Get Updates
Get notified of breaking news, exclusive insights, and must-see stories!

#KeralaStandsOut: ಯುಪಿಗಿಂತ ಕೇರಳವೇ ಬೆಸ್ಟ್; ಸಿಎಂ ಯೋಗಿ ವಿರುದ್ಧ ಪಿಣರಾಯಿ ಟ್ವೀಟ್

ತಿರುವನಂತಪುರಂ, ಫೆಬ್ರವರಿ 12: ಉತ್ತರ ಪ್ರದೇಶದಲ್ಲಿ ಮತದಾರರು ಸ್ವಲ್ಪ ಎಡವಿದರೂ ರಾಜ್ಯವು ಮತ್ತೊಂದು ಕೇರಳ, ಪಶ್ಚಿಮ ಬಂಗಾಳ ಅಥವಾ ಕಾಶ್ಮೀರವಾಗಿ ಪರಿವರ್ತನೆ ಆಗುತ್ತದೆ ಎಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಮರ ಸಾರಿದ್ದಾರೆ.

ನಾನು ಕೇರಳದ ಪರವಾಗಿ ನಿಲ್ಲುತ್ತೇನೆ. ಏಕೆಂದರೆ ದೇಶದ ಬಹುತೇಕ ವಲಯಗಳಲ್ಲಿ ಕೇರಳ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಉತ್ತಮ ಆಡಳಿತ, ಕಾನೂನು ವ್ಯವಸ್ತೆ, ಶಿಕ್ಷಣ, ಆರೋಗ್ಯ, ಶಿಶು ಮರಣ ಪ್ರಮಾಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ನೀತಿ ಆಯೋಗವು ನೀಡಿದ ಸೂಚ್ಯಂಕಗಳ ಸಮೇತವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿಗೆ ಪಿಣರಾಯಿ ವಿಜಯನ್ ತಿರುಗೇಟು ನೀಡಿದ್ದಾರೆ.

ಆರೋಗ್ಯ, ಶಿಕ್ಷಣ, ಅಭಿವೃದ್ಧಿ ಸೇರಿದಂತೆ ಎಲ್ಲ ವಲಯಗಳಲ್ಲಿ ಕೇರಳ ಉತ್ತಮ ಸ್ಥಾನದಲ್ಲಿದೆ. ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ 2021 ರ ಪ್ರಕಾರ ಕೇರಳವು ಭಾರತದಲ್ಲಿ ಅತ್ಯುತ್ತಮ ಆಡಳಿತವನ್ನು ಹೊಂದಿರುವ ರಾಜ್ಯ ಎಂದು ಗುರುತಿಸಲ್ಪಟ್ಟಿದೆ.

ಕೇರಳದಲ್ಲಿ ಬಡವರ ಸಂಖ್ಯೆ ತೀರಾ ಕಡಿಮೆಯಾಗಿದೆ. ನೀತಿ ಆಯೋಗದ ಬಹು ಆಯಾಮದ ಬಡತನ ಸೂಚ್ಯಂಕದ ಕುರಿತು ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ. ನೀತಿ ಆಯೋಗದ ಬಹು ಆಯಾಮದ ಬಡತನ ಸೂಚ್ಯಂಕದ ಪ್ರಕಾರ, ಭಾರತದಲ್ಲಿ ಒಟ್ಟು ಬಡವರ ಪ್ರಮಾಣ ಶೇ.25.02ರಷ್ಟಿದೆ. ಈ ಪೈಕಿ ಅತಿಕಡಿಮೆ ಬಡವರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಕೇರಳದಲ್ಲಿ ಶೇ.0.71ರಷ್ಟು ಜನರು ಮಾತ್ರ ಬಡತನದಲ್ಲಿದ್ದಾರೆ ಎಂದು ನೀತಿ ಆಯೋಗದ ವರದಿಯಲ್ಲಿ ತಿಳಿಸಿದೆ.

ಅತಿಹೆಚ್ಚು ಶೇಕಡಾವಾರು ಬಡವರನ್ನು ಹೊಂದಿದ ರಾಜ್ಯ

ಅತಿಹೆಚ್ಚು ಶೇಕಡಾವಾರು ಬಡವರನ್ನು ಹೊಂದಿದ ರಾಜ್ಯ

ರಾಷ್ಟ್ರೀಯ ನೀತಿ ಆಯೋಗದ ಬಹು ಆಯಾಮದ ಬಡತನ ಸೂಚ್ಯಂಕದ ಪ್ರಕಾರ, ಭಾರತದಲ್ಲಿ ಒಟ್ಟು ಬಡವರ ಪ್ರಮಾಣ ಶೇ.25.02ರಷ್ಟಿದೆ. ಕೇರಳವು ಶೇ.0.71ರಷ್ಟು ಬಡವರನ್ನು ಹೊಂದಿದ್ದು, ಅತಿಕಡಿಮೆ ಬಡವರನ್ನು ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ಇನ್ನೊಂದು ದಿಕ್ಕಿನಲ್ಲಿ ಬಿಹಾರದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಬಡವರಿದ್ದು, ಬಡತನ ರೇಖೆಗಿಂತ ಕೆಳಗಿರುವವರ ಶೇಕಡಾವಾರು ಪ್ರಮಾಣ 51.91ರಷ್ಟಿದೆ. ಜಾರ್ಖಂಡ್ ಶೇ.42.16ರಷ್ಟಿದ್ದರೆ, ಉತ್ತರ ಪ್ರದೇಶ ಶೇ.37.79ರಷ್ಟಿದೆ. ಇನ್ನು ಮಧ್ಯ ಪ್ರದೇಶದಲ್ಲಿ ಶೇ.36.65ರಷ್ಟು ಮಂದಿ ಬಡವರಾಗಿದ್ದರೆ, ಮೇಘಾಲಯದಲ್ಲಿ ಶೇ.32.67ರಷ್ಟಿದೆ ಎಂಬುದು ಸೂಚ್ಯಂಕದಲ್ಲಿ ಉಲ್ಲೇಖಿಸಲಾಗಿದೆ.

ಸಾಕ್ಷರತೆ ಪ್ರಮಾಣ ಶೇ.98.25ರಷ್ಟಿದೆ

ಸಾಕ್ಷರತೆ ಪ್ರಮಾಣ ಶೇ.98.25ರಷ್ಟಿದೆ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ - 5ರ ಪ್ರಕಾರ, ಕೇರಳ ಜನಸಂಖ್ಯೆಯ ಶೇ.98.25ರಷ್ಟು ಜನರು ಸಾಕ್ಷರತೆಯನ್ನು ಹೊಂದಿದ್ದಾರೆ. ಪುರುಷರು ಶೇ.97.40ರಷ್ಟು ಸಾಕ್ಷರರಾಗಿದ್ದರೆ, ಮಹಿಳೆಯರಲ್ಲಿ ಸಾಕ್ಷರತೆ ಪ್ರಮಾಣ ಶೇ.97.10ರಷ್ಟಿದೆ ಎಂದು ಪಿಣರಾಯಿ ವಿಜಯನ್ ಟ್ವೀಟ್ ಸಂದೇಶದಲ್ಲಿ ಹಂಚಿಕೊಂಡಿದ್ದಾರೆ.

ಆರೋಗ್ಯ ವಲಯದಲ್ಲೂ ಕೇರಳವೇ ಬೆಸ್ಟ್

ಆರೋಗ್ಯ ವಲಯದಲ್ಲೂ ಕೇರಳವೇ ಬೆಸ್ಟ್

ನಾನು ಕೇರಳದೊಂದಿಗೆ ನಿಲ್ಲುವುದಕ್ಕೆ ಬಯಸುತ್ತೇನೆ, ಏಕೆಂದರೆ 2020-2021 ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಸೂಚ್ಯಂಕ ಮತ್ತು 2019-20 ನೀತಿ ಆಯೋಗದ ಆರೋಗ್ಯ ಸೂಚ್ಯಂಕದಲ್ಲಿ ಶೇ.82.2 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ 2021ರ ಮೂಲಕ ಕೇರಳವು ಭಾರತದಲ್ಲಿ ಅತ್ಯುತ್ತಮ ಆಡಳಿತದ ರಾಜ್ಯವೆಂದು ಗುರುತಿಸಲ್ಪಟ್ಟಿದೆ.

ಕೇರಳದಲ್ಲಿ ಕಡಿಮೆ ಶಿಶು ಮರಣ ಪ್ರಮಾಣ

ಕೇರಳದಲ್ಲಿ ಕಡಿಮೆ ಶಿಶು ಮರಣ ಪ್ರಮಾಣ

ಕೇರಳದಲ್ಲಿ ಶಿಶು ಮರಣ ಪ್ರಮಾಣ ಶೇ.4.4ರಷ್ಟಿದ್ದು, ಇದು ಅತ್ಯಂತ ಕಡಿಮೆಯಾಗಿದೆ. ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಕೇರಳ ಸರಿಸಮಾನವಾಗಿದೆ. ಯುಎಸ್ಎಗಿಂತ ಕೇರಳದಲ್ಲಿ ಅತಿಕಡಿಮೆ ಶಿಶು ಮರಣ ಪ್ರಮಾಣವಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಕೇರಳವನ್ನು ಟೀಕಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ವಿರುದ್ಧ ತಿರುಗೇಟು ನೀಡಿದ್ದಾರೆ.

Recommended Video

      ತಕ್ಷಣವೇ Ukraine ತೊರೆಯುವಂತೆ ಅಮೆರಿಕನ್ನರಿಗೆ ಎಚ್ಚರಿಕೆ ಕೊಟ್ಟ Joe Biden | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+