ಭಾಸ್ಕರ್ ಶೆಟ್ಟಿ ಕೊಲೆಯಲ್ಲಿ ಸುಪಾರಿ ಹಂತಕರ ಕೈವಾಡ?
ಉಡುಪಿ, ಆಗಸ್ಟ್ 31 : ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಮುಂಬೈ ಮೂಲದ ಸುಪಾರಿ ಹಂತಕರು ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಭಾಸ್ಕರ್ ಶೆಟ್ಟಿ ಪತ್ನಿ ಮತ್ತು ಪುತ್ರನಿಗೆ ಹಂತಕರು ಕೊಲೆ ಮಾಡಲು ಸಹಾಯ ಮಾಡಿರಬಹುದು ಎಂದು ಸಿಐಡಿ ಶಂಕಿಸಿದೆ.
ಭಾಸ್ಕರ್
ಶೆಟ್ಟಿ
ಅವರು
ಹೋಟೆಲ್
ದುರ್ಗಾ
ಇಂಟರ್
ನ್ಯಾಷನಲ್ನಿಂದ
ಜುಲೈ
28ರಂದು
ಮಧ್ಯಾಹ್ನ
3
ಗಂಟೆ
ವೇಳೆಗೆ
ಇಂದ್ರಾಳಿಯಲ್ಲಿರುವ
ತಮ್ಮ
ಮನೆಗೆ
ಹೋಗುತ್ತಾರೆ.
ಅಲ್ಲಿ
ಸುಪಾರಿ
ಹಂತಕರು
ಪೆಪ್ಪರ್
ಸ್ಪ್ರೇ
ಸಿಂಪಡಿಸಿ
ಅವರನ್ನು
ಅಪಹರಣ
ಮಾಡಿರಬಹುದು
ಎಂದು
ಶಂಕಿಸಲಾಗಿದೆ.[ಭಾಸ್ಕರ್
ಶೆಟ್ಟಿ
ಹತ್ಯೆ,
2
ಕೋಟಿ
ಹಣ
ವರ್ಗಾವಣೆ
ಬಗ್ಗೆ
ತನಿಖೆ]
ಭಾಸ್ಕರ್ ಶೆಟ್ಟಿ ಅವರನ್ನು ಬೇರೆ ಕಡೆ ಕರೆದುಕೊಂಡು ಹೋಗಿ ಸುಪಾರಿ ಹಂತಕರು ಕೊಲೆ ಮಾಡಿರಬಹುದು ಎಂಬ ಶಂಕೆ ಇದ್ದು, ಈ ಕುರಿತು ತನಿಖೆ ನಡೆಯುತ್ತಿದೆ. ಬೇರೆ ಕಡೆ ಕೊಲೆ ಮಾಡಿದ ಬಳಿಕ ಶವವನ್ನು ನಿರಂಜನ್ ಭಟ್ ಅವರ ಕಾರಿನಲ್ಲಿ ಅವರ ಮನೆಗೆ ತರಲಾಯಿತು, ಈ ಬಗ್ಗೆ ಸಿಐಡಿ ಹೆಚ್ಚಿನ ಮಾಹಿತಿ ಸಂಗ್ರಹ ಮಾಡುತ್ತಿದೆ.[ಭಾಸ್ಕರ ಶೆಟ್ಟಿ ಶವ ಸುಡಲು 20 ಲೀಟರ್ ಪೆಟ್ರೋಲ್ ಬಳಕೆ!]
ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಮತ್ತು ಪುತ್ರ ನವನೀತ್, ಜ್ಯೋತಿಷಿ ನಿರಂಜನ್ ಭಟ್, ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್, ಕಾರು ಚಾಲಕ ರಾಘವೇಂದ್ರನನ್ನು ಬಂಧಿಸಲಾಗಿದೆ.[ಭಾಸ್ಕರ ಶೆಟ್ಟಿ ಹತ್ಯೆ: ಜ್ಯೋತಿಷಿ ನಿರಂಜನ್ ಭಟ್ ಅನ್ನೋ ಪ್ರಳಯಾಂತಕ]
ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಅವರಿಗೆ ಮುಂಬೈನಿಂದ ಬಂದಿದ್ದ ಸುಪಾರಿ ಹಂತಕರು ಸಹಾಯ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಸಿಐಡಿ ಈ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ವರದಿಯನ್ನು ನೀಡುವ ಸಾಧ್ಯತೆ ಇದೆ.