ಕೊನೆಗೂ ನಡೆಯಿತು ಶೀರೂರು ಶ್ರೀಗಳ ಆರಾಧನೆ!
Recommended Video

ಉಡುಪಿ, ಸೆಪ್ಟೆಂಬರ್.05: ಜುಲೈ 19 ರಂದು ಮೃತಪಟ್ಡಿದ್ದ ಶಿರೂರು ಲಕ್ಷ್ಮೀವರ ತೀರ್ಥ ಶ್ರೀಗಳ ಆರಾಧನಾ ಮಹೋತ್ಸವ ಕೊನೆಗೂ ನಡೆಯಿತು. ಹದಿಮೂರನೇ ದಿನ ನಡೆಯಬೇಕಿದ್ದ ಆರಾಧನಾ ಕ್ರಿಯೆ ಹಲವು ಅಡೆತಡೆ ದಾಟಿ ಇಂದು ಸ್ವಾಮೀಜಿ ಸಮಾಧಿ ಸ್ಥಳ ಇರುವ ಹಿರಿಯಡ್ಕ ಸಮೀಪದ ಶೀರೂರು ಮೂಲ ಮಠದಲ್ಲಿ ಸಂಪನ್ನಗೊಂಡಿತು.
ಈ ಮೂಲಕ ಅಭಿಮಾನಿಗಳ, ಭಕ್ತರ ಅಭಿಲಾಷೆಯಂತೆ ಶ್ರೀಗಳಿಗೆ ಮರಣೋತ್ತರದಲ್ಲಿ ಲಭಿಸಬೇಕಾದ ಗೌರವ ಅರ್ಪಿಸಿದಂತಾಗಿದೆ.
ಮುಂಜಾನೆಯಿಂದಲೇ ಈ ಸಂಬಂಧ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ಆರಂಭಗೊಂಡವು. ಬೆಳಗ್ಗೆ ಶುದ್ಧ ಪುಣ್ಯಾಹವಾಚನ, ಶೀರೂರು ಮಠದಲ್ಲಿರುವ 500ಕ್ಕೂ ಅಧಿಕ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ, ದೇವರಿಗೆ 108 ಸೀಯಾಳಾಭಿಷೇಕ, ಸ್ವರ್ಣಾ ನದಿಯಲ್ಲಿ ಉಧ್ವಾರ್ಚನೆ ನೆರವೇರಿತು.

ಐದು ಕಲಶ ಹೋಮ, ಪವಮಾನ ಹೋಮ, ನಚಕ ಪ್ರಧಾನ ಹೋಮ, ವಿರಜಾ ಹೋಮದ ಕಲಶ, ತೀರ್ಥ ಪ್ರಸಾದವನ್ನು ವೃಂದಾವನಕ್ಕೆ ಅರ್ಪಿಸಿ ಪೂಜೆ ನೆರವೇರಿಸಲಾಯಿತು.
ಪ್ರಾಣ ದೇವರು, ಚಿಕ್ಕಪಟ್ಟದ ದೇವರು, ಪಟ್ಟಾಭಿರಾಮಚಂದ್ರ ದೇವರಿಗೆ ಪೂಜೆ ನೆರವೇರಿದ ಬಳಿಕ ಅರ್ಚಕರಿಂದ ವೃಂದಾವನದ ಬಳಿ ಸಮರ್ಪಣೆ ಮಹಾಪೂಜೆ ನಡೆಯಿತು. ಶೀರೂರು ದ್ವಂದ್ವ ಮಠವಾದ ಸೊದೆ ಮಠದ ದಿವಾನರು ಈ ಧಾರ್ಮಿಕ ವಿಧಿಗಳ ಪೌರೋಹಿತ್ಯ ವಹಿಸಿದ್ದರು. ಮಹಿಳೆಯರಿಂದ ಲಕ್ಷ್ಮೀ ಶೋಭಾನೆ ನಡೆಯಿತು.
ಸ್ವಾಮಿಗಳ ವೃಂದಾವನಕ್ಕೆ ಎರಡು ಬಾಳೆ ಗಿಡ, ಮಾವಿನ ತೋರಣ ಕಟ್ಡಿ ಹೂ ಹಾಕಲಾಗಿತ್ತು. ಶ್ರೀಗಳ ಭಾವಚಿತ್ರಕ್ಕೆ ಸಾರ್ವಜನಿಕರು ಗೌರವ ಸಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು. ಕೊನೆಗೆ
ಸಾರ್ವಜನಿಕ ಅನ್ನಸಂತರ್ಪಣೆಯೊಂದಿಗೆ ಭಕ್ತರಿಗೆ ಸಸಿಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆರಾಧನೆ ನಡೆಯಿತು. ಸುಬ್ರಹ್ಮಣ್ಯ ಭಟ್ ಈ ಎಲ್ಲದರ ಉಸ್ತುವಾರಿ ವಹಿಸಿದ್ದರು.

ಜುಲೈ.19 ರಂದು ಶೀರೂರು ಶ್ರೀಪಾದರು ಕೀರ್ತಿಶೇಷರಾಗಿದ್ದು, ತನಿಖೆ ಕಾರಣಕ್ಕಾಗಿ ಪೋಲಿಸರು ಉಡುಪಿ ಶೀರೂರು ಮಠ ಬಿಟ್ಟು ಕೊಟ್ಟರೂ ಹಿರಿಯಡ್ಕ ಮೂಲಮಠವನ್ನು ಬಿಟ್ಡುಕೊಟ್ಡಿರಲಿಲ್ಲ. ವಾರದ ಹಿಂದೆ ಒಂದು ಹಂತದ ತನಿಖೆ ಮುಗಿದ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಸುಪರ್ದಿಯಿಂದ ಬಿಟ್ಡು ಕೊಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಜುಲೈ 31ಕ್ಕೆ ನಡೆಯಬೇಕಿದ್ದ ಆರಾಧನೆ ಮೂರು ಬಾರಿ ಮುಂದೂಡಲ್ಪಡುತ್ತಾ ಹೋಗಿ 47ನೇ ದಿನ ಆರಾಧನೆ ನಡೆದಿದೆ. ಶೀರೂರು ಮಠದ ಮೂರು ಯತಿಗಳ ಪರಂಪರೆಯಲ್ಲಿ ಶ್ರೀಕೃಷ್ಣಮಠಕ್ಕೆ ಬಹಳಷ್ಟು ಕೊಡುಗೆ ಸಂದಿದೆ ಎಂಬುದನ್ನು ಮರೆಯುವಂತೆಯೇ ಇಲ್ಲ.
ಶ್ರೀಪಾದರ ಆರಾಧನೆ ಅವರ ಸಹಸ್ರ ಸಹಸ್ರ ಅಭಿಮಾನಿಗಳಿಗೆ ಹಾಗೂ ಭಕ್ತ ವೃಂದಕ್ಕೆ ಕೊನೆಗೂ ತೃಪ್ತಿ, ಸಮಾಧಾನ ನೀಡಿದೆ ಎಂದೇ ಹೇಳಬೇಕು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications