ಉಡುಪಿಯಲ್ಲಿ ತ್ಯಾಜ್ಯ ವಿಲೇವಾರಿಗೆ 13.5 ಕೋಟಿಯ ಮಾಸ್ಟರ್ ಪ್ಲ್ಯಾನ್
ಈ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಅಂದಾಜು ವೆಚ್ಚ ರೂ 13.5 ಕೋಟಿ. ನಿರ್ವಹಣಾ ವೆಚ್ಚ ಪ್ರತಿ ವರ್ಷಕ್ಕೆ ಸುಮಾರು ರೂ 10 ಕೋಟಿ. ಈ ಎಲ್ಲ ವೆಚ್ಚವನ್ನು ಉಡುಪಿ ನಗರಪಾಲಿಕೆ ಭರಿಸಲಿದೆ.
ಉಡುಪಿ, ಏಪ್ರಿಲ್ 24: ಉಡುಪಿ ನಗರ ಸಭೆ 13.5 ಕೋಟಿ ವೆಚ್ಚದಲ್ಲಿ ನೂತನ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಆರಂಭಸಲಿದೆ. ವಿವಿಧ ತಂತ್ರಗಳನ್ನು ಬಳಸಿಕೊಂಡು ಸಂಪೂರ್ಣ ತ್ಯಾಜ್ಯ ನಿರ್ವಹಣೆ ಮಾಡುವುದೇ ಈ ವ್ಯವಸ್ಥೆಯ ಉದ್ದೇಶವಾಗಿದೆ.
ಕಾಂಪೋಸ್ಟ್ ಪೈಪ್ ಅಥವಾ ಇತರ ಯಾವುದೇ ಕಾಂಪೋಸ್ಟ್ ವ್ಯವಸ್ಥೆ ಬಳಸಿಕೊಂಡು ಪ್ರತಿ ಮನೆ ಅಥವಾ ಅಪಾರ್ಟ್ಮೆಂಟಿನ ತ್ಯಾಜ್ಯವನ್ನು ಸಾಧ್ಯವಾದಷ್ಟು ವಿಲೇವಾರಿ ಮಾಡುವುದು ಈ ಪ್ರಸ್ತಾವನೆಯ ಗುರಿ. ಈ ಯೋಜನೆಯ ವೆಚ್ಚ ಅಂದಾಜು ರೂ 13.5 ಕೋಟಿ. ನಿರ್ವಹಣಾ ವೆಚ್ಚ ಪ್ರತಿ ವರ್ಷಕ್ಕೆ ಸುಮಾರು ರೂ 10 ಕೋಟಿ. ಈ ಎಲ್ಲ ವೆಚ್ಚವನ್ನು ಉಡುಪಿ ನಗರಪಾಲಿಕೆ ಭರಿಸಲಿದೆ.[ನಾನು ಢೋಂಗಿ ಆಸ್ತಿಕನಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ]

ಹೊಸ ವ್ಯವಸ್ಥೆಯ ಪ್ರಕಾರ ಒಣ ತ್ಯಾಜ್ಯ ಮತ್ತು ಹಸಿ ತ್ಯಾಜ್ಯ ಪ್ರತ್ಯೇಕಿಸಿಡಬೇಕು. ಹಸಿ ತ್ಯಾಜ್ಯವನ್ನು ವಾರಕ್ಕೆ ಒಂದು ಬಾರಿ ಮತ್ತು ಒಣ ತ್ಯಾಜ್ಯವನ್ನು ಪ್ರತಿದಿನ ವಿಲೇವಾರಿ ಮಾಡಲಾಗುವುದು.
ಸಂಗ್ರಹಿಸಿದ ತ್ಯಾಜ್ಯ ಸಾಗಿಸಲು ನಗರಪಾಲಿಕೆಯಲ್ಲಿ ಕೇವಲ 18 ವಾಹನಗಳಿವೆ. ಉಡುಪಿ ನಗರಪಾಲಿಕೆ ಈಗಾಗಲೇ ಸಮಗ್ರ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಅನುಸರಿಸುತ್ತಿದೆ. ಇದು ಆರಂಭವಾದರೆ ಇನ್ನೂ ಹೆಚ್ಚಿನ ವಾಹನಗಳು ಜತೆಗೆ ತ್ಯಾಜ್ಯ ವಿಲೇವಾರಿಗೆ ಸಹಾಯಕವಾಗಲಿದೆ.[ಉಡುಪಿಗೂ ಬಂತು ಅಲ್ ಟೆರೇನ್ ಬೈಕ್, ಕಾಯಕ್ ಬೋಟ್]
ಈಗಾಗಲೇ ಯೋಜನೆಯ ಡಿಪಿಆರ್ ಸಿದ್ಧವಾಗಿದೆ. ಇದನ್ನು ಸದ್ಯದಲ್ಲೇ ರಾಜ್ಯ ಮಟ್ಟದ ತಾಂತ್ರಿಕ ಸಮಿತಿಗೆ ಕಳುಹಿಸಲಾಗುವುದು. ಇದನ್ನು ಪರೀಕ್ಷಿಸಿ, ತಪ್ಪುಗಳಿದ್ದಲ್ಲಿ ಸರಿಪಡಿಸಿ ಸಮಿತಿ ಸಲಹೆಗಳನ್ನು ನೀಡುತ್ತದೆ. ಆ ಪ್ರಕಾರ ತಪ್ಪುಗಳನ್ನು ಸರಿಪಡಿಸಿ ಮರು ಕಳುಹಿಸಿದರೆ ಯೋಜನೆಗೆ ತಾಂತ್ರಿಕ ಪರಿಣತರು ಅನುಮತಿ ನೀಡಲಿದ್ದಾರೆ.
ಆ ಬಳಿಕ ಆಡಳಿತಾತ್ಮಕ ಸಮಿತಿಯ ಅನುಮತಿ ಅವಶ್ಯಕತೆ ಇದೆ. ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಗಳನ್ನು ಬಿಡುಗಡೆಗೊಳಿಸಲಿವೆ. ಇದರೊಂದಿಗೆ ನಗಪಾಲಿಕೆ ತನ್ನ ಪಾಲು ಕೂಡ ನೀಡಲಿದೆ ಎಂದು ಪರಿಸರ ಇಂಜಿನಿಯರ್ ರಾಘವೇಂದ್ರ ಹೇಳಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications