ಕೈ ಕಾಲಿಗೆ ಸರಪಳಿ ಬಿಗಿದು ಅರಬ್ಬೀ ಸಮುದ್ರದಲ್ಲಿ ಡಾಲ್ಫಿನ್ ರೀತಿ ಈಜಿದ 66ರ ವೃದ್ಧ!
ಉಡುಪಿ, ಜನವರಿ 25: ಅರ್ಧ ಗಂಟೆ ಕೈ ಕಟ್ಟಿ ನಿಂತುಕೊಳ್ಳುವುದು ಅಂದ್ರೇನೆ ಕೈ ಕಾಲು ನೋವು ಬಂದುಬಿಡುತ್ತದೆ. ಆದರೆ ಇಲ್ಲೊಬ್ಬರು ಕೈಕಾಲು ಕಟ್ಟಿ ಬರೋಬ್ಬರಿ 5 ಗಂಟೆ 30 ನಿಮಿಷ ಸಮುದ್ರದಲ್ಲಿ ಈಜಾಡಿದ್ದಾರೆ. ಬರೀ ಸಾಗರ ಸಾಹಸ ಮಾಡಿದ್ದು ಮಾತ್ರವಲ್ಲ, ಈ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ತನ್ನ 66ರ ವಯಸ್ಸಿನಲ್ಲಿ ಅಂದ್ರೆ ನಂಬಲೇಬೇಕು.
ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ ಎನ್ನುವುದು ಸಾಮಾನ್ಯ ಮಾತು. ಆದರೆ ಉಡುಪಿಯ ವ್ಯಕ್ತಿಯೊಬ್ಬರು ಸಾಹಸಕ್ಕೂ ವಯಸ್ಸು ಅಡ್ಡಿಯಲ್ಲ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅದು ವಿಶ್ವದಾಖಲೆ ಮೂಲಕ, ಸಾಗರ ಸಾಹಸದ ಮೂಲಕ.
ಸಾಗರ ಕಣ್ಣಿಗೆ ಶಾಂತವಾಗಿ ಕಂಡರೂ ಇಳಿದ ಮೇಲೆ ಭಯಾನಕ. ಯಾವ ದಿಕ್ಕಿನಿಂದ ಗಾಳಿ ಬೀಸುತ್ತದೆ, ಎಷ್ಟು ಎತ್ತರದಲ್ಲಿ ಅಲೆಗಳು ಎದ್ದು ಬರುತ್ತವೆ ಎಂದು ಯಾರಿಂದಲೂ ಲೆಕ್ಕಹಾಕಲು ಆಗುವುದಿಲ್ಲ.

ಇಂತಹ ಅರಬ್ಬೀ ಸಮುದ್ರದಲ್ಲಿ 66 ವಯಸ್ಸಿನ ಉಡುಪಿಯ ಕಡೆಕಾರು ನಿವಾಸಿ ಗಂಗಾಧರ್, ಬೆಳಗ್ಗೆ 7.50ಕ್ಕೆ ಸರಪಳಿಯಲ್ಲಿ ಕೈಯನ್ನು ಹಿಂದಕ್ಕೆ ಕಟ್ಟಿ, ಕಾಲನ್ನು ಸರಪಳಿಯಲ್ಲಿ ಕಟ್ಟಿ ಬೀಗ ಹಾಕಿ ನಿರಂತರ 5.30 ಗಂಟೆಗಳ ಕಾಲ ಈಜಿ ಇಂಡಿಯಾದ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರು ದಾಖಲು ಮಾಡಿದ್ದಾರೆ. ಗಂಗಾಧರ 60ನೇ ವಯಸ್ಸಿನಲ್ಲಿ ಸಮುದ್ರದ ಈಜು ಕರಗತ ಮಾಡಿದ್ದು, ಆರು ವರ್ಷಕ್ಕೆ ಎರಡು ರಾಷ್ಟ್ರೀಯ, ಅಂತರಾಷ್ಟ್ರೀಯ ದಾಖಲೆ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಜನಕ್ಕೆ ಈಗಾಗಲೇ ಈಜು ತರಬೇತಿಯನ್ನು ನೀಡಿದ್ದಾರೆ.
ತನ್ನ ವಿಶೇಷ ಸಾಧನೆಯ ಬಗ್ಗೆ ಮಾತನಾಡಿದ ಗಂಗಾಧರ್, ನಾನು 60ನೇ ವರ್ಷದಲ್ಲಿ ಈಜು ಕಲಿಯುವುದಕ್ಕೆ ಆರಂಭಿಸಿದೆ. ಆ ಬಳಿಕ ಈ ಕ್ಷೇತ್ರದಲ್ಲೇ ಏನಾದರೂ ಸಾಧನೆ ಮಾಡಬೇಕೆಂದು ಛಲ ಹೊಂದಿದೆ. ಕಳೆದ ವರ್ಷ ಜನವರಿ 24ರಂದು ಪದ್ಮಾಸನ ಭಂಗಿಯಲ್ಲಿ, ಕೈ ಕಾಲಿಗೆ ಕೊಳಹಾಕಿ ಒಂದೂವರೆ ಗಂಟೆ ಈಜಾಡಿದೆ. ಈ ಬಾರಿ ಕೈ ಕಾಲಿಗೆ ಕೊಳ ಹಾಕಿ ಡಾಲ್ಫಿನ್ ಮಾದರಿಯಲ್ಲಿ ಐದೂವರೆ ಗಂಟೆಗಳ ಕಾಲ ಈಜಾಡಿದ್ದೇನೆ ಎಂದು ಗಂಗಾಧರ್ ಖುಷಿ ವ್ಯಕ್ತಪಡಿಸಿದ್ದಾರೆ.

ಇನ್ನು ಗಂಗಾದರ್ ದಾಖಲೆಯನ್ನು ದಾಖಲು ಮಾಡಲು ಬಂದವರಿಗೆ ಗಂಗಾಧರ್ ಅವರ ಸಾಹಸ ಕಂಡು ಅಚ್ಚರಿಯಾಗಿದೆ. ಕೈ ಕಾಲು ಕಟ್ಟಿ ಡಾಲ್ಫಿನ್ ಮಾದರಿಯಲ್ಲಿ 66 ವಯಸ್ಸಿನಲ್ಲಿ ಈಜಾಡಿದ್ದು ಗ್ರೇಟ್. ನಾನು ಇಂತಹ ಸಾಧನೆ ಹಿಂದೆಂದೂ ಕಂಡಿಲ್ಲ ಎಂದು ಗಂಗಾಧರ್ ಸಾಧನೆಯನ್ನು ಕೊಂಡಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ನ ಮನೀಶ್, ಇದೊಂದು ಅಪರೂಪದ ಸಾಧನೆಯಾಗಿದೆ. ಕಡಲಿನ ಅಬ್ಬರದ ನಡುವೆಯೂ ಗಂಗಾಧರ್ ನಿರಂತರ ಐದೂವರೆ ಗಂಟೆಗಳ ಕಾಲ ಈಜಿ ಸಾಧನೆ ಮಾಡಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಗಂಗಾಧರ್ ಸಾಧನೆ ಸೇರ್ಪಡೆಯಾಗಿರುವುದು ತುಂಬ ಖುಷಿಯಾಗಿದೆ ಅಂತಾ ಹೇಳಿದ್ದಾರೆ.

ಒಟ್ಟಿನಲ್ಲಿ ಸಾಧನೆಗೆ ವಯಸ್ಸು ಅಡ್ಡ ಬರುವುದಿಲ್ಲ ಅನ್ನುವುದನ್ನು ಕಡಲ ಸಾಹಸ ಮಾಡುವ ಮೂಲಕ ಗಂಗಾಧರ್ ತೋರಿಸಿಕೊಟ್ಟಿದ್ದಾರೆ. ಕಡಲ ತೀರದ ಯುವಕರಿಗೂ ಸ್ಫೂರ್ತಿಯಾಗಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications