ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಂತ್ ಕುಮಾರ್ ಹೇಳಿಕೆಗೂ ನನಗೂ ಸಂಬಂಧವಿಲ್ಲ: ರಘುಪತಿ ಭಟ್

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 4 : ಉಡುಪಿ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಇಂದು ಶುಕ್ರವಾರ ಉಡುಪಿಯ ಜಾಮಿಯಾ ಮಸೀದಿಯಲ್ಲಿ ಮತ ಯಾಚನೆ ಮಾಡಿದರು. ನಗರದ ಹೃದಯ ಭಾಗದ ಮಸೀದಿಗೆ ತೆರಳಿದ ರಘುಪತಿ ಭಟ್ ಮುಸ್ಲಿಂ ಬಾಂಧವರ ಬಳಿ ಮತ ಕೇಳಿದರು.

ಇಂದು ಶುಕ್ರವಾರವಾಗಿದ್ದರಿಂದ ಸಹಸ್ರಾರು ಮುಸ್ಲಿಂ ಬಾಂಧವರು ಮಸೀದಿಯಲ್ಲಿ ಸೇರಿದ್ದರು. ಸಾಮೂಹಿಕ ನಮಾಜಿನ ಬಳಿಕ ಮುಸ್ಲಿಮರು ಹೊರ ಬರುವಾಗ ರಘುಪತಿ ಭಟ್ ಒಬ್ಬೊಬ್ಬರನ್ನೂ ಎದುರುಗೊಂಡು ಹಸ್ತ ಲಾಘವ ಮಾಡಿದರು.

ಡಾನ್ ಸಂಸ್ಕೃತಿನಾ ಅಥವಾ ಡೆವೆಲಪ್‌ಮೆಂಟ್ ಸಂಸ್ಕೃತಿನಾ: ಅನಂತ್‌ಕುಮಾರ್‌ಡಾನ್ ಸಂಸ್ಕೃತಿನಾ ಅಥವಾ ಡೆವೆಲಪ್‌ಮೆಂಟ್ ಸಂಸ್ಕೃತಿನಾ: ಅನಂತ್‌ಕುಮಾರ್‌

ನಂತರ ಸುದ್ದಿಗಾರರ ಜೊತೆ ಮಾತನಾಡಿದ ರಘುಪತಿ ಭಟ್, ಶುಕ್ರವಾರ ಆಗಿದ್ದರಿಂದ ಮುಸ್ಲಿಂ ಬಾಂಧವರ ಸಹಾಯ ಕೇಳಲು ಬಂದಿದ್ದೇನೆ. ಈ ಹಿಂದೆ ಶಾಸಕನಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯವನ್ನು ಮತ್ತೆ ಮುಂದುವರೆಸಲು ನಿಮ್ಮೆಲ್ಲರ ಬೆಂಬಲ ಬೇಕು.

Raghupathi Bhat Said i have no connection with Anant Kumars statement.

ನಮಗೆ ಎಲ್ಲ ವರ್ಗದವರ ಬೆಂಬಲವೂ ಬೇಕು. ಮುಸ್ಲಿಂ ಬಾಂಧವರು ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದಾರೆ ಎಂದು ಪ್ರಶಂಸಿಸಿದರು. ಆದರೆ ಈ ಹಿಂದೆ ಬಿಜೆಪಿ ಸಚಿವ ಅನಂತ್ ಕುಮಾರ್ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಮಾತನ್ನು ಹೇಳಿದ್ದಕ್ಕೆ ಪ್ರತಿಕ್ರಯಿಸಿದ ರಘುಪತಿ ಭಟ್, ಅವರ ಹೇಳಿಕೆಗೂ ನನಗೂ ಸಂಬಂಧ ಇಲ್ಲ.

'2000 ಕೋಟಿ ಅನುದಾನ ತಂದಿರುವ ಪ್ರಮೋದ್ ಗೆ ಬೇರೆ ಪಕ್ಷ ಯಾಕೆ?''2000 ಕೋಟಿ ಅನುದಾನ ತಂದಿರುವ ಪ್ರಮೋದ್ ಗೆ ಬೇರೆ ಪಕ್ಷ ಯಾಕೆ?'

ನಾನು ಎಲ್ಲರ ಒಳಿತನ್ನು ಬಯಸುವವ. ಈ ಬಾರಿಯೂ ಎಲ್ಲಾ ಕಡೆ ಮತಯಾಚನೆ ಮಾಡಲು ಹೋಗಲಿದ್ದೇನೆ ಎಂದು ತಿಳಿಸಿದರು.

English summary
karnataka assembly elections 2018: Udupi BJP candidate Raghupathi Bhat Said I have no connection with Anant Kumar's statement. I want everyone to be happy. We need support from all classes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X