ಕ್ರಿಕೆಟ್ ಕೋಚ್ ರವಿಶಾಸ್ತ್ರಿ ಪ್ರತಿ ವರ್ಷ ಕರ್ವಾಲುವಿಗೆ ಬರೋದೇಕೆ?
Recommended Video

ಉಡುಪಿ, ಮೇ 22: ಕಾರ್ಕಳ ಸಮೀಪದ ಮಹಾವಿಷ್ಣು ದೇವಸ್ಥಾನಕ್ಕೆ ಇಂದು ಮಂಗಳವಾರ ಭಾರತೀಯ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಭೇಟಿ ನೀಡಿದರು. ದೇವಸ್ಥಾನಕ್ಕೆ ಆಗಮಿಸಿದ ಅವರು ಪಂಚಾಮೃತ ಸೇವೆ ಮತ್ತು ನಾಗನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇದು ಶಾಸ್ರ್ತಿ ಅವರ ಹತ್ತನೇ ಭೇಟಿಯಾಗಿದೆ. ವೀಕ್ಷಕ , ವಿವರಣೆಕಾರ ರವಿಶಾಸ್ತ್ರಿಗೂ ಕಾರ್ಕಳ ತಾಲೂಕಿನ ಕುಗ್ರಾಮ ಕರ್ವಾಲುವಿಗೂ ಎತ್ತಣಿಂದೆತ್ತಣ ಸಂಬಂಧ? ಅವರು ಪ್ರತಿ ವರ್ಷ ಈ ಸನ್ನಿಧಿಗೆ ಭೇಟಿ ನೀಡುವುದು ಏಕೆ ಎಂಬ ಕೂತುಹಲ ಎಲ್ಲರಲ್ಲೂ ಮನೆ ಮಾಡಿದೆ ಅಲ್ಲವೇ. ಅದಕ್ಕೆ ಉತ್ತರ ಇಲ್ಲಿದೆ ನೋಡಿ...

ಇದೇ ಮುಖ್ಯ ಕಾರಣ
ಈ ಮಾಜಿ ಕ್ರಿಕೆಟಿಗ ವರ್ಷಂಪ್ರತಿ ಇಲ್ಲಿನ ಮಹಾವಿಷ್ಣು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಕಾರಣ ಅವರಿಗೆ 10 ವರ್ಷದ ಹಿಂದೆ ಇಲ್ಲೇ ಸಂತಾನ ಪ್ರಾಪ್ತಿಯಾಗಿತ್ತು. ಇಂದು ದೇವಸ್ಥಾನಕ್ಕೆ ಆಗಮಿಸಿದ ರವಿಶಾಸ್ತ್ರಿ ಇಲ್ಲಿ ಪಂಚಾಮೃತ ಸೇವೆ ಸಲ್ಲಿಸಿ, ನಾಗನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಖುಷಿಯಿಂದಲೇ ಪ್ರತಿಕ್ರಯಿಸಿದರು
ಇಲ್ಲಿಗೆ ಬರುವುದೆಂದರೆ ಅದೇನೋ ಖುಷಿ ಅಂತ ಮಾಧ್ಯಮಗಳಿಗೆ ಖುಷಿಯಿಂದಲೇ ಪ್ರತಿಕ್ರಿಯೆ ನೀಡಿದರು ರವಿಶಾಸ್ತ್ರಿ. ತಮ್ಮ ಪೂರ್ವಿಕರ ಮೂಲ ದೇವಸ್ಥಾನವೂ ಆಗಿರುವ ಕರ್ವಾಲು ಮಹಾವಿಷ್ಣು ದೇವಸ್ಥಾನ ಸನ್ನಿಧಿಗೆ ಆಗಮಿಸಿದ ಶಾಸ್ತ್ರಿ ಸ್ಥಳೀಯರೊಂದಿಗೆ ಖುಷಿಯಿಂದ ಬೆರೆತರು.

ಹರಕೆ ಫಲಿಸಿತು
ರವಿಶಾಸ್ತ್ರಿ ಮದುವೆಯಾಗಿ 20 ವರ್ಷ ಕಳೆದಿದ್ದರೂ ಅವರಿಗೆ ಸಂತಾನ ಪ್ರಾಪ್ತಿಯಾಗಿರಲಿಲ್ಲ. ಹೀಗಾಗಿ ತಮ್ಮ ಮೂಲದೇವಸ್ಥಾನಕ್ಕೆ ಹರಕೆ ಹೊತ್ತರೆ ಸಂತಾನ ಸಿದ್ಧಿಯಾಗುತ್ತದೆ ಎಂದು ಯಾರೋ ಹೇಳಿದ್ದರು.
ಅದರಂತೆ 10 ವರ್ಷದ ಹಿಂದೆ ಮೊದಲ ಬಾರಿ ರವಿಶಾಸ್ತ್ರಿ ಇಲ್ಲಿಗೆ ಬಂದು ಪೂಜೆ ಸಲ್ಲಿಸಿದ್ದರು. ಇದಾಗಿ ನಾಲ್ಕೇ ತಿಂಗಳಲ್ಲಿ ಶಾಸ್ತ್ರಿ ಪತ್ನಿ ಗರ್ಭ ಧರಿಸಿ ಬಳಿಕ ಹೆಣ್ಣು ಮಗುವಾಗಿತ್ತು. ಇದಾದ ಮೇಲೆ ವರ್ಷಂಪ್ರತಿ ಇಲ್ಲಿಗೆ ಆಗಮಿಸುವ ರವಿಶಾಸ್ತ್ರಿ ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.

ಗ್ರಾಮಸ್ಥರಿಗೆ ಹಬ್ಬ
ರವಿಶಾಸ್ತ್ರಿ ಕರ್ವಾಲು ದೇವಸ್ಥಾನಕ್ಕೆ ಆಗಮಿಸುವುದೆಂದರೆ ಗ್ರಾಮಸ್ಥರಿಗೆ ಹಬ್ಬದ ಸಮಾನ. ಅಂದು ಇಡೀ ಗ್ರಾಮಸ್ಥರೇ ಇಲ್ಲಿ ಸೇರುತ್ತಾರೆ. ಶಾಸ್ತ್ರಿಗೂ ಈ ಊರಿನ ಜೊತೆ ಅವಿನಾಭಾವ ಸಂಬಂಧ ಬೆಳೆದಿದ್ದು , ಊರ ಶಾಲೆಗೆ ಮತ್ತು ದೇವಸ್ಥಾನಕ್ಕೆ ಆರ್ಥಿಕ ಸಹಾಯ ಮಾಡುವ ಮೂಲಕ ಊರಿಗೆ ಕೃತಜ್ನರಾಗಿದ್ದಾರೆ.
-
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
ಶುಭ್ಮನ್ ಗಿಲ್ ಭೇಟಿಯಾದ ಅನನ್ಯಾ ಬಿರ್ಲಾ; ಆರ್ಸಿಬಿ ಹೊಸ ಮಾಲೀಕನ ಸಹೋದರಿಗೆ ಗುಜರಾತ್ ಜೆರ್ಸಿನಾ ಎಂದ ನೆಟ್ಟಿಗರು -
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ












Click it and Unblock the Notifications