ಬಿಇಓ ಕಿರುಕುಳ : ಗುತ್ತಿಗೆ ನೌಕರ ಆತ್ಮಹತ್ಯೆಗೆ ಯತ್ನ
ವಿಜಯಪುರ, ಡಿಸೆಂಬರ್ 08 : ಲಂಚ ನೀಡುವಂತೆ ಬಿಇಓ ನಿರಂತರ ಕಿರುಕುಳ ಇದರಿಂದ ಬೇಸತ್ತು ಕಂಪ್ಯೂಟರ್ ಆಪರೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗುತ್ತಿಗೆ ನೌಕರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ.
ವಿಜಯಪುರ: ಬಿಸಿಎಂ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿ
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಓತಿಹಾನ ಗ್ರಾಮದ ನಿವಾಸಿ ಬಸವರಾಜ ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆ ನೌಕರ, ಸಿಂದಗಿ ಬಿಇಓ ಆರಿಫ್ ಬಿರಾದಾರ ನೀಡಿದ ಕಿರುಕುಳದಿಂದ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ.
ಬಿಇಓ ಲಂಚ ನೀಡುವಮತೆ ಕುರುಕುಳ ನೀಡುತ್ತಿದ್ದ ಎಂದು ಆರೋಪಿಸಿ ವಾಟ್ಸಾಪ್ ನಲ್ಲಿ ಡೆತ್ ನೋಟ್ ಬರೆದು ಬಿಇಓ ಕಚೇರಿ ಸಿಬ್ಬಂದಿ ಬಸವರಾಜ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಬಿಇಓ ಕಚೇರಿಯಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್ ಅಗಿರುವ ಬಸವರಾಜ್ ರಿಜಾಯಿನ್ ಮಾಡಿಕೊಳ್ಳು ಬಿಇಓ ಅವರು ಲಂಚ ಕೇಳಿದ್ದಾರೆ. ಒಂದು ತಿಂಗಳ ಸಂಬಳ 09 ಸಾವಿರ ರೂ. ನೀಡುವಂತೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.