'ತುಳುನಾಡ್ ತಿರ್ಗಾಟದ ತೇರ್'ಗೆ ಪೇಜಾವರ ಶ್ರೀ ಸ್ವಾಗತ
ಉಡುಪಿ, ಸೆಪ್ಟೆಂಬರ್ 9: ಎಲ್ಲ ತೊಳೆಗಳು ಒಟ್ಟಿಗೆ ಇದ್ದಾಗ ಮಾತ್ರ ಕಿತ್ತಳೆ ಹಣ್ಣಿಗೆ ಬೆಲೆ ಇರುವಂತೆ ಎಲ್ಲ ಭಾಷೆಗಳು ಒಟ್ಟಾಗಿದ್ದು, ಉಳಿದು- ಬೆಳೆಯಬೇಕು. ಪ್ರತ್ಯೇಕವಾಗಿ ಬೆಳೆಯುವುದಕ್ಕೆ ಹೊರಟರೆ ಅಂತಹ ಭಾಷೆ ಬೆಲೆ ಕಳೆದುಕೊಳ್ಳುತ್ತದೆ ಎಂದು ಪೇಜಾವರ ಮಠದ ವಿಶೇಷ ತೀರ್ಥ ಸ್ವಾಮೀಜಿ ಹೇಳಿದರು.
ಕಾಸರಗೋಡಿನ ಬದಿಯಡ್ಕದಲ್ಲಿ ಡಿ.9 ರಿಂದ 13ರ ವರೆಗೆ ನಡೆಯುವ 'ವಿಶ್ವ ತುಳುವೆರೆ ಆಯನೊ-2016' ಕ್ಕೆ ಪೂರ್ವಭಾವಿಯಾಗಿ ಹೊರಟಿರುವ ಪ್ರಚಾರ ರಥ 'ತುಳುನಾಡ್ ತಿರ್ಗಾಟದ ತೇರ್' ಅನ್ನು ಗುರುವಾರ ಬರಮಾಡಿಕೊಂಡು, ಮುಂದಿನ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.[ಉಡುಪಿ ಕೃಷ್ಣ ಮಠದ ಸೇವೆ ಬುಕ್ ಮಾಡಲು ವೆಬ್ ಸೈಟ್]
ಕನ್ನಡ ನಮ್ಮ ರಾಜ್ಯ ಭಾಷೆಯಾಗಿದೆ. ತುಳುನಾಡಿನಲ್ಲಿ ತುಳು ಮಾತೃ ಭಾಷೆಯಾದರೂ ಬದುಕುವುದಕ್ಕೆ ಇತರ ವ್ಯಾವಹಾರಿಕ ಭಾಷೆಗಳನ್ನು ಕಲಿಯಬೇಕಾಗುತ್ತದೆ. ಆದರೆ ವ್ಯಾವಹಾರಿಕ ಭಾಷೆಗಳನ್ನು ಕಲಿತ ಮೇಲೆ ಮಾತೃ ಭಾಷೆಯನ್ನು ಮರೆಯಬಾರದು. ಮಾತ್ರ ಭಾಷೆ ಕಲಿಸಿದ ಸಂಸ್ಕೃತಿ - ಸಂಸ್ಕಾರಗಳನ್ನು ಬಿಡಬಾರದು ಎಂದು ಹೇಳಿದರು.
Comments
English summary
'World tulu meet' will be in Kasargod, from December 9th to 13th. Before the meet there is a publicity by 'Tulunadu tirgatada ter', welcomed to Udupi by Pejawar seer.