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿದರು.
ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದ ಉಪನಗರ ರೋಸ್ ವಿಲ್ಲೆಯಲ್ಲಿ 100ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ನವೆಂಬರ್.08ರ ಭಾನುವಾರ ಸಂಜೆ 6 ಗಂಟೆ ವೇಳೆಗೆ ಸೇರಿಕೊಂಡು 2020ನೇ ಸಾಲಿನ ದೀಪಾವಳಿ ಹಬ್ಬವನ್ನು ಕ್ವಾರೆಂಟೈನ್ ಶೈಲಿಯಲ್ಲಿ ಆಚರಿಸಿದ್ದು ವಿಶೇಷವಾಗಿತ್ತು.
ಬೆಳಕಿನ ಹಬ್ಬಕ್ಕಾಗಿ ತಮ್ಮ ಕಾರುಗಳನ್ನು ವಿಭಿನ್ನವಾಗಿ ದೀಪಗಳಿಂದ ಅಲಂಕರಿಸಿದ್ದರು. ಕತ್ತಲ ರಾತ್ರಿಯಲ್ಲಿ ಝಗಮಗಿಸುವ ಲೈಟ್ ಗಳಿಂದ ಅಲಂಕರಿಸಿದ ಕಾರಿನಲ್ಲಿ ಭಾರತೀಯ ಶೈಲಿಯ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟ ಜನರು ಮಕ್ಕಳೊಂದಿಗೆ ಸಂಭ್ರಮಿಸುತ್ತಾ ಝೇಂಕಾರ ಹಾಕಿದರು. ಅನಿವಾಸಿ ಭಾರತೀಯರ ದೀಪಾವಳಿ ಸಂಭ್ರಮದಲ್ಲಿ ಸ್ಥಳೀಯರು ಕೂಡಾ ಕೈ ಜೋಡಿಸಿದರು.

ಕತ್ತಲೆಯ ವಿರುದ್ಧ ಬೆಳಕಿನ ಯುದ್ಧ:
ದೀಪಾವಳಿ ಭಾರತೀಯ ಸಂಪ್ರದಾಯದ ಎಲ್ಲ ಧರ್ಮದವರು ಒಗ್ಗಟ್ಟಿನಿಂದ ಆಚರಿಸುವ ಪವಿತ್ರ ಹಬ್ಬ. ಹಿಂದೂಗಳು, ಸಿಖ್ಖರು, ಬೌದ್ಧರು ಸೇರಿದಂತೆ ಆಚರಣೆಗಳ ಮೇಲೆ ನಂಬಿಕೆ ಇಲ್ಲದವರೂ ಕೂಡಾ ದೀಪಾವಳಿ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಾರೆ. ಏಕೆಂದರೆ ಆಧ್ಯಾತ್ಮಿಕವಾಗಿ ದೀಪಾವಳಿ ಹಬ್ಬವು ಕತ್ತಲೆಯಿಂದ ಬೆಳಕಿಗೆ ಸಾಗುವುದರ ಸಂಕೇತ ಎನಿಸಿದೆ. ಈ ಹಿನ್ನೆಲೆ ಮೊದಲ ಬಾರಿಗೆ ರೋಸ್ ವಿಲ್ಲೆಯಲ್ಲಿ ಸೇವಾ ಸ್ಯಾಕ್ರಮೆಂಟೊ ದೀಪಾವಳಿಯ ಬೆಳಕಿನ ಮೆರವಣಿಗೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ಶತಮಾನದಲ್ಲೇ ತೀವ್ರ ಶೀತ ಹವಾಮಾನ ದಾಖಲಾಗಿದ್ದರ ನಡುವೆಯೂ ಸ್ಥಳೀಯ ಭಾರತೀಯ ಸಮುದಾಯದ ಆಚರಣೆಗೆ ಮೆರಗು ನೀಡಲು ಸಾವಿರಾರು ಜನರು ಬೆಳಕಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಎಲ್ಕಾಗ್ರೊವ್, ಫೊಲ್ಸೊಮ್, ಆರೆಂಜ್ ವಾಲಿ, ರಾಂಚೊ, ರಾಕ್ಲಿನ್ ಮತ್ತು ರೊಸ್ ವಿಲ್ಲೆಯ ಅನಿವಾಸಿ ಭಾರತೀಯರು ತಮ್ಮ ವಾಹನಗಳನ್ನು ಝಗಮಗಿಸುವ ಎಲ್ಇಡಿ ಲೈಟುಗಳಿಂದ ಅಲಂಕರಿಸಿಕೊಂಡು ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೀಪಾವಳಿ ಹಿನ್ನೆಲೆ ಈ ಬಾರಿ ಫುಡ್ ಡ್ರೈವ್ ಮೂಲಕ 50 ಪೌಂಡ್ ಗಿಂತ ಹೆಚ್ಚು ಆಹಾರ ದೇಣಿಗೆ ಸಂಗ್ರಹಿಸಲಾಗಿತ್ತು. ಸೇವಾ ಸಂಸ್ಥೆಯು ಹೀಗೆ ಸಂಗ್ರಹಿಸಿದ ಆಹಾರದ ಕಿಟ್ ಗಳನ್ನು ಸ್ಥಳೀಯ ಆಹಾರ ಸಂಗ್ರಹಾಲಯಕ್ಕೆ ನೀಡಲಾಯಿತು. ರಿಲಾಯನ್ಸ್ ಸೂಪರ್ ಮಾರ್ಕೆಟ್ ವತಿಯಿಂದ ಬೆಳಕಿನ ಮೆರವಣಿಗೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಸಿಹಿತಿಂಡಿಯನ್ನು ವಿತರಿಸಲಾಯಿತು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications