ಶ್ರೀಕೃಷ್ಣಕಥಾ – ಚಿಕ್ಕಮಕ್ಕಳಿಗಾಗಿ ಆನ್ ಲೈನ್ ಕಥಾ ಸ್ಪರ್ಧೆ
ಉಡುಪಿ, ಆಗಸ್ಟ್ 01 : ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ, ಶ್ರೀಹೃಷೀಕೇಶತೀರ್ಥ ಪೀಠ, ಶ್ರೀಪಲಿಮಾರು ಮಠ - ಉಡುಪಿ ಶ್ರೀಕೃಷ್ಣಕಥಾ - ಚಿಕ್ಕಮಕ್ಕಳಿಗಾಗಿ ಆನ್ ಲೈನ್ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಿದೆ.
ನಿಮ್ಮ ಮನೆಯಲ್ಲಿ 5 ರಿಂದ 8 ವರ್ಷದ ಮಗುವಿದೆಯೇ?
ಆ ಪುಟಾಣಿಯ ಮುದ್ದು ಮಾತನ್ನು ಎಲ್ಲರಿಗೂ ತೋರಿಸುವ ಬಯಕೆಯೇ ನಿಮಗೆ?
ಸ್ಮಾರ್ಟ್ ಫೋನೊಂದು ಇರಲೇಬೇಕಲ್ಲ ನಿಮ್ಮ ಬಳಿ!?
ಹಾಗಿದ್ದರೆ ಪಲಿಮಾರು ಮಠವು ಏರ್ಪಡಿಸಿರುವ ಕೃಷ್ಣನ ಕಥೆಯನ್ನು ಹೇಳುವ ಸ್ಪರ್ಧೆಯಲ್ಲಿ ನಿಮ್ಮ ಪ್ರಯತ್ನ ಹಾಗು ಮಗುವಿನ ಪ್ರತಿಭೆಯನ್ನು ಪ್ರದರ್ಶಿಸಿರಿ! ಜನ್ಮಾಷ್ಟಮಿಯ ಪ್ರಯುಕ್ತವಾಗಿ ಪುಟಾಣಿ ಮಕ್ಕಳಿಗಾಗಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇದೊಂದು ಆನ್ ಲೈನ್ ಸ್ಪರ್ಧೆಯಾಗಿದ್ದು ಯಾರು ಬೇಕಾದರೂ ಭಾಗವಹಿಸಬಹುದು. ಆಗಸ್ಟ್ 11,2017 ಕೊನೆ ದಿನಾಂಕ.

ನಿಯಮಗಳು
1. ಕಥೆಯನ್ನು ಕನ್ನಡ / ತೆಲುಗು / ತಮಿಳು / ಹಿಂದಿ ಭಾಷೆಯಲ್ಲಿ ಹೇಳಬಹುದು. ಆದರೆ, ಒಬ್ಬ ಕಂದನಿಗೆ ಒಂದು ಭಾಷೆಯಲ್ಲಿ ಭಾಗವಹಿಸಲು ಮಾತ್ರ ಅವಕಾಶವಿರುತ್ತದೆ.
2. ಮಗುವಿನ ವಯಸ್ಸು 5 ರಿಂದ 7ರ ಒಳಗೆ ಇರಲಿ. ಇದನ್ನು ನಿರ್ಧರಿಸಲು ನಾವೇನೂ ಮತ್ತೊಂದು ಪರೀಕ್ಷೆಯನ್ನು ಮಾಡೆವು. ನಿಮ್ಮ ಪ್ರಾಮಾಣಿಕತೆಯೇ ನಮ್ಮ ನಂಬಿಕೆಯಾಗಿದೆ.
3. ಒಂದೇ ಕುಟುಂಬದಲ್ಲಿ ಇರಬಹುದಾದ ಈ ವಯಸ್ಸಿನ ಎಲ್ಲ ಮಕ್ಕಳೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆದರೆ ನಿಯಮ 1 ಹಾಗು 2 ಇವುಗಳಿಗೂ ಅನ್ವಯಿಸುತ್ತದೆ.
4. ಕಥೆಯು 3 ನಿಮಿಷಕ್ಕಿಂತ ಹೆಚ್ಚು ಇರಕೂಡದು. ಟೈಟಲ್ ಇತ್ಯಾದಿಗಳನ್ನು ಸೇರಿಸಿರುವ ವಿಡಿಯೋ ಆದಲ್ಲಿ ಕಥೆಯೂ ಸೇರಿ ವಿಡಿಯೋದ ಒಟ್ಟಾರೆ ಉದ್ದ 210 ಸೆಕೆಂಡುಗಳಿಗಿಂತ ಹೆಚ್ಚಾಗಿರಬಾರದು.
5. ಹಾರಿಜಾಂಟಲ್ ಮೋಡ್ನಲ್ಲಿಯೇ ವಿಡಿಯೋ ಶೂಟ್ ಮಾಡುವುದು ಕಡ್ಡಾಯ. ಅಂದರೆ ಫೋನನ್ನು ಉದ್ದಕ್ಕೆ ಹಿಡಿದು ವಿಡಿಯೋ ಮಾಡದಿರಿ. ಅಡ್ಡ ಹಿಡಿದೇ ಮಾಡಿರಿ.
6. ರೆಕಾರ್ಡ್ ಮಾಡಿರುವುದನ್ನು ಯುಟ್ಯೂಬಿಗೆ ಸೇರಿಸಿ. ವಿಡಿಯೋ ಜೊತೆಗೆ #palimaru_krishna_katha ಎನ್ನುವ ಹ್ಯಾಷ್ ಟ್ಯಾಗನ್ನು ಸೇರಿಸಲು ಮರೆಯದಿರಿ. ಯೂಟ್ಯೂಬಿನಲ್ಲಿಯೇ ವಿಡಿಯೋದ ಕೆಳಗೆ ಇರುವ ವಿವರಣೆಯ ವಿಭಾಗದಲ್ಲಿ ಮಗುವಿನ ಹೆಸರು, ತಂದೆ ತಾಯಿಯ ಹೆಸರು, ಊರಿನ ಹೆಸರು, ಅಧ್ಯಯನ ಮಾಡುತ್ತಿರುವ ತರಗತಿ, ಶಾಲೆಯ ಹೆಸರನ್ನೂ ನಮೂದಿಸಿ.
7. ಯುಟ್ಯೂಬಿನಲ್ಲಿ ಸೇರಿಸಿದ ನಂತರ ನಿಮ್ಮವರೆಲ್ಲರೊಂದಿಗೆ ಅದನ್ನ ಹಂಚಿಕೊಳ್ಳಿರಿ. ಜೊತೆಗೆ ಈ ಕೆಳಕಾಣಿಸಿದ ವಿಳಾಸಕ್ಕೂ ವಿಡಿಯೋ ಕೊಂಡಿಯನ್ನು (ವಿಡಿಯೋ ಕೊಂಡಿ ಎಂದು ಹೇಳಿರುವುದನ್ನು ಗಮನಿಸಿ. ಸಂಪೂರ್ಣ ವಿಡಿಯೋವನ್ನೇ ಎಂದು ಗೊಂದಲ ಮಾಡಿಕೊಳ್ಳದಿರಿ) ಈಮೈಲ್ ಮಾಡಿರಿ ಅಥವಾ ಕೆಳಕಾಣಿಸಿದ ಸಂಖ್ಯೆಗೆ ವಾಟ್ಸ್ಯಾಪ್ ಸಂದೇಶ ಕಳುಹಿಸಿ.
ಫೇಸ್ ಬುಕ್ಕಿನಲ್ಲಿ ಹಂಚಿಕೊಳ್ಳುವಾಗಲೂ ಯುಟ್ಯೂಬ್ ಲಿಂಕ್ ಅನ್ನೇ ಬಳಸಿರಿ. ಅಲ್ಲಿಯೂ #palimaru_krishna_katha ಟ್ಯಾಗಿನ ಜೊತೆಗೆ @Palimaru Matha - Udupi ಎನ್ನುವುದನ್ನೂ ಸೇರಿಸಿಕೊಳ್ಳಿರಿ. ಈ ಟ್ಯಾಗ್ ಇಲ್ಲದ ವಿಡಿಯೋಗಳನ್ನು ಸ್ಪರ್ಧೆಗೆ ಪರಿಗಣಿಸಲಾಗದು.
ನಿಮ್ಮ ವಿಡಿಯೋ ಲಿಂಕ್ ಅನ್ನು [email protected] ಇಲ್ಲಿಗೆ ಕಳಿಸಿಕೊಡಿ. ಫೇಸ್ಬುಕ್ಕಿನಲ್ಲಿ ಕಳಿಸುತ್ತೀರಾದಲ್ಲಿ @Palimaru Matha - Udupi ಇದಕ್ಕೆ ಟ್ಯಾಗ್ ಮಾಡಿರಿ. ವಾಟ್ಸ್ಯಾಪ್ ಪ್ರಿಯರಾದಲ್ಲಿ ಈ ಕೆಳಕಂಡ ಸ್ವಯಂಸೇವಕರಿಗೆ ಯಾರಾದರೂ ಒಬ್ಬರಿಗೆ ಕಳಿಸಿರಿ.

ಕನ್ನಡ
Dr. Vamshi Krishna Acharya : 8123458634
Srinivasa Bhat : 9480640050
Vishvavijaya Bhat : 9743701372
Jeevan Raj : 9164149680
Bhanu Simha : 9964068046
Smt. Sandhya Shingoti : 9403039825
Venugopal Bhat : 9844361289
ಏನಪ್ಪಾ ಇದಕ್ಕೆ ಸಿಗುವ ಪ್ರೈಜು?
ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಮಗುವಿಗೂ ಆನ್ಲೈನ್ ಮೂಲಕ ಒಂದು ಪ್ರಶಸ್ತಿಪತ್ರವನ್ನು ಕಳಿಸಲಾಗುವುದು.
ಪ್ರತಿ ಒಂದು ಭಾಷೆಯಲ್ಲಿಯೂ ಮೊದಲಸ್ಥಾನ ಪಡೆದ ಮಗುವಿಗೆ ಶ್ರೀರಾಮಚಂದ್ರದೇವರಿಗೆ ಸಮರ್ಪಣೆ ಮಾಡಿದ ಒಂದು ಬೆಳ್ಳಿಯ ತುಳಸೀಮಾಲೆಯನ್ನು ಪಾರಿತೋಷಕವಾಗಿ ನೀಡಲಾಗುವುದು.
ನಿಮ್ಮ ಮಗುವಿನ ವಿಡಿಯೋ ಕಥೆಯು ಚೆನ್ನಾಗಿ ಕಾಣಿಸಲು ಒಂದಿಷ್ಟು ಸಲಹೆಗಳು
* ಕಥೆ ಹೇಳುತ್ತಿರುವಾಗ ಇತರರು ಬಳಸುತ್ತಿರುವ ಮೊಬೈಲ್ ಫೋನುಗಳನ್ನು ನಿಷ್ಕ್ರಿಯಗೊಳಿಸಿ.
* ಸಹಜವಾಗಿಯೆ ಬೆಳಕು ಬರುತ್ತಿರುವ ಜಾಗದಲ್ಲಿ ವಿಡಿಯೋ ಚಿತ್ರೀಕರಣ ಮಾಡಿರಿ
* ಬಾಗಿಲು ಮುಚ್ಚಿದ ಕೋಣೆಯಲ್ಲಿ ಚಿತ್ರೀಕರಣ ಮಾಡುವುದಾದಲ್ಲಿ ಪ್ರತಿಧ್ವನಿ ಬಾರದಂತೆ ನೋಡಿಕೊಳ್ಳಿ. ಸೋಫಾ ಇತ್ಯಾದಿ * ಪೀಠೋಪಕರಣಗಳು ಇರುವಲ್ಲಿ ಪ್ರತಿಧ್ವನಿ ಬರುವ ಸಾಧ್ಯತೆಗಳು ಕಡಿಮೆ.
* ಮಗುವಿನ ಬಟ್ಟೆಯು ಹಿನ್ನೆಲೆಯ ಬಣ್ಣದಲ್ಲಿ ಮುಚ್ಚಿ ಹೋಗದಂತೆ ಇರಲಿ.
* ಮಗುವಿನಲ್ಲಿ ಆತ್ಮವಿಶ್ವಾಸ ತುಂಬಿ, ಕಥೆಯನ್ನು ಹೇಳುವಾಗ ಭಾವನೆಗಳನ್ನು ಮುಖದಲ್ಲಿ ತೋರಿಸುವುದು ಹೇಗೆಂದು ಹೇಳಿಕೊಡಿ
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications