Get Updates
Get notified of breaking news, exclusive insights, and must-see stories!

ಕಾಶ್ಮೀರದಲ್ಲಿ ಹದಗೆಟ್ಟ ಪರಿಸ್ಥಿತಿ: ಶಾ ಸಭೆ, ಮಾಯಾವತಿ ಟ್ವೀಟ್

ಶ್ರೀನಗರ ಜೂನ್ 03: ಕಾಶ್ಮೀರದಲ್ಲಿ ಪರಿಸ್ಥಿತಿ ಮತ್ತೊಮ್ಮೆ ಹದಗೆಟ್ಟಿದೆ. ಕಾಶ್ಮೀರಿ ಪಂಡಿತರು ಭಯೋತ್ಪಾದಕರ ಗುರಿಯ ಮೇಲೆ ಇಂದಿನಿಂದ ಸಾಮೂಹಿಕ ನಿರ್ಗಮನವನ್ನು ಘೋಷಿಸಿದ್ದಾರೆ. ಹದಗೆಡುತ್ತಿರುವ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೇಶದ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಪರಿಶೀಲಿಸಲು ಪರಿಶೀಲನಾ ಸಭೆಯನ್ನು ಕರೆದಿದ್ದಾರೆ. ಇದರಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಅರೆಸೇನಾ ಪಡೆಗಳ ಉನ್ನತ ಅಧಿಕಾರಿಗಳು ಮತ್ತು ಕೇಂದ್ರಾಡಳಿತ ಪ್ರದೇಶದ ನಾಗರಿಕ ಆಡಳಿತ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದ್ವೇಷದ ಬೆಂಕಿ ಮತ್ತೆ ಕಣಿವೆಯಲ್ಲಿ ಹೊಗೆಯಾಡುತ್ತಿದೆ. ಕಳೆದ 26 ದಿನಗಳಲ್ಲಿ 10 ಹಿಂದೂಗಳ ಹತ್ಯೆಯಾಗಿದೆ. ಜನರಲ್ಲಿ ಭೀತಿ ಆವರಿಸಿದೆ. ಈ ಭಯೋತ್ಪಾದಕ ಘಟನೆಗಳಿಂದ ಇತರ ರಾಜ್ಯಗಳಿಂದ ಬರುವ ಜನರು ಭಯಭೀತರಾಗಿದ್ದಾರೆ. ಅವರಿಗೆ ಭಯ ಹುಟ್ಟಿಸಿ ಕಣಿವೆಯನ್ನು ಬಿಡಲು ಒತ್ತಾಯಿಸಲಾಗುತ್ತದೆ. ಈಗಾಗಲೇ 30-40 ಕುಟುಂಬಗಳು ಶ್ರೀನಗರವನ್ನು ತೊರೆದಿದ್ದರೆ, ಕಣಿವೆಯಲ್ಲಿ ಕೆಲಸ ಮಾಡುತ್ತಿರುವ ಕಾಶ್ಮೀರಿ ಪಂಡಿತ್ ಅಜಯ್ ಅವರು ಕಣಿವೆಯಲ್ಲಿನ ಪರಿಸ್ಥಿತಿಯು 1990 ಕ್ಕಿಂತ ಕೆಟ್ಟದಾಗಿದೆ ಎಂದು ಹೇಳಿದ್ದಾರೆ. ಇಂತಹ ತಪ್ಪಿತಸ್ಥರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಕಾಶ್ಮೀರದಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಸದ್ಯ ರಾಜಕೀಯ ರಂಗದಲ್ಲಿ ವಾಗ್ವಾದಗಳನ್ನು ಸೃಷ್ಟಿ ಮಾಡಿದೆ. ಯುಪಿ ಮಾಜಿ ಸಿಎಂ ಮಾಯಾವತಿ ಟ್ವೀಟ್ ಮಾಡಿ, 'ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿದಿನ ಅಮಾಯಕರು ಹತ್ಯೆಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ರಾಜಸ್ಥಾನದ ನಿವಾಸಿ ಹಾಗೂ ಬ್ಯಾಂಕ್‌ ಮ್ಯಾನೇಜರ್‌ ಕೊಲೆಯಾದ ಘಟನೆ ನಡೆದಿದ್ದು, ಅತ್ಯಂತ ದುಃಖಕರ ಹಾಗೂ ಆತಂಕಕಾರಿ ಸಂಗತಿಯಾಗಿದೆ. ಇದರಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಂತಹ ತಪ್ಪಿತಸ್ಥರ ವಿರುದ್ಧ ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಮನವಿ ಮಾಡಿದ್ದಾರೆ.

Jammu and Kashmir terrorist attack: Shah meeting, Mayawati tweet

ಗಮನಾರ್ಹವೆಂದರೆ, ಗುರುವಾರ, ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬ್ಯಾಂಕ್ ಉದ್ಯೋಗಿ ವಿಜಯ್ ಕುಮಾರ್ ಅವರನ್ನು ಹತ್ಯೆ ಮಾಡಲಾಗಿತ್ತು. ವಿಜಯ್ ಮೂಲತಃ ರಾಜಸ್ಥಾನದವರಾಗಿದ್ದು, ಇಲ್ಲಿನ ಕುಲ್ಗಾಮ್‌ನ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲ ಈ ಘಟನೆಯ ನಂತರ ಬುದ್ಗಾಮ್‌ನಲ್ಲಿ ಚದೂರ ಪ್ರದೇಶದ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಒಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಮೃತರು ಬಿಹಾರದ ನಿವಾಸಿಯಾಗಿದ್ದು, ಅವರ ವಯಸ್ಸು ಕೇವಲ 17 ವರ್ಷ ಎನ್ನಲಾಗಿದೆ.

Recommended Video

      ಬೃಹತ್ ಗಾತ್ರದ ಕಾಳಿಂಗ ಸೆರೆ :ಕಾಳಿಂಗ ಸರ್ಪಕ್ಕೆ ಹೆದರುತ್ತಿದ್ದ ಜನರು ಈಗ ನಿರಾಳ | Oneindia Kannada

      (ಒನ್ಇಂಡಿಯಾ ಸುದ್ದಿ)

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+