ದಸರಾ ಹಬ್ಬಕ್ಕೆ ಬೆಂಗಳೂರು-ಉಡುಪಿ-ಕಾರವಾರಕ್ಕೆ ವಿಶೇಷ ರೈಲು
ಬೆಂಗಳೂರು, ಸೆ 29: ದಸರಾ ಹಬ್ಬದ ಪ್ರಯುಕ್ತ ಬೆಂಗಳೂರು-ಮಂಗಳೂರಿಗೆ ಘೋಷಿಸಿದ್ದ ವಿಶೇಷ ರೈಲನ್ನು ಕಾರವಾರದವರೆಗೆ ವಿಸ್ತರಿಸಲಾಗಿದೆ.
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರ ಕೋರಿಕೆಯ ಮೇರೆಗೆ ಉಡುಪಿ-ಕುಂದಾಪುರ ಜನರಿಗೆ ಸಹಾಯಕವಾಗುವಂತೆ ಈ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಕೊಚ್ಚುವೆಲಿ-ಬೆಂಗಳೂರು ರೈಲು ಮೈಸೂರು ತನಕ ವಿಸ್ತರಣೆ
ದಸರಾ ಹಬ್ಬದ ಸಮಯದಲ್ಲಿ ಬಸ್ ದರಗಳಲ್ಲಿ ಅತೀವ ಏರಿಕೆಯಾಗಿರುವುದರಿಂದ, ಉಡುಪಿ-ಕುಂದಾಪುರ ಭಾಗದ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ವಿಶೇಷ ರೈಲಿಗೆ ಸಂಸದರು ಬೇಡಿಕೆಯಿರಿಸಿದ್ದರು.
ಸಂಸದರ ಕೋರಿಕೆಯ ಮೇರೆಗೆ ಭಾರತೀಯ ರೈಲ್ವೇ ಎರಡು ವಿಶೇಷ ರೈಲುಗಳ ಸೇವೆಯನ್ನು ಘೋಷಿಸಿದೆ.
ಬೆಂಗಳೂರು-ಕಾರವಾರ:
ದಿನಾಂಕ:
04.10.19,
ರಾತ್ರಿ
10:20ಕ್ಕೆ
ದಿನಾಂಕ:
07.10.19,
ರಾತ್ರಿ
11:55ಕ್ಕೆ
ಕಾರವಾರ-ಬೆಂಗಳೂರು:
ದಿನಾಂಕ:
05:10:19
ಸಂಜೆ
5:00ಕ್ಕೆ
ದಿನಾಂಕ:
08:10:19
ಸಂಜೆ
5:00ಕ್ಕೆ
ಕ್ಷೇತ್ರದ ಜನತೆ ಈ ಎರಡೂ ರೈಲಿನ ಸೇವೆಯ ಸದುಪಯೋಗ ಪಡೆಯುವಂತೆ ಸಂಸದೆ ಶೋಭಾ ಕರಂದ್ಲಾಜೆ ವಿನಂತಿಸಿದ್ದಾರೆ.