ಶಶಿ ತರೂರ್ ತಲೆಗೆ ತೀವ್ರ ಪೆಟ್ಟು, 6 ಹೊಲಿಗೆ ಹಾಕಿದ ವೈದ್ಯರು
ತಿರುವನಂತಪುರಂ, ಏಪ್ರಿಲ್ 15: ಮಾಜಿ ಸಚಿವ, ಹಾಲಿ ಸಂಸದ ಶಶಿ ತರೂರ್ ಅವರ ತಲೆಗೆ ತೀವ್ರ ಗಾಯವಾಗಿದ್ದು, ವೈದ್ಯರು 11 ಹೊಲಿಗೆ ಹಾಕಿದ್ದಾರೆ.
ಶಶಿ ತರೂರ್ ಅವರು ದೇವಸ್ಥಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಧಾರ್ಮಿಕ ವಿಧಿ-ವಿಧಾನ ಪೂರೈಸುತ್ತಿರಬೇಕಾದರೆ ಅಚಾನಕ್ ಆಗಿ ಉರುಳಿ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು.
ಗಾಂಧಾರಿ ಅಮನ್ ಕೋವಿಲ್ ದೇವಸ್ಥಾನದಲ್ಲಿ ಇಂದು ತುಲಾಭಾರ ಸೇವೆ ನಡೆಸತ್ತಿದ್ದಾಗ ಅಚಾನಕ್ ಆಗಿ ತುಲಾಭಾರದ ತಕ್ಕಡಿಯಿಂದ ಶಶಿ ತರೂರ್ ಕೆಳಗೆ ಬಿದ್ದು ತಲೆಗೆ ತೀವ್ರವಾಗಿ ಪೆಟ್ಟಾಗಿ, ರಕ್ತಸ್ರಾವವಾಗಿದೆ. ಕೂಡಲೇ ಶಶಿ ತರೂರ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದು ಅವರ ತಲೆಗೆ 11 ಹೊಲಿಗೆ ಹಾಕಲಾಗಿದೆ. ತರೂರ್ ಅವರ ಕಾಲಿಗೂ ಸಹ ತೀವ್ರ ಪೆಟ್ಟಾಗಿದೆ.

ಶಶಿ ತರೂರ್ ಅವರು ತಿರುವನಂತಪುರಂ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದು ಪ್ರಚಾರ ಕಾರ್ಯಕ್ರಮದಲ್ಲಿ ನಿರತರಾಗಿದ್ದರು. ಆದರೆ ಇಂದು ಗಾಯಗೊಂಡ ಕಾರಣ ಪ್ರಚಾರ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.












Click it and Unblock the Notifications