ಶಿವಕುಮಾರ ಸ್ವಾಮೀಜಿಗಳ ನಿಕಟ ಸಂಬಂಧ ಸ್ಮರಿಸಿದ ಪೇಜಾವರ ಶ್ರೀ
Recommended Video

ಉಡುಪಿ, ಜನವರಿ 21: ಸೋಮವಾರ ಲಿಂಗೈಕ್ಯರಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರೊಂದಿಗೆ ವೈಯಕ್ತಿಕವಾಗಿ ನಿಕಟ ಸಂಪರ್ಕ ಹೊಂದಿದ್ದನ್ನು ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಸ್ಮರಿಸಿಕೊಂಡಿದ್ದಾರೆ.
ಸಿದ್ದಗಂಗಾ ಶ್ರೀಗಳ ಅಲುವಿಕೆಗೆ ಸಂತಾಪ ವ್ಯಕ್ತಪಡಿಸಿ ಅವರು ವಿಡಿಯೋದಲ್ಲಿ ದುಃಖ ಹಂಚಿಕೊಂಡಿದ್ದಾರೆ.
'ಸಿದ್ದಗಂಗಾ ಮಠದ ಹಿರಿಯ ಯತಿಗಳಾದ ಶಿವಕುಮಾರ ಸ್ವಾಮೀಜಿ ಅವರ ಅಗಲುವಿಕೆಯಿಂದ ಎಲ್ಲ ಕನ್ನಡಿಗರಿಗೂ ಅತ್ಯಂತ ದುಃಖವಾಗಿದೆ. ಅವರು 110 ವರ್ಷ ಬದುಕಿದ್ದರು. ಅಷ್ಟು ವರ್ಷ ಅವರ ಸೇವೆ ದೊರಕಿದೆ. ಆದರೂ ಕನ್ನಡಿಗರಿಗೆ ತೃಪ್ತಿಯಿಲ್ಲ. ಅವರು ಇನ್ನೂ ಬದುಕಿರಬೇಕಿತ್ತು. ಜನರಿಗೆ ಅವರ ಮೇಲೆ ಇರುವ ಅಭಿಮಾನವಿದು. ಅಂತಹ ಸೇವೆಯನ್ನು ಅವರು ಮಾಡಿದ್ದಾರೆ. ಅವರ ಸೇವೆ ಅದ್ಭುತ. ಅವರ ಕಾರ್ಯ ಎಲ್ಲ ಮಠಾಧೀಶರಿಗೂ ಮಾದರಿ. ಅಂತಹ ಸೇವೆಯನ್ನು ಲಕ್ಷಾಂತರ ಮಕ್ಕಳಿಗೆ ಒದಗಿಸಿಕೊಟ್ಟಿದ್ದಾರೆ, ಅವರು ದೊಡ್ಡ ಕರ್ಮಯೋಗಿಗಳು' ಎಂದು ಪೇಜಾವರ ಶ್ರೀಗಳು ಸ್ಮರಿಸಿದ್ದಾರೆ.

ಮೂರು ಹೊತ್ತೂ ಬಹುಶಃ ಆಧ್ಯಾತ್ಮಿಕ ಸಾಧನೆ ಮತ್ತು ಸಾಮಾಜಿಕ ಸಾಧನೆ ಎರಡನ್ನೂ ಮಾಡಿಕೊಂಡು 110 ವರ್ಷ ಬದುಕಿದ್ದೇ ದೊಡ್ಡ ಪವಾಡ. ನಮಗೂ ಅವರಿಗೂ ಬಹಳ ವರ್ಷಗಳ ನಿಕಟ ಸಂಬಂಧ ಇತ್ತು. ಮೊದಲು ನಾನೇ ಅವರ ಸಾಧನೆಗಳನ್ನು ಕೇಳಿ ಸಿದ್ದಗಂಗಾ ಮಠಕ್ಕೆ ತೆರಳಿ ಅಲ್ಲಿನ ಚಟುವಟಿಕೆಗಳನ್ನು ಕಂಡು ಅವರನ್ನು ಭೇಟಿ ಮಾಡಿದ್ದೆ.
ನಮ್ಮ ಮಠಕ್ಕೆ ಎರಡನೆಯ ಪರ್ಯಾಯದ ವೇಳೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮಕ್ಕೆ ಬಂದು ಭಾಗವಹಿಸಿದ್ದರು. ಉಡುಪಿಯ ಕೃಷ್ಣ ಮಠದ ಕಾರ್ಯಕ್ರಮದಲ್ಲಿ ಲಿಂಗಾಯತ ಸ್ವಾಮೀಜಿಗಳು ಭಾಗವಹಿಸಿದ್ದು ಅದೇ ಮೊದಲು.
ಹಿಂದಿನ ಸುತ್ತೂರು ಸ್ವಾಮೀಜಿಗಳ ಪರ್ಯಾಯದ ಅವಧಿಯಲ್ಲಿ ಬಂದಿದ್ದರು, ನಮಗೂ ಅವರಿಗೂ ಸಿದ್ದಗಂಗಾ ಮಠ, ಉಡುಪಿ ಹಾಗೂ ಬೇರೆಡೆ ವಿವಿಧ ಸಂದರ್ಭಗಳಲ್ಲಿ ಭೇಟಿಯಾಗಿದೆ. ನಮ್ಮ ಹಾಗೂ ಅವರ ನಡುವೆ ವಿಶೇಷ ನಿಕಟವಾದ ಸಂಬಂಧವಿತ್ತು. ವಿಶೇಷ ಪ್ರೀತಿ ಅಭಿಮಾನವೂ ಇತ್ತು. ಅದನ್ನೆಲ್ಲ ಸ್ಮರಿಸುತ್ತಿದ್ದೇವೆ. ಅವರು ಮಾಡಿದ ಸೇವೆಯನ್ನೂ ಕೂಡ ಸ್ಮರಿಸುತ್ತೇವೆ.
ನಮ್ಮನ್ನು ಅಗಲಿದರೂ ಅವರು ಮಾಡಿದ ಸೇವೆ ಎಲ್ಲ ಕನ್ನಡಿಗರೂ ಮಠಾಧಿಪತಿಗಳೂ ಮಾದರಿಯನ್ನಾಗಿ ಪಡೆಯಬೇಕು ಎನ್ನುತ್ತೇನೆ ಎಂದು ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications