ವಿಡಿಯೋ: ಈಜುಕೊಳದಲ್ಲಿ ಮೂರ್ಛೆ ಹೋದ ತಾಯಿ- ಮಗ ಮಾಡಿದ್ದೇನು?
ಈಜುಕೊಳದಲ್ಲಿ ಈಜುವ ವೇಳೆ ಮೂರ್ಛೆ ಹೋದ ತಾಯಿಯನ್ನು ಹತ್ತು ವರ್ಷದ ಮಗ ರಕ್ಷಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 10 ವರ್ಷದ ಬಾಲಕನೊಬ್ಬ ಮುಳುಗುತ್ತಿದ್ದ ತನ್ನ ತಾಯಿಯನ್ನು ರಕ್ಷಿಸಿದ್ದಾನೆ. ಅವರ ಮನೆಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾದಿಂದ ದೃಶ್ಯ ಸೆರೆಯಾಗಿದೆ. ಗೇವಿನ್ ಕೀನಿ ಎಂಬ ಬಾಲಕ ತನ್ನ ತಾಯಿಯನ್ನು ರಕ್ಷಸಿ ಹೀರೋ ಎನಿಸಿಕೊಂಡಿದ್ದಾರೆ. ಈ ದೃಶ್ಯ ಎಬಿಸಿ ನ್ಯೂಸ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಹಂಚಿಕೊಂಡ ನಂತರ ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಗೇವಿನ್ ಸಮಯ ಪ್ರಜ್ಞೆಯನ್ನು ಜನ ಮೆಚ್ಚಿಕೊಂಡಿದ್ದಾರೆ.
ಈ ಘಟನೆ ಅಮೆರಿಕಾದ ಕಿಂಗ್ಸ್ಟನ್ನ ಒಕ್ಲಹೋಮಾದಲ್ಲಿ ನಡೆದಿದೆ. ಈಗ ವೈರಲ್ ಆಗಿರುವ ವಿಡಿಯೊದಲ್ಲಿ, ಗೇವಿನ್ ಕೊಳದತ್ತ ಓಡಿ ಬಂದು ಏಣಿಯಿಂದ ಜಿಗಿಯುವುದನ್ನು ಕಾಣಬಹುದು. ಕೊಳದಲ್ಲಿ ಮೂರ್ಛೆ ಹೊಂದಿದ್ದ ತಾಯಿ ನೀರಿನಲ್ಲಿ ಮುಳುಗುತ್ತಿದ್ದರು. ಆಗ ಗೇವಿನ್ ತಕ್ಷಣ ಅವರನ್ನು ಮೇಲೆತ್ತಿದ್ದಾರೆ. 10 ವರ್ಷದ ಗೇವಿನ್ ತನ್ನ ತಾಯಿಯನ್ನು ಏಣಿಯ ಕಡೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವಳು ಮೂರ್ಛೆ ಹೋಗಿರುವ ಸ್ಥಿತಿಯಲ್ಲಿರುವುದು ಕಾಣಬಹುದು. ಶೀಘ್ರದಲ್ಲೇ, ಅವರ ಅಜ್ಜ ಬಂದು ಮಹಿಳೆಯನ್ನು ರಕ್ಷಿಸಲು ಈಜುಕೊಳದಲ್ಲಿ ಹಾರಿ ಮಹಿಳೆ ಹಾಗು ಹುಡುಗನನ್ನು ತಬ್ಬಿಕೊಳ್ಳುತ್ತಾರೆ.

"ಮನೆಯ ಹಿತ್ತಲಿನ ಕೊಳದಲ್ಲಿ ಮೂರ್ಛೆ ಹೋಗಿ ಮುಳುಗುತ್ತಿದ್ದ ತಾಯಿಯನ್ನು 10 ವರ್ಷದ ಗೇವಿನ್ ಕೀನಿ ಕಾರ್ಯಪ್ರವೃತ್ತರಾದ ಕ್ಷಣವೇ ರಕ್ಷಿಸಿದ್ದಾನೆ. ಹೋಮ್ ಸೆಕ್ಯುರಿಟಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ನಂತರ ಅವನ ಅಜ್ಜ ಸಹಾಯಕ್ಕಾಗಿ ಜಿಗಿಯುವವರೆಗೂ ಅವಳ ತಲೆಯನ್ನು ನೀರಿನ ಮೇಲೆ ಮುಳುಗದಂತೆ ನೋಡಿಕೊಳ್ಳುತ್ತಾನೆ" ಎಂದು ಪೋಸ್ಟ್ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ವೈರಲ್ ವಿಡಿಯೊವನ್ನು ಇಲ್ಲಿ ನೋಡಿ:
ನೆಟಿಜನ್ಗಳು ಚಿಕ್ಕ ಹುಡುಗನ ಧೈರ್ಯವನ್ನು ಶ್ಲಾಘಿಸಿದ್ದಾರೆ ಮತ್ತು ಕಾಮೆಂಟ್ಗಳ ವಿಭಾಗದಲ್ಲಿ ಅವನನ್ನು ಹೊಗಳಿದ್ದಾರೆ. "ಎಲ್ಲಾ ನಾಯಕರು ಕ್ಯಾಪ್ಗಳನ್ನು ಧರಿಸುವುದಿಲ್ಲ, ಕೆಲವರು ಈಜು ಪ್ರಜ್ಞೆಯನ್ನು ಹೊಂದಿರುತ್ತಾರೆ" ಎಂದು ಬಳಕೆದಾರರು ಬರೆದಿದ್ದಾರೆ.
ಮತ್ತೊಬ್ಬ ಬಳಕೆದಾರರು, "ಈ ಮಗು ತನ್ನ ತಾಯಿಯ ಮೇಲೆ ಹೊಂದಿರುವ ಪ್ರೀತಿಯು ಅವಳು ಅವನನ್ನು ಎಷ್ಟು ಪ್ರೀತಿಸುತ್ತಾಳೆಂದು ತೋರಿಸುತ್ತದೆ" ಈ ವಿಡಿಯೋ ವೃರಲ್ ಬಳಿಕ, ಕಿಂಗ್ಸ್ಟನ್, ಒಕ್ಲಹೋಮಾ ಪೊಲೀಸ್ ಇಲಾಖೆಯು ನಂತರ ಗೇವಿನ್ ಅವರ ಧೈರ್ಯಕ್ಕಾಗಿ ಪ್ರಶಸ್ತಿಯನ್ನು ನೀಡಿದೆ ಎಂದು ಹೇಳಲಾಗಿದೆ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications