ಎಲ್ಎಲ್ಬಿ ಪದವಿ ಪಡೆಯದೆಯೇ ಬಾರ್ ಕೌನ್ಸಿಲ್ ಚುನಾವಣೆ ಗೆದ್ದ ಮಹಿಳೆ! ಈಗ ಪರಾರಿ
ತಿರುವನಂತಪುರಂ, ಜು.24: ಕೇರಳದ ಆಲಪ್ಪುಳ ಜಿಲ್ಲೆಯ ಮಹಿಳೆಯು ಎಲ್ಎಲ್ಬಿ ಪದವಿ ಪಡೆಯದೆಯೇ ಹಾಗೂ ರಾಜ್ಯ ಬಾರ್ ಕೌನ್ಸಿಲ್ಗೆ ಸೇರ್ಪಡೆಗೊಳ್ಳದೆಯೇ ಎರಡು ವರ್ಷಗಳ ಕಾಲ ವಕೀಲೆಯಾಗಿ ವಕೀಲೆಯಾಗಿರುವ ಮೂಲಕ ಸಂಪೂರ್ಣ ಕಾನೂನು ವ್ಯವಸ್ಥೆಯನ್ನು ಮೋಸಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನ್ಯೂಸ್ ಮಿನಿಟ್ನ ವರದಿಯ ಪ್ರಕಾರ, ಈ ವರ್ಷ ಆ ಮಹಿಳೆ ಬಾರ್ ಅಸೋಸಿಯೇಷನ್ ಚುನಾವಣೆಗೆ ಸ್ಪರ್ಧಿಸಿ ಗ್ರಂಥಪಾಲಕರಾಗಿ ಆಯ್ಕೆಯಾದರು.
ಘಟನೆಯನ್ನು ವರದಿ ಮಾಡಿದ ಲೈವ್ ಲಾ ಪ್ರಕಾರ, ಮಹಿಳೆ ಅಲಪ್ಪುಳದಲ್ಲಿರುವ ಪ್ರಸಿದ್ಧ ವಕೀಲರ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಕೆಲಸ ಮಾಡುವ ಮೂಲಕ ಬಾರ್ ಕೌನ್ಸಿಲ್ ಅನ್ನು ಮೋಸಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದಕ್ಕೂ ಮೊದಲು ಅಂತಿಮ ವರ್ಷದ ಎಲ್ಎಲ್ಬಿ ವಿದ್ಯಾರ್ಥಿನಿ ಎಂದು ಹೇಳಿಕೊಂಡು ಈ ಮಹಿಳೆಯು ಅದೇ ವಕೀಲರೊಂದಿಗೆ ಇಂಟರ್ನ್ಶಿಪ್ ಮಾಡಿದ್ದರು. ನಂತರ ಆಕೆ ತಾನು ಬಾರ್ ಕೌನ್ಸಿಲ್ಗೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದು, ಆಲಪ್ಪುಳ ಬಾರ್ ಅಸೋಸಿಯೇಷನ್ಗೆ ಪ್ರವೇಶಿಲು ಅರ್ಜಿ ಕೂಡಾ ಸಲ್ಲಿಸಿದ್ದರು.
ಮಹಿಳೆ ಯಾವುದೇ ಕಾನೂನು (ಎಲ್ಎಲ್ಬಿ) ಪದವಿ ಪಡೆದಿಲ್ಲ ಅಥವಾ ದಾಖಲಾತಿ ಪ್ರಮಾಣಪತ್ರವನ್ನು ಹೊಂದಿಲ್ಲ ಜುಲೈನಲ್ಲಿ, ಬಾರ್ ಅಸೋಸಿಯೇಷನ್ ಅನಾಮಧೇಯ ಪತ್ರವೊಂದು ಎಚ್ಚರಿಸಿದೆ. ಈ ಬಗ್ಗೆ ವಿಚಾರಣೆ ನಡೆಸಿದ ಬಳಿಕ ಇದರ ಸತ್ಯಾಂಶ ತಿಳಿದುಬಂದಿದ್ದು, ಸಂಘವು ಜಿಲ್ಲಾ ಮುಖ್ಯ ನ್ಯಾಯಾಧೀಶರನ್ನು ಎಚ್ಚರಿಸಿ ಆಲಪ್ಪುಳ ಉತ್ತರ ಪೊಲೀಸ್ ಠಾಣೆ ಪೊಲೀಸರಿಗೆ ದೂರು ನೀಡಿದೆ.
ಬಾರ್ನ ಸದಸ್ಯರಾಗಲು, ಎಲ್ಎಲ್ಬಿ ಪದವಿ ಹೊಂದಿರುವವರು ಯಾವುದೇ ಬಾರ್ ಕೌನ್ಸಿಲ್ಗಳೊಂದಿಗೆ ದಾಖಲಾಗಬೇಕು. ದಾಖಲಾತಿ ಸಂಖ್ಯೆ ಮತ್ತು ಪ್ರಮಾಣಪತ್ರವನ್ನು ಪಡೆಯಬೇಕು. ಈ ಮಹಿಳೆಯು ಅರ್ಹತೆ ಇಲ್ಲದ ಕಾರಣ ಕೇರಳ ರಾಜ್ಯ ಬಾರ್ ಕೌನ್ಸಿಲ್ಗೆ ದಾಖಲಾಗಲು ಸಾಧ್ಯವಾಗಲಿಲ್ಲ. ಆದರೆ ಆಕೆ ತಿರುವನಂತಪುರಂನ ಇನ್ನೊಬ್ಬ ವಕೀಲರಿಗೆ ಸೇರಿದ ದಾಖಲಾತಿ ಸಂಖ್ಯೆಯನ್ನು ಕೊಟ್ಟಿದ್ದಾಳೆ ಎಂದು ಹೇಳಲಾಗಿದೆ.
ಜುಲೈ 23 ರ ಗುರುವಾರ, ಶರಣಾಗತಿ ಮತ್ತು ಜಾಮೀನು ಪಡೆಯಲು ಮಹಿಳೆಯು ನ್ಯಾಯಾಲಯಕ್ಕೆ ಹಾಜರಾಗಿದ್ದಾಳೆ. ಆದಾಗ್ಯೂ ಆಲಪ್ಪುಳ ಪೊಲೀಸರು ಜಾಮೀನು ರಹಿತ ವಿಭಾಗಗಳಾದ 420 (ಮೋಸ ಮತ್ತು ಅಪ್ರಾಮಾಣಿಕವಾಗಿ ಆಸ್ತಿಯನ್ನು ವಿತರಿಸಲು ಪ್ರೇರೇಪಣೆ) ಕೂಡ ಸೇರಿಸಿದ್ದರು. ಜಾಮೀನು ರಹಿತ ಅಪರಾಧಗಳ ಅಡಿಯಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದ ನಂತರ ಮಹಿಳೆಯು ನ್ಯಾಯಾಲಯದಿಂದ ಪರಾರಿಯಾಗಿದ್ದಾಳೆಂದು ವರದಿಯಾಗಿದೆ. ವರದಿಗಳ ಪ್ರಕಾರ, ಈವರೆಗೆ ಆಕೆಯನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ.
(ಒನ್ಇಂಡಿಯಾ ಸುದ್ದಿ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications