ಅಪಘಾತದಲ್ಲಿ ಪ್ರೇಮಿ ಸಾವು, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಪ್ರಿಯತಮೆ
ತುಮಕೂರು, ಮೇ 15: ಪ್ರೀತಿಸಿ ಮನೆಯವರನ್ನೆಲ್ಲಾ ಒಪ್ಪಿಸಿ ಮದುವೆ ಸಿದ್ಧತೆ ಪ್ರೇಮಿಗಳ ಜೀವನ ದುರಂತದಲ್ಲಿ ಅಂತ್ಯಕಂಡಿದೆ. ದಾಂಪ್ಯದ ಜೀವನಕ್ಕೆ ಕಾಲಿಟ್ಟು ಬದುಕಿ ಬಾಳಬೇಕೆಂದು ಕೊಂಡಿದ್ದ ಯುವ ಜೊಡಿಯ ಬಾಳಲ್ಲಿ ಜವರಾಯ ಅಟ್ಟಹಾಸ ಮೆರದಿದ್ದಾನೆ.
ಎರಡು ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದ ತುಮಕೂರಿನ ಮಸ್ಕಲ್ ಗ್ರಾಮದ ಧನುಷ್(23) ಮತ್ತು ಎಂ.ಕಾಮ್ ಓದುತ್ತಿದ್ದ ಅರೆಹಳ್ಳಿ ಸುಷ್ಮಾ(22) ಮನೆಯವರನ್ನು ಒಪ್ಪಿಸಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದರು. ಆದರೆ ಧನುಷ್ ಅಪಘಾತದಲ್ಲಿ ಮೃತಪಟ್ಟರೆ, ಮದುವೆಯಾಗಬೇಕಿದ್ದ ಯುವತಿ ಪ್ರಿಯತಮನ ಅಗಲಿಕೆಯ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನೆಲಮಂಗಲದ
ಕುಲಾನಹಳ್ಳಿ
ಬಳಿ
ಅಪಘಾತ
ಬೆಂಗಳೂರಿನಲ್ಲಿ
ಸ್ವಂತ
ಬಟ್ಟೆ
ಅಂಗಡಿ
ನಡೆಸುತ್ತಿದ್ದ
ಧನುಷ್,
ಊರಿನ
ಜಾತ್ರೆಗೆ
ಬರುವ
ವೇಳೆ
ಮೇ
11
ರಂದು
ನೆಲಮಂಗಲದ
ಕುಲಾನಹಳ್ಳಿ
ಬಳಿ
ನಡೆದ
ಅಪಘಾತದಲ್ಲಿ
ಸಾವನ್ನಪ್ಪಿದ್ದ.
ಈ
ಸಾವಿನ
ಸುದ್ದಿ
ಕೇಳಿದ
ಸುಷ್ಮಾ
ಆಘಾತಕ್ಕೆ
ಒಳಗಾಗಿ,
ವಿಷ
ಸೇವಿಸಿ
ಆತ್ಮಹತ್ಯೆ
ಮಾಡಿಕೊಂಡಿದ್ದಾರೆ.
ಧನುಷ್
ಅಂತ್ಯ
ಸಂಸ್ಕಾರದಲ್ಲಿ
ಭಾಗಿಯಾಗಿದ್ದ
ಸುಷ್ಮಾ
ಅಪಘಾತದಲ್ಲಿ
ಸಾವನ್ನಪ್ಪಿದ
ಧನುಷ್
ಅಂತ್ಯ
ಸಂಸ್ಕಾರದಲ್ಲಿ
ಸುಷ್ಮಾ
ಭಾಗವಹಿಸಿದ್ದರು.
ಆದರೆ
ಅಂದಿನಿಂದಲೂ
ಧನುಷ್
ಸಾವಿನ
ಯೋಚನೆಯಲ್ಲಿಯೇ
ದುಃಖಿಸುತ್ತಿದ್ದ
ಅವರು
ಆತ್ಮಹತ್ಯೆಯ
ಹಾದಿ
ಹಿಡಿದಿದ್ದಾರೆ.
ತಮ್ಮ
ಮನೆಯಲ್ಲಿ
ವಿಷ
ಸೇವಿಸಿದ್ದಾರೆ.
ತಕ್ಷಣ
ಅವರನ್ನು
ಪೋಷಕರು
ಚಿಕಿತ್ಸೆಗಾಗಿ
ವಿವಿಧ
ಆಸ್ಪತ್ರೆಗಾಗಿ
ಕರೆದುಕೊಂಡು
ಹೋದರಾದರೂ,
ಚಿಕಿತ್ಸೆ
ಫಲಕಾರಿಯಾಗದೇ
ಸುಷ್ಮಾ
ಕೊನೆಯುಸಿರೆಳೆದಿದ್ದಾರೆ.
ಈ
ಸಂಬಂಧಿಸಿದಂತೆ
ತುಮಕೂರು
ಗ್ರಾಮಾಂತರ
ಪೊಲೀಸ್
ಠಾಣೆಯಲ್ಲಿ
ಪ್ರಕರಣ
ದಾಖಲಿಸಲಾಗಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777