ಸಾರ್ವಜನಿಕ ಗಣೇಶ ಹಬ್ಬ ನಿರ್ಬಂಧಕ್ಕೆ ಬಿಜೆಪಿ ಶಾಸಕ ಯತ್ನಾಳ್ ಸಿಡಿಮಿಡಿ
ವಿಜಯಪುರ, ಆಗಸ್ಟ್ 13: ಸಾರ್ವಜನಿಕ ಗಣೇಶೋತ್ಸವ ಆಚರಣೆ ನಿಷೇಧಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಕೋವಿಡ್
ಸೋಂಕು
ನೆಪದಲ್ಲಿ
ಕೇವಲ
ಹಿಂದೂಗಳ
ಹಬ್ಬಕ್ಕೆ
ನಿರ್ಬಂಧ
ವಿಧಿಸಿದರೆ
ನಡೆಯಲ್ಲ.
ಮೋಹರಂ
ಸೇರಿ
ಎಲ್ಲ
ಹಬ್ಬಕ್ಕೂ
ನಿರ್ಬಂಧ
ಅನ್ವಯವಾಗಲಿ,"
ಎಂದು
ವಿಜಯಪುರ
ಬಿಜೆಪಿ
ಶಾಸಕ
ಬಸನಗೌಡ
ಪಾಟೀಲ್
ಯತ್ನಾಳ್
ಶುಕ್ರವಾರ
ಸಿಎಂ
ಬಸವರಾಜ
ಬೊಮ್ಮಾಯಿಗೆ
ಎಚ್ಚರಿಕೆ
ನೀಡಿದರು.
"ಅವರಿಗೊಂದು
ಕಾನೂನು,
ನಮಗೊಂದು
ಕಾನೂನು
ಅಂದರೆ
ನಡೆಯಲ್ಲ.
ಹಿಂದೂಗಳಿಗೆ
ಮಾತ್ರ
ಈ
ನಿರ್ಬಂಧ
ಹಾಕಿದರೆ
ಅದನ್ನು
ಉಲ್ಲಂಘಿಸುತ್ತೇವೆ,"
ಎಂದು
ಬಸನಗೌಡ
ಪಾಟೀಲ
ಯತ್ನಾಳ್
ಸರ್ಕಾರದ
ವಿರುದ್ಧವೇ
ಕಿಡಿಕಾರಿದರು.
ರಾಜ್ಯದಲ್ಲಿ ಗಣೇಶ ಹಬ್ಬಕ್ಕೆ ಕೋವಿಡ್ ನೆಪದಲ್ಲಿ ಹಲವು ನಿರ್ಬಂಧ ಹೇರಿರುವ ವಿಚಾರವಾಗಿ ವಿಜಯಪುರದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಕೋವಿಡ್ ಮೂರನೆ ಅಲೆಯ ಭೀತಿಯಿಂದ ರಾಜ್ಯ ಸರ್ಕಾರ ಗಣೇಶ ಹಬ್ಬಕ್ಕೆ ನಿರ್ಭಂದಗಳನ್ನು ವಿಧಿಸಿದೆ.
ಅವರಿಗೊಂದು ಕಾನೂನು, ನಮಗೊಂದು ಕಾನೂನು ನಡಿಯಲ್ಲ
"ಜನರ ರಕ್ಷಣೆಗಾಗಿ ನಿರ್ಬಂಧ ವಿಧಿಸಿದ್ದರ ಬಗ್ಗೆ ನಮಗೆ ಆಕ್ಷೇಪವಿಲ್ಲ. ಅದನ್ನು ಎಲ್ಲರೂ ಪಾಲಿಸುತ್ತೇವೆ. ಆದರೆ ಕೋವಿಡ್ ನೆಪದಲ್ಲಿ ಕೇವಲ ಹಿಂದೂಗಳ ಹಬ್ಬಕ್ಕೆ ನಿರ್ಬಂಧ ವಿಧಿಸಿದರೆ ಅದು ಸರಿಯಲ್ಲ. ಮೋಹರಂ ಸೇರಿದಂತೆ ಮುಂಬರುವ ಎಲ್ಲಾ ಹಬ್ಬಗಳಿಗೂ ನಿರ್ಬಂಧಗಳು ಅನ್ವಯವಾಗಬೇಕು," ಎಂದು ತಿಳಿಸಿದ್ದಾರೆ.
"ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಅವರಿಗೊಂದು ಕಾನೂನು, ನಮಗೊಂದು ಕಾನೂನು ನಡಿಯಲ್ಲ ಅಂದುಕೊಂಡಿದ್ದೇನೆ. ಕೋವಿಡ್ ನಿರ್ಬಂಧಗಳನ್ನು ಕೇವಲ ಹಿಂದೂಗಳಿಗೆ ಮಾತ್ರ ಹಾಕಿದರೆ ಅದನ್ನು ಉಲ್ಲಂಘನೆ ಮಾಡುತ್ತೇವೆ," ಎಂದು ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಸಿದ್ದಾರೆ.ಆನಂದ್ ಸಿಂಗ್ ಉತ್ತಮ ಆಡಳಿತಗಾರರು
ಇನ್ನು ಖಾತೆ ಹಂಚಿಕೆ ಬಗ್ಗೆ ಸಚಿವ ಆನಂದ ಸಿಂಗ್ ಅಸಮಾಧಾನಗೊಂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, "ಆನಂದ್ ಸಿಂಗ್ ಉತ್ತಮ ಆಡಳಿತಗಾರರು. ಅವರಿಗೆ ಅನ್ಯಾಯವಾಗದಂತೆ ಬಿಜೆಪಿ ನೋಡಿಕೊಳ್ಳಬೇಕು. ಬಿಜೆಪಿ ಸರ್ಕಾರ ರಚನೆ ಮಾಡಲು ಆನಂದ್ ಸಿಂಗ್ ಪಾತ್ರ ಬಹಳ ಪ್ರಮುಖವಾಗಿದೆ. ಈ ಹಿಂದೆ ಅರಣ್ಯ ಇಲಾಖೆಯಲ್ಲಿದ್ದ ಹಲವು ಸಮಸ್ಯೆಗಳನ್ನು ಆನಂದ್ ಸಿಂಗ್ ಬಗೆಹರಿಸಿದ್ದಾರೆ. ಆನಂದ್ ಸಿಂಗ್ ಸಮರ್ಥವಾಗಿ ಖಾತೆಗಳನ್ನು ನಿಭಾಯಿಸಿದ್ದಾರೆ. ಅವರ ಬೇಡಿಕೆಯನ್ನು ಮುಖ್ಯಮಂತ್ರಿಗಳು ಪೂರೈಸಬೇಕು," ಎಂದು ಸಲಹೆ ನೀಡಿದರು.
ಸಹಕಾರಿ ಸಂಘದಲ್ಲಿ 40 ಕೋಟಿ ರೂ. ಅವ್ಯವಹಾರ
"ಎಂಆರ್ಎನ್ ಸೌಹಾರ್ದ ಸಹಕಾರಿ ಸಂಘದಲ್ಲಿ 40 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು. ಸಹಕಾರಿ ಸಂಘದ ಅವ್ಯವಹಾರವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಇದೇ ರೀತಿ ಈಶ್ವರ ಕ್ರೆಡಿಟ್ ಸೊಸೈಟಿಯಲ್ಲೂ ಅವ್ಯವಹಾರ ನಡೆದಿದೆ. ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಯತ್ನಾಳ್ ಒತ್ತಾಯಿಸಿದರು.
ಇದೇ ರೀತಿ ಅಪೆಕ್ಸ್ ಬ್ಯಾಂಕ್ನಲ್ಲೂ ಅವ್ಯವಹಾರ ನಡೆದಿದ್ದು, ದಾಖಲೆ ಇಲ್ಲದೆ ಸಾಲ ನೀಡಲಾಗಿದೆ. ಅವ್ಯವಹಾರಗಳ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದೇನೆ. ಸಕ್ಕರೆಯಿಲ್ಲದ ಗೋದಾಮಿಗೆ ಸಹಕಾರಿ ಬ್ಯಾಂಕ್ಗಳಿಂದ ಸಾಲ ನೀಡಲಾಗಿದೆ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸಮಗ್ರ ತನಿಖೆ ನಡೆಸಬೇಕು," ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪರೊಕ್ಷವಾಗಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಹರಿಹಾಯ್ದರು.ಕೂಡು ಒಕ್ಕಲಿಗ ಸಮಾಜಗಳಿಗೆ 2ಎ ಮೀಸಲಾತಿ ನೀಡಬೇಕು
"ಮೀಸಲಾತಿ
ನೀಡುವ
ಅಧಿಕಾರವನ್ನು
ರಾಜ್ಯಗಳಿಗೆ
ನೀಡಿರುವ
ಪ್ರಧಾನಿಗಳ
ಈ
ಐತಿಹಾಸಿಕ
ತಿದ್ದುಪಡಿಯನ್ನು
ಸ್ವಾಗತಿಸುತ್ತೇನೆ
ಎಂದ
ಶಾಸಕ
ಬಸನಗೌಡ
ಯತ್ನಾಳ್,
ಮೀಸಲಾತಿ
ವಿಚಾರವಾಗಿ
ನಾನು
ಸಿಎಂ
ಬಸವರಾಜ
ಬೊಮ್ಮಾಯಿಗೆ
ಒತ್ತಾಯ
ಮಾಡುವೆ.
ಈಗ
ಯಾವುದೇ
ನೆಪ
ಹೇಳಲು
ಬರಲ್ಲ.
ಆದಷ್ಟು
ಬೇಗ
ಪಂಚಮಸಾಲಿ
ಲಿಂಗಾಯತ
ಸಮಾಜ,
ಆದಿ
ಬಣಜಿಗ,
ಕೂಡು
ಒಕ್ಕಲಿಗ
ಸಮಾಜಗಳಿಗೆ
2ಎ
ಮೀಸಲಾತಿ
ನೀಡಬೇಕು.
ಕುರುಬ
ಸಮಾಜವನ್ನು
ಎಸ್ಟಿಗೆ
ಸೇರಿಸಲು
ಕೇಂದ್ರಕ್ಕೆ
ಶಿಫಾರಸ್ಸು
ಮಾಡಬೇಕು.
ಎಸ್ಟಿ
ಸಮಾಜದ
ಮೀಸಲಾತಿಯನ್ನು
ಮೂರು
ಪ್ರತಿಶತದಿಂದ
7.5
ಪ್ರತಿಶತಕ್ಕೆ
ಏರಿಸಲು
ಕೇಂದ್ರ
ಸರ್ಕಾರಕ್ಕೆ
ಶಿಫಾರಸ್ಸು
ಮಾಡಬೇಕೆಂದು
ಯತ್ನಾಳ್
ಆಗ್ರಹಿಸಿದರು.
ಇದರ
ಜೊತೆಗೆ
ಮಡಿವಾಳ
ಸಮಾಜ,
ಹಡಪದ
ಸಮಾಜ,
ಗಂಗಾ
ಮತಸ್ಥ,
ತಳವಾರ
,ಕೋಳಿ
ಸಮಾಜಕ್ಕೂ
ಎಸ್ಟಿಗೆ
ಸೇರಿಸಬೇಕು.
ಈ
ನಿಟ್ಟಿನಲ್ಲಿ
ಸಿಎಂ
ಕ್ರಮ
ತೆಗೆದುಕೊಳ್ಳದಿದ್ದರೆ
ಅನಿವಾರ್ಯವಾಗಿ
ಹೋರಾಟ
ನಡೆಸುತ್ತೇವೆ,"
ಎಂದು
ಯತ್ನಾಳ್
ಎಚ್ಚರಿಕೆ
ನೀಡಿದರು.
ಪ್ರೀತಂ ಗೌಡ ಜೆಡಿಎಸ್ ವಿರುದ್ಧ ಹೋರಾಟ ಮಾಡಿದ್ದಾರೆ
ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಸನಗೌಡ ಪಾಟೀಲ ಯತ್ನಾಳ್, "ಹಾಸನ ಶಾಸಕ ಪ್ರೀತಂ ಗೌಡ ಜೆಡಿಎಸ್ ವಿರುದ್ಧ ಹೋರಾಟ ಮಾಡಿ ಶಾಸಕರಾಗಿ ಆಯ್ಕೆಯಾಗಿ ಬಂದಿದ್ದಾರೆ. ಸಿಎಂ ಬೊಮ್ಮಾಯಿ ಮಾಜಿ ಪ್ರಧಾನಿ ದೇವೇಗೌಡರ ಭೇಟಿ ಮಾಡಿದ್ದಕ್ಕೆ ಒಂದು ರೀತಿಯ ಕಸಿವಿಸಿ ಆಗಿದೆ. ದೇವೇಗೌಡರನ್ನು ಭೇಟಿಯಾಗಿರುವ ಬಗ್ಗೆ ನನಗೆ ವೈಯಕ್ತಿಕ ಬೇಸರವಿಲ್ಲ. ದೇವೇಗೌಡರು ದೇಶದ ಪ್ರಧಾನಿಯಾಗಿದ್ದವರು. ಆದರೆ ಮುಖ್ಯಮಂತ್ರಿ ಕೇವಲ ದೇವೇಗೌಡರನ್ನು ಮಾತ್ರ ಭೇಟಿಯಾಗಿದ್ದು ಸರಿಯಲ್ಲ," ಎಂದು ತಿಳಿಸಿದರು.
"ಈ ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದ ಎಲ್ಲಾ ಮಾಜಿ ಸಿಎಂಗಳ ಮನೆಗೆ ಹೋಗಿ ಭೇಟಿಯಾಗಿದ್ದರು. ಅದೇ ಮಾದರಿಯಲ್ಲಿ ಸಿಎಂ ಬೊಮ್ಮಾಯಿ ರಾಜ್ಯದ ಮಾಜಿ ಸಿಎಂಗಳ ಭೇಟಿ ಮಾಡಿದ್ದರೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ," ಎಂದು ಹೇಳಿದ್ದಾರೆ.
Recommended Video