ಶಿರಾ ಚುನಾವಣೆಯಲ್ಲೂ ‘ನಮ್ಮ ಆರ್ಸಿಬಿ’ ಟೀಂ ಹವಾ..!
ಉಪ ಚುನಾವಣೆ ಅಬ್ಬರದ ನಡುವೆಯೂ ಆರ್ಸಿಬಿ ತಂಡದ ಲೋಗೋ ರಾಜ್ಯಾದ್ಯಂತ ವೈರಲ್ ಆಗುತ್ತಿದೆ. ಉಪಚುನಾವಣೆ ಅಖಾಡ ರಂಗು ರಂಗಾಗಿದ್ದು, ಬೆಂಗಳೂರಿನ ಆರ್.ಆರ್. ನಗರ ಹಾಗೂ ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಫಿಕ್ಸ್ ಆಗಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮಧ್ಯೆ ಬಿಗ್ ಫೈಟ್ ಏರ್ಪಟ್ಟಿದೆ. ಈ ಮಧ್ಯೆ ತಮ್ಮ ತಮ್ಮ ಅಭ್ಯರ್ಥಿಗಳ ಪಕ್ಷದ ವರಿಷ್ಠರು ಪ್ರಚಾರ ಕಣಕ್ಕೆ ಎಂಟ್ರಿಯಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಶಿರಾದಲ್ಲಿ ಚಕ್ರವ್ಯೂಹ ರಚಿಸುತ್ತಿದ್ದಾರೆ.
ಆದರೆ ಈ ಹೊತ್ತಲ್ಲೇ ಡಿಕೆಶಿ ಅವರ ಫೋಟೋ ಒಂದು ಫುಲ್ ವೈರಲ್ ಆಗಿದೆ. ಡಿಕೆಶಿ ಪ್ರಚಾರದ ವೇಳೆ ಕಾಣಿಸಿರುವ 'ಆರ್ಸಿಬಿ' ಲೋಗೋ ಇರುವ ಛತ್ರಿ ಕರುನಾಡಿನ ಗಮನ ಸೆಳೆದಿದೆ. ಈಗಾಗಲೇ ಆರ್ಸಿಬಿ ತಂಡ ಗೆಲುವಿನ ಹುಮ್ಮಸ್ಸಿನಲ್ಲಿದ್ದು, 'ಈ ಸಲ ಕಪ್ ನಮ್ದೆ' ಅಂತಾ ನಾಡಿನ ಕ್ರಿಕೆಟ್ ಅಭಿಮಾನಿಗಳು ಉದ್ಘರಿಸುತ್ತಿದ್ದಾರೆ. ಇದರ ನಡುವೆ ಡಿ.ಕೆ. ಶಿವಕುಮಾರ್ ಪ್ರಚಾರದಲ್ಲೂ ಆರ್ಸಿಬಿ ಛತ್ರಿ ಎಂಟ್ರಿಯಾಗಿ 'ಟೀಂ ಆರ್ಸಿಬಿ' ಅಭಿಮಾನಿಗಳ ಹುಮ್ಮಸ್ಸು ದುಪ್ಪಟ್ಟಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ಕೊಡೆ ಬಾರಿ ಸದ್ದು ಮಾಡುತ್ತಿವೆ.

ಆರ್ಸಿಬಿ ಅಭಿಮಾನಿಗಳಿಂದ ಅಪ್ಲೋಡ್
ಈ ಫೋಟೋ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿರುವುದು ಆರ್ಸಿಬಿ ಅಭಿಮಾನಿಗಳು. ಹಾಗೇ ಆ ಫೋಟೋ ವೈರಲ್ ಆಗುತ್ತಿರುವುದು ಕೂಡ ಕೋಟಿ ಕೋಟಿ ಆರ್ಸಿಬಿ ಫ್ಯಾನ್ಸ್ಗಳಿಂದ. ಡಿ.ಕೆ. ಶಿವಕುಮಾರ್ ಛತ್ರಿ ಹಿಡಿದ ಮೇಲೆ ಆರ್ಸಿಬಿಗೆ ಒಲಿಯಿತು ಅದೃಷ್ಟ, ಈ ಬಾರಿ ಗೆಲುವು ನಮ್ಮದೇ, ಈ ಸಲ ಕಪ್ ನಮ್ಮದೇ ಅಂತಾ ಅಭಿಮಾನಿಗಳು ಫೋಟೋ ವೈರಲ್ ಮಾಡುತ್ತಿದ್ದಾರೆ. ಅಲ್ಲದೆ ಲಕ್ಷಾಂತರ ಜನರು ಫೋಟೋ ಶೇರ್ ಮಾಡುತ್ತಿದ್ದು, ಮಿಲಿಯನ್ ಗಟ್ಟಲೇ ಲೈಕ್ ಕೂಡ ಗಿಟ್ಟಿಸುತ್ತಿದೆ.

ಮಳೆ ಬಂದಿದ್ದಕ್ಕೆ ಕೊಡೆ ಹಿಡಿದರು..!
ಅಂದಹಾಗೆ ಈ ಫೋಟೋ ವೈರಲ್ ಆಗುವುದರ ಹಿಂದೆ ದೊಡ್ಡ ಕತೆಯಿದೆ. ಈ ಫೋಟೋ ವೈರಲ್ ಆಗಲು ಕಾರಣಕರ್ತ ಮಿಸ್ಟರ್ ಮಳೆರಾಯ. ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿರುವ ರೀತಿ ತುಮಕೂರಿನ ಹಲವೆಡೆ ತುಂತುರು ಮಳೆ ಬೀಳುತ್ತಿದೆ. ಹೀಗೆ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗಿದ್ದಾಗ ಮಳೆ ಶುರುವಾಗಿದೆ. ಶಿರಾದ ದೊಡ್ಡ ಆಲದ ಮರದ ಬಳಿ ಪ್ರಚಾರ ನಡೆಸುವಾಗ ಮಳೆ ಬಂದಿದ್ದು, ಕೂಡಲೇ ಡಿ.ಕೆ. ಶಿವಕುಮಾರ್ಗಾಗಿ ಅವರ ಬೆಂಬಲಿಗರು ಆರ್ಸಿಬಿ ಲೋಗೋ ಇದ್ದ ಕೊಡೆ ತಂದಿದ್ದಾರೆ. ಸಮೀಪದಲ್ಲೇ ಇದ್ದ ಅಂಗಡಿಯಿಂದ ಕೊಡೆ ತರಲಾಗಿದ್ದು, ಸ್ಥಳದಲ್ಲಿದ್ದ ಆರ್ಸಿಬಿ ಅಭಿಮಾನಿಗಳು ಫೋಟೋ ತೆಗೆದು ಅದನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಈಗ ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
-
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕಡೆ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಎಂದ ಡಿ.ಕೆ.ಶಿವಕುಮಾರ್ -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
ಐಪಿಎಲ್ನಲ್ಲಿ ಯಾರೂ ಕೊಳ್ಳದಿದ್ದರೂ ಅಯೋಧ್ಯೆಯಲ್ಲಿ ಅಬ್ಬರಿಸಿದ ಆರ್ಸಿಬಿ ಮಾಜಿ ಆಟಗಾರ; 195 ರನ್ ಚಚ್ಚಿದ ಸ್ವಸ್ತಿಕ್ ಚಿಕಾರ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್












Click it and Unblock the Notifications