ಕಣಿವೆ ರಾಜ್ಯದಲ್ಲಿ ಸೇನೆಯ ಬಲೆಗೆ ಬಿದ್ದ ಉಗ್ರ ಕಮಾಂಡರ್ಗಳು
ಶ್ರೀನಗರ, ಮೇ 31: ಭದ್ರತಾ ಪಡೆಗಳು ರಾತ್ರಿ ಇಡೀ ನಡೆಸಿದ ಕಾರ್ಯಾಚರಣೆಯಲ್ಲಿ ಹಿಜಾಬುಲ್ ಮುಜಾಹಿದ್ದೀನ್ ಹಾಗೂ ಲಷ್ಕರ್ ಎ ತೋಯ್ಬಾ ಸಂಘಟನೆಯ ಇಬ್ಬರು ಕಮಾಂಡರ್ಗಳನ್ನು ಬಂಧಿಸಲಾಗಿದೆ.
ಜಮ್ಮು ಮತ್ತು ಕಾಶ್ಮಿರದಲ್ಲಿ ಇಬ್ಬರು ಉಗ್ರರ ಹತ್ಯೆಗೈದ ಭಾರತೀಯ ಸೇನೆ
ಜಮ್ಮು ಮತ್ತು ಕಾಶ್ಮೀರದ ಶಾಪಿಯಾನ್ನಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರ ಕಮಾಂಡರ್ಗಳು ಸೇನೆಯ ಬಲೆಗೆ ಬಿದ್ದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
#SpotVisuals Jammu and Kashmir: Exchange of fire between terrorists and Security forces in Dragad Sugan area of Shopian District. (visuals deferred by unspecified time) pic.twitter.com/mCqmg0bLwf
— ANI (@ANI) May 31, 2019
ಉಗ್ರರು ಹಾಗೂ ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿದೆ ಕೊನೆಗೂ ಉಗ್ರರನ್ನು ಬಂಧಿಸುವಲ್ಲಿ ಸೇನೆ ಯಶಸ್ವಿಯಾಗಿದೆ. ಸೇನೆ ಹಾಗೂ ಸಿಆರ್ಪಿಎಫ್ ಸಿಬ್ಬಂದಿಗಳು , ಶಾಪಿಯನ್ ಪೊಲೀಸರು ಸ್ಥಳದಲ್ಲಿದ್ದರು, ಉಗ್ರ ಕಮಾಂಡರ್ಗಳನ್ನು ಕಟ್ಟಡದೊಳಗೆ ಸೆರೆ ಹಿಡಿಯಲಾಗಿದೆ ಎಂದು ತಿಳಿಸುಬಂದಿದೆ. ಎನ್ಕೌಂಟರ್ ಕಾರ್ಯಾಚರಣೆ ಈಗಲೂ ಮುಂದುವರೆದಿದೆ.