ತುಮಕೂರು ಬಳಿ ರಾಜ್ಯ ಸರ್ಕಾರದಿಂದ ಜಪಾನೀಸ್ ಟೌನ್ಶಿಪ್ ನಿರ್ಮಾಣ
ತುಮಕೂರು, ಅ.4: ತುಮಕೂರು ಬಳಿಯ ವಸಂತನರಸಾಪುರದಲ್ಲಿ ಜಪಾನೀಸ್ ಟೌನ್ ಶಿಪ್ ನಿರ್ಮಿಸಲು ಸರ್ಕಾರ ಮುಂದಾಗಿರುವುದಾಗಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ತಿಳಿಸಿದರು.
ಈಗಾಗಲೇ ವಸಂತನರಸಾಪುರದಲ್ಲಿ ಕೈಗಾರಿಕಾ ವಲಯ ನಿರ್ಮಾಣವಾಗುತ್ತಿದ್ದು, ಇಲ್ಲಿಯೇ ಜಪಾನೀಸ್ ಟೌನ್ ಶಿಪ್ ತೆರೆಯಲು ಮುಂದಾಗಿದ್ದೇವೆ ಎಂದರು. ಈ ಕುರಿತು ವಿಧಾನಸೌಧದಲ್ಲಿ ಜಪಾನ್ ರಾಯಭಾರಿ ತಕಾಯುಕಿ ಕಿತಗವಾ ಅವರು ಪರಮೇಶ್ವರ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಹಿಂದಿನಿಂದಲೂ ಜಪಾನೀಸ್ ಟೌನ್ಶಿಪ್ ನಿರ್ಮಾಣದ ಕನಸು ಇದೆ. ವಸಂತನರಸಾಪುರಸಲ್ಲಿ ಈಗಾಗಲೇ ಭೂ ಸ್ವಾಧೀನ ಪ್ರಕ್ರಿಯೆ ಬಹುತೇಕ ನಡೆಯುತ್ತಿದೆ. ಅಲ್ಲಿನ ಮೂಲಸೌಕರ್ಯ ಒದಗಿಸಿಕೊಡುವ ಸಂಬಂಧ ಇನ್ನೆರಡು ದಿನದಲ್ಲಿ ಸಭೆ ಕರೆದಿದ್ದು ಆ ಸಂದರ್ಭದಲ್ಲಿ ಸಭೆಗೆ ತಾವೂ ಬರಬಹುದು ಎಂದು ಆಹ್ವಾನಿಸಿದರು.












Click it and Unblock the Notifications