ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ; ರಸ್ತೆ ಗುಂಡಿ ಮುಚ್ಚಲು ಆಗ್ರಹ, ಗಿಡ ನೆಟ್ಟು ಪ್ರತಿಭಟನೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜೂನ್ 16; ಕರಾವಳಿಯಲ್ಲಿ ಮಳೆ ಜೋರಾಗಿದೆ. ಮುಂಗಾರಿನ ಆಗಮನದೊಂದಿಗೇ ರಸ್ತೆಯಲ್ಲಿ ಹೊಂಡಗಳು ಬಿದ್ದಿದ್ದು, ಪಾದಚಾರಿಗಳು ಮತ್ತು ವಾಹನ‌ ಸವಾರರು ಪರದಾಡುವ ಪರಿಸ್ಥಿತಿ ಬಂದಿದೆ.

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಹೊಂಡ ಮುಚ್ಚದ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿದರು. ರಸ್ತೆ ಹೊಂಡದಲ್ಲಿ ಗಿಡ ನೆಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಕಳ ಕ್ಷೇತ್ರದ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಸರಕಾರದ ಮುಖ್ಯ ಸಚೇತಕರು ಹೌದು. ಕೋವಿಡ್ ಸಂದರ್ಭದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬಿಳಿ ಬೆಂಡೆ ಬೀಜ ಹಂಚುವ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಆರೋಪಿಸಿದೆ.

ವಾಹನ ಸಂಚಾರಕ್ಕೆ ಮುಕ್ತವಾದ ಹುಲಿಕಲ್ ಘಾಟ್ ರಸ್ತೆವಾಹನ ಸಂಚಾರಕ್ಕೆ ಮುಕ್ತವಾದ ಹುಲಿಕಲ್ ಘಾಟ್ ರಸ್ತೆ

Youth Congress Stage Protest By Planting Trees Inside Potholes On Roads

ಬಿಳಿ ಬೆಂಡೆ ಬೀಜವನ್ನು ಕ್ಷೇತ್ರದಾದ್ಯಂತ ಹಂಚುವ ಆಂದೋಲನವನ್ನೇ ಸುನಿಲ್ ಕುಮಾರ್ ಮಾಡುತ್ತಿದ್ದಾರೆ. ಆದರೆ ಜನರಿಗೆ ಅಗತ್ಯವಾಗಿ ಬೇಕಾದ ಮೂಲಸೌಕರ್ಯ ಮತ್ತು ಕೊರೊನಾ ನಿಯಂತ್ರಣದ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ದೂರಿದರು.

ಉಡುಪಿ; ಕಟಪಾಡಿಯಲ್ಲಿ ಓವರ್ ಪಾಸ್‌ ನಿರ್ಮಾಣಕ್ಕೆ ಕೇಂದ್ರದ ಒಪ್ಪಿಗೆ ಉಡುಪಿ; ಕಟಪಾಡಿಯಲ್ಲಿ ಓವರ್ ಪಾಸ್‌ ನಿರ್ಮಾಣಕ್ಕೆ ಕೇಂದ್ರದ ಒಪ್ಪಿಗೆ

ರಸ್ತೆ ಸರಿ ಮಾಡಿಸಿ ಎಂದು ಆಗ್ರಹಿಸಲು ಬೆಂಡೆ ಗಿಡವನ್ನೇ ತಂದು ರಸ್ತೆಯ ಹೊಂಡದಲ್ಲಿ ನೆಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವಿಶಿಷ್ಟ ರೀತಿಯ ಪ್ರತಿಭಟನೆ ಜನರ ಗಮನ ಸೆಳೆಯಿತು.

English summary
Youth Congress protest in Udupi district Karkala by planting trees inside potholes on roads and demand to repair road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X