ಶಬರಿಮಲೆ ಸ್ವಾಮಿ ಅಯ್ಯಪ್ಪ: 41 ದಿನಗಳ ಪೂಜೆ ಮುಕ್ತಾಯ
ತಿರುವನಂಯಪುರಂ, ಡಿಸೆಂಬರ್ 28: ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಾನದ ಪ್ರಸಕ್ತ ಅವಧಿಯ ಪೂಜಾ ಕ್ರಮಗಳು ಒಂದು ಹಂತಕ್ಕೆ ತಲುಪಿವೆ. ಶನಿವಾರ ನಡೆದ ಮಂಡಲ ಪೂಜೆ ಬಳಿಕ ಈ ಉತ್ಸವದ ಅವಧಿಯಲ್ಲಿನ ಸತತ 41 ದಿನಗಳ ಮಂಡಲ ಪೂಜೆ ಮುಕ್ತಾಯಗೊಂಡಂತಾಗಿದೆ.
ಮುಖ್ಯ ಅರ್ಚಕ (ತಂತ್ರಿ) ಕಂಡರಾರು ರಾಜೀವರು ಅವರ ನೇತೃತ್ವದಲ್ಲಿ ಶನಿವಾರವಿಡೀ ವಿವಿಧ ಧಾರ್ಮಿಕ ಆಚರಣೆಗಳು ನಡೆದವು. ರಾತ್ರಿ 11.40ರಿಂದ 12.20ರ ನಡುವೆ ಮಂಡಲಪೂಜೆ ನಡೆಯಿತು. ಪೂಜೆಗೂ ಮುನ್ನ ಪವಿತ್ರ ಅಯ್ಯಪ್ಪನ ವಿಗ್ರಹವನ್ನು ಚಿನ್ನದ ದಿರಿಸು 'ತಂಕ ಅಂಕಿ'ಯಿಂದ ಅಲಂಕರಿಸಲಾಯಿತು. ಅದಕ್ಕೂ ಮುನ್ನ ಮೆರವಣಿಗೆ ಮೂಲಕ ತಂಕ ಅಂಕಿಯನ್ನು ಶಬರಿಮಲೆಗೆ ತರಲಾಗಿತ್ತು.
ಇನ್ನು ಡಿ. 30ರ ಸಂಜೆ 5 ಗಂಟೆಯವರೆಗೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮುಚ್ಚಿರಲಿದೆ. ಡಿಸೆಂಬರ್ 31ರ ಬಳಿಕ ಭಕ್ತರು ಭೇಟಿ ನೀಡಲು ಅವಕಾಶವಿದೆ. ಅಲ್ಲಿಂದ 21 ದಿನಗಳವರೆಗಿನ ಮಕರವಿಳಕ್ಕು ಅವಧಿಯಲ್ಲಿ ಪೂಜಾ ಕಾರ್ಯಗಳು ಪುನಃ ನಡೆಯಲಿದೆ. ಜನವರಿ 11ರಂದು ಎರುಮೇಲಿಯಲ್ಲಿ ಪೆಟ್ಟ ತುಳ್ಳಾಲ್ ನಡೆಯಲಿದೆ. ಮರುದಿನ ಪಂಡಲಂನಿಂದ ಶಬರಿಮಲೆಗೆ ತಿರುವಾಭರಣಂ ಸಾಗಿಸುವ ಮೆರವಣಿಗೆ ನಡೆಯಲಿದೆ.

ಜನವರಿ 14ರಂದು ಮಕರವಿಳಕ್ಕು ನಡೆಯಲಿದ್ದು, ಅಂದು ಗುರುತಿ ಸಂಪ್ರದಾಯಗಳು ಜರುಗಲಿದೆ. ಜನವರಿ 19ರ ಸಂಜೆ ಮಲಿಕಾಪ್ಪರಂ ದೇವಿ ದೇವಸ್ಥಾನದ ಆವರಣದಲ್ಲಿ ವಾರ್ಷಿಕ ಮಕರವಿಳಕ್ಕು ಉತ್ಸವ ನಡೆಯಲಿದೆ. ಜನವರಿ 20ರ ಬೆಳಿಗ್ಗೆ ರಾಜಮನೆತನದ ಪ್ರತಿನಿಧಿಗಳಿಗೆ ಪ್ರತ್ಯೇಕವಾಗಿ ಪವಿತ್ರ ದರ್ಶನ ಅವಕಾಶ ನೀಡಿದ ಬಳಿಕ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಾಗಿಲು ಮುಚ್ಚಲಿದೆ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications