ಬೈಂದೂರು: ಸತತ 43 ಗಂಟೆ ಸಮುದ್ರದಲ್ಲಿ ಈಜಾಡಿ ಸಾವು ಗೆದ್ದ ಮೀನುಗಾರ..!
ಮಂಗಳೂರು, ನವೆಂಬರ್ 12: ಅರಬ್ಬಿ ಸಮುದ್ರದಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಮೀನುಗಾರನ ರಕ್ಷಣೆ ಮಾಡಲಾಗಿದೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಗಂಗೊಳ್ಳಿಯಿಂದ ಸುಮಾರು 14 ನಾಟಿಕಲ್ ಮೈಲ್ ದೂರದ ಬಳಿ ಈ ಘಟನೆ ನಡೆದಿದೆ. ಬರೋಬ್ಬರಿ ನಲವತ್ತ ಮೂರು ಗಂಟೆಗಳ ಕಾಲ ಈಜಿ, ಈ ಮೀನುಗಾರ ಬಚಾವಾಗಿರುವುದು ಪವಾಡದಂತಾಗಿದೆ.
ಮೀನುಗಾರರದ್ದು ಸಾಹಸದ ಬದುಕು. ಒಮ್ಮೆ ಕಡಲಿಗಿಳಿದರೆ 15 ದಿನ ಸಮುದ್ರ ವಾಸ ಅನಿವಾರ್ಯ. ನಡು ನೀರಿನಲ್ಲಿ ಅವಘಡ ಸಂಭವಿಸಿದರೆ ಬದುಕಿ ಬರುವುದೇ ಕಷ್ಟ . ಅಂತದ್ದರಲ್ಲಿ ಮೀನುಗಾರನೊಬ್ಬ 43 ಗಂಟೆ ಈಜಿ ಪವಾಡ ಸದೃಶವಾಗಿ ಬದುಕಿ ಬಂದಿದ್ದಾರೆ. ತಮಿಳುನಾಡು ಮೂಲದ ಮೀನುಗಾರಿಕಾ ಬೋಟ್ ನಿಂದ ಮೀನುಗಾರ ಮುರುಗನ್ ಸಮುದ್ರಕ್ಕೆ ಬಿದ್ದಿದ್ದಾರೆ. ಆದರೆ ಆ ಬೋಟ್ನವರಿಗೆ ವಿಚಾರ ತಿಳಿದಿಲ್ಲ. ವಿಷಯ ತಿಳಿದಾಗ ಆತನ ಹುಡುಕಾಟ ಆರಂಭಿಸಿದ್ದರು.

ಸತತ 43 ಗಂಟೆಗಳ ಕಾಲ ಸಮುದ್ರದಲ್ಲಿ ಈಜುತ್ತಾ ಮುರುಗನ್ ದಡದತ್ತ ಬರುತ್ತಿದ್ದ. ಇದೇ ವೇಳೆಗೆ ಗಂಗೊಳ್ಳಿಯಿಂದ ತೆರಳುತ್ತಿದ್ದ ಬೇರೆ ಮೀನುಗಾರಿಕಾ ಬೋಟ್ ನವರಿಗೆ ಈ ಮೀನುಗಾರ ಸಿಕ್ಕಿದ್ದಾರೆ. ಆತನನ್ನು ಕಡಲಿನಿಂದ ಮೇಲಕ್ಕೆ ಎತ್ತಿದ ಮೀನುಗಾರರು ಜೀವ ಉಳಿಸಿದ್ದಾರೆ.
ಸರಿ ಸುಮಾರು ಎರಡು ದಿನಗಳ ಕಾಲ ನಿರಂತರವಾಗಿ ಈಜಿ ಬಸವಳಿದಿದ್ದ ಮೀನುಗಾರನ ರಕ್ಷಣೆ ಮಾಡಿರೋದು ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ಬಂದಿದೆ . ವಾರದ ಹಿಂದೆ ನಡೆದ ಈ ಘಟನೆ , ಕಡಲ ಮಕ್ಕಳನ್ನೇ ಅಚ್ಚರಿಗೆ ತಳ್ಳಿದೆ. ಸಂಪೂರ್ಣ ನಿತ್ರಾಣಗೊಂಡಿದ್ದ ಮೀನುಗಾರನಿಗೆ ಪ್ರಥಮ ಚಿಕಿತ್ಸೆ ನೀಡಿದ್ದ ಗಂಗೊಳ್ಳಿ ಮೀನುಗಾರರು, ತಮಿಳ್ನಾಡಿನ ಬೋಟ್ನವರಿಗೆ ನಡು ನೀರಿನಲ್ಲೇ ಹಸ್ತಾಂತರ ಮಾಡಿದ್ದಾರೆ.
ಸಮುದ್ರಕ್ಕೆ ಬಿದ್ದ ಮೀನುಗಾರನ ಶವ ಹುಡುಕುತ್ತಿದ್ದ ತಮಿಳುನಾಡು ಮೀನುಗಾರರಿಗೆ ಈತ ಬದುಕಿ ಬಂದಿರೋದು ಕಂಡು ಎಲ್ಲಿಲ್ಲದ ಖುಷಿಯಾಗಿದೆ. ಗಂಗೊಳ್ಳಿ ಬೋಟ್ ನ ಮೀನುಗಾರರಿಗೆ ಧನ್ಯವಾದ ತಿಳಿಸಿ ತಮಿಳ್ನಾಡಿಗೆ ವಾಪಾಸ್ಸಾಗಿದ್ದಾರೆ. ಕಡಲ ಮಕ್ಕಳದ್ದು ಅನಿಶ್ಚಿತ ಬದುಕು. ಅದರಲ್ಲೂ ಕಾರ್ಮಿಕರಾಗಿ ದುಡಿಯುವ ಅನ್ಯ ರಾಜ್ಯದ ಮೀನುಗಾರರು, ಊರವರ ಸಂಪರ್ಕವಿಲ್ಲದೆ ತಿಂಗಳುಗಟ್ಟಲೆ ಕಳೆಯುತ್ತಾರೆ. ಇಂಥ ಪರಿಸ್ಥಿತಿಯಲ್ಲೂ ಮುರುಗನ್ ಬದುಕಿ ತವರು ಸೇರಿರೋದು ಅದ್ಭುತವೇ ಸರಿ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications