ಯುವಜನತೆಗೆ ಮಾದರಿ: ಆಂಬುಲೆನ್ಸ್ನಲ್ಲೇ ಬಂದ ಮತ ಚಲಾಯಿಸಿದ ಹಾಸಿಗೆ ಹಿಡಿದಿದ್ದ ರೋಗಿ
ತುಮಕೂರು, ಮೇ.01: ಪ್ರಜಾಪ್ರಭುತ್ವದ ಹಬ್ಬ ಇಂದು ಮುಗಿಯುತ್ತಿದ್ದು, ಹಲವು ಅಪರೂಪದ ಅಂಶಗಳಿಗೆ ಈ ದಿನ ಸಾಕ್ಷಿಯಾಗಿದೆ. ಮತದಾರರಲ್ಲಿ ಮದುಮಕ್ಕಳು, ವೃದ್ದರು, ಹಾಸಿಗೆ ಹಿಡಿದವರು, ಬಾಣಂತಿ, ಗರ್ಭಿಣಿಯರು ಕಾಣಿಸಿಕೊಂಡಿದ್ದಾರೆ. ತಮ್ಮ ಆರೋಗ್ಯ ಸ್ಥಿತಿ ಹೇಗೆ ಇದ್ದರೂ ಸಾಂವಿಧಾನಿಕ ಹಕ್ಕನ್ನು ಚಲಾಯಿಸಿದ್ದಾರೆ.
ಹಾಗೆಯೇ ಕಲ್ಪತರು ನಾಡು ತುಮಕೂರಿನಲ್ಲಿ ಗಂಭೀರ ಸ್ವರೂಪದ ಅಪಘಾತದಿಮದ ಹಾಸಿಗೆ ಹಿಡಿದಿರುವ ವ್ಯಕ್ತಿಯೊಬ್ಬರು ಆಂಬುಲೆನ್ಸ್ನಲ್ಲಿ ಬಂದು ಮತದಾನ ಮಾಡಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಇದು ಇತರ ಮತದಾರರಿಗೂ ಮಾದರಿ ನಡೆಯಾಗಿದೆ.

ತುಮಕೂರು ನಗರದ ಸಂಪಗಿರಾಮು ಎಂಬ ವ್ಯಕ್ತಿಯೇ ಹಾಸಿಗೆಯಲ್ಲಿದ್ದರು ಮತ ಚಲಾಯಿಸಿದ ಪ್ರಜ್ಞಾವಂತ ಮಾತದಾರ. ಸಂಪಗಿರಾಮು ಅವರಿಗೆ ಅಫಘಾತವಾಗಿ ಗಂಭೀರ ಗಾಯದ ಪರಿಣಾಮ ನಾಲ್ಕು ತಿಂಗಳಿನಿಂದ ಹಾಸಿಗೆಯಲ್ಲಿಯೇ ಇದ್ದಾರೆ. ಆದರೆ, ಚುನಾವಣೆಯ ದಿನ ತಮ್ಮ ಪತ್ನಿ ಜೊತೆ ಆಂಬುಲೆನ್ಸ್ನಲ್ಲಿ ಬಂದು ಮತ ಚಲಾಯಿಸಿದ್ದಾರೆ.
ಸಂಪಗಿರಾಮು ತುಮಕೂರು ನಗರದ ರೈಲ್ವೇ ಸ್ಟೇಷನ್ ರಸ್ತೆಯ ಮತಗಟ್ಟೆ ಸಂಖ್ಯೆ 148ರಲ್ಲಿ ಮತದಾನ ಮಾಡಿದ್ದಾರೆ. ಹಾಸಿಗೆ ಹಿಡಿದಿದ್ದರೂ ಕೂಡ ಮತದಾನ ಮಾಡಬೇಕ್ಕೆನ್ನುವ ಅವರ ಉತ್ಸಾಹಕ್ಕೆ ಚುನಾವಣಾ ಸಿಬ್ಬಂದಿ ಸಾಥ್ ನೀಡಿದ್ದಾರೆ. ಚುನಾವಣಾ ಸಿಬ್ಬಂದಿ ಸಹಾಯದಿಂದ ಸಂಪಗಿರಾಮು ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಿದ್ದಾರೆ. ಎಂತಹ ಸ್ಥಿತಿಯಲ್ಲಿದ್ದರೂ ಮತ ಚಲಾಯಿಸಬೇಕು ಎನ್ನುವ ಇವರ ಮಾತುಗಳು ಇತರರಿಗೂ ಮಾದರಿ.
ಇನ್ನು, ಮಣಿಪಾಲ್ ಆಸ್ಪತ್ರೆ ಕೂಡ ತಮ್ಮ ಆಸ್ಪತ್ರೆಗಳಲ್ಲಿ ದಾಖಲಾಗಿರುವ ವೈದ್ಯರು ಶಿಫಾರಸು ಮಾಡಿರುವ 16 ರೋಗಿಗಳಿಗೆ ಮತದಾನ ಮಾಡಲು ನೆರವು ನೀಡಿದೆ. ಮುಖ್ಯ ಚುನಾವಣಾ ಅಧಿಕಾರಿ ಮತ್ತು ಬಿಬಿಎಂಪಿ ಆಯುಕ್ತರನ್ನು ಸಂಪರ್ಕಿಸಿ ಈ ಒಳರೋಗಿಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಚರ್ಚಿಸಿ ಈ ಕೆಲಸವನ್ನು ಮಾಡಿವೆ. ಆಸ್ಪತ್ರೆಗಳಲ್ಲಿ ತಮ್ಮ ವೈದ್ಯರಿಂದ ಸಂಪೂರ್ಣ ಆರೋಗ್ಯ ತಪಾಸಣೆ ಮತ್ತು ಅನುಮೋದನೆಯ ನಂತರ, ರೋಗಿಗಳನ್ನು ನೋಂದಾಯಿತ ವಾಹನಗಳಲ್ಲಿ ಮತ ಚಲಾಯಿಸಲು ಮತಗಟ್ಟೆಗಳಿಗೆ ಕರೆದುಕೊಮಡು ಹೋಗಿ ಮತದಾನ ಮಾಡಿಸಿದ್ದಾರೆ.

ಈ 16 ರೋಗಿಗಳಲ್ಲಿ ಡಯಾಲಿಸಿಸ್ನಲ್ಲಿರುವ ರೋಗಿಗಳು, ಅಪಘಾತದಿಮದ ಚೇತರಿಸಿಕೊಳ್ಳುವವರು, ಕೀಮೋಥೆರಪಿಯಲ್ಲಿರುವ ರೋಗಿಗಳು ಮತ್ತು ಶ್ವಾಸಕೋಶದ ಕ್ಯಾನ್ಸರ್ನಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳು ಸೇರಿದ್ದರು. ಯಾವುದೇ ಅನಗತ್ಯ ಅವಘಡಗಳನ್ನು ತಪ್ಪಿಸಲು ಆಸ್ಪತ್ರೆಯು ಎಲ್ಲಾ 16 ರೋಗಿಗಳಿಗೆ ವೈದ್ಯಕೀಯ ಮತ್ತು ಸಾರಿಗೆ ನೆರವು ನೀಡಿತ್ತು.
-
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications