ಭಾರತದ ಮೇಲೆ ದಾಳಿ ಮಾಡಲು ಪಾಕ್ ಉಗ್ರನಿಗೆ 30,000 ಹಣ ನೀಡಿರುವ ಪಾಕಿಸ್ತಾನ ಸೇನೆ ಕರ್ನಲ್

ಶ್ರೀನಗರ, ಆಗಸ್ಟ್ 25: ಕಳೆದ ಎರಡು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಎರಡು ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಿದ್ದ ಭಾರತೀಯ ಸೇನೆ, ನೆಲಬಾಂಬ್ ಸ್ಫೋಟದಲ್ಲಿ ಪಾಕಿಸ್ತಾನಿ ಭಯೋತ್ಪಾದಕನನ್ನು ಸೆರೆಹಿಡಿಯಲಾಗಿದೆ ಮತ್ತು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ.

ಈಗ ಬಂಧಿತನಾಗಿರುವ ಉಗ್ರ ಈ ಹಿಂದೆ ಗಡಿ ನಿಯಂತ್ರಣ ರೇಖೆಯನ್ನು ದಾಟಿದ್ದಕ್ಕಾಗಿ ಬಂಧಿಸಲಾಗಿತ್ತು ಆದರೆ ಮಾನವೀಯತೆ ಆಧಾರದ ಮೇಲೆ ಬಿಡುಗಡೆ ಮಾಡಿ ವಾಪಸ್ ಕಳುಹಿಸಲಾಗಿತ್ತು. ಭಾರತೀಯ ಸೈನ್ಯದ ಮೇಲೆ ದಾಳಿ ಮಾಡಲು ಪಾಕಿಸ್ತಾನದ ಸೇನೆಯ ಕರ್ನಲ್ ಆ ವ್ಯಕ್ತಿಗೆ 30,000 ಪಾಕಿಸ್ತಾನಿ ರೂಪಾಯಿಗಳನ್ನು ನೀಡಿದ್ದರು ಎಂದು ಬಂಧಿತ ವ್ಯಕ್ತಿ ಹೇಳಿದ್ದಾನೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ 21 ರಂದು ಮುಂಜಾನೆ, ನೌಶೇರಾ ಪ್ರದೇಶದ ಜಂಗರ್ ಸೆಕ್ಟರ್‌ನಲ್ಲಿ ನಿಯೋಜಿಸಲಾದ ಸೈನಿಕರು ನಿಯಂತ್ರಣ ರೇಖೆಯ ಬದಿಯಲ್ಲಿ ಎರಡರಿಂದ ಮೂರು ಭಯೋತ್ಪಾದಕರ ಚಲನೆಯನ್ನು ಗುರುತಿಸಿದಾಗ ಸೆರೆಹಿಡಿಯಲಾಯಿತು ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ.

ನುಸುಳುಕೋರರಲ್ಲಿ ಒಬ್ಬ ಭಾರತೀಯ ಪೋಸ್ಟ್‌ಗೆ ಸಮೀಪದಲ್ಲಿದ್ದ ಮತ್ತು ಬೇಲಿಯನ್ನು ಕತ್ತರಿಸಲು ಪ್ರಯತ್ನಿಸುತ್ತಿದ್ದ. ಅವನು ಓಡಿಹೋಗಲು ಪ್ರಯತ್ನಿಸಿದಾಗ, ಸೈನಿಕರು ಗುಂಡು ಹಾರಿಸಿದರು, ಗುಂಡೇಟಿನಿಂದ ಗಾಯಗೊಂಡ ಅವನನ್ನು ಸೆರೆಹಿಡಿಯಲಾಗಿದೆ.

 ಓರ್ವನನ್ನು ಜೀವಂತ ಸೆರೆ ಹಿಡಿದ ಸೇನೆ

ಓರ್ವನನ್ನು ಜೀವಂತ ಸೆರೆ ಹಿಡಿದ ಸೇನೆ

ಇನ್ನಿಬ್ಬರು ನುಸುಳುಕೋರರು ದಟ್ಟ ಕಾಡಿನಲ್ಲಿ ರಕ್ಷಣೆ ಪಡೆದು ಪಾಕಿಸ್ತಾನ ಆಕ್ರಮಿತ ಪ್ರದೇಶಕ್ಕೆ ಮರಳುವಲ್ಲಿ ಯಶಸ್ವಿಯಾದರು. "ಗಾಯಗೊಂಡ ಪಾಕಿಸ್ತಾನಿ ಭಯೋತ್ಪಾದಕನನ್ನು ಜೀವಂತವಾಗಿ ಸೆರೆಹಿಡಿಯಲಾಯಿತು ಮತ್ತು ತಕ್ಷಣದ ವೈದ್ಯಕೀಯ ನೆರವು ಮತ್ತು ಜೀವರಕ್ಷಕ ಶಸ್ತ್ರಚಿಕಿತ್ಸೆ ನಡೆಸಲಾಯಿತು" ಎಂದು ಸೇನೆ ತಿಳಿಸಿದೆ.

ಆತನನ್ನು ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಸಬ್‌ಕೋಟ್ ಗ್ರಾಮದ ನಿವಾಸಿ ತಬಾರಕ್ ಹುಸೇನ್ ಎಂದು ಗುರುತಿಸಲಾಗಿದೆ. ಆತನನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಕರ್ನಲ್ ಯೂನಸ್ ಚೌಧರಿ ಕಳುಹಿಸಿದ್ದಾರೆ ಎಂದು ವಿಚಾರಣೆ ವೇಳೆ ಆತ ಬಹಿರಂಗಪಡಿಸಿದ್ದಾನೆ ಎಂದು ಸೇನೆ ತಿಳಿಸಿದೆ. ಕರ್ನಲ್ ನೀಡಿದ 30,000 ಪಾಕಿಸ್ತಾನಿ ರುಪಾಯಿ ಹಣ ಆತನ ಬಳಿ ಇತ್ತು ಎಂದು ಹೇಳಿದೆ.

 ಈ ಮೊದಲು ಈತನನ್ನು ಬಂಧಿಸಿದ್ದ ಸೇನೆ

ಈ ಮೊದಲು ಈತನನ್ನು ಬಂಧಿಸಿದ್ದ ಸೇನೆ

"ಇದೇ ವ್ಯಕ್ತಿಯನ್ನು ಈ ಹಿಂದೆ 2016 ರಲ್ಲಿ ಅದೇ ಸೆಕ್ಟರ್‌ನಿಂದ ಭಾರತೀಯ ಸೇನೆಯು ಆತನ ಸಹೋದರ ಹರೂನ್ ಅಲಿಯೊಂದಿಗೆ ಸೆರೆಹಿಡಿಯಲಾಗಿತ್ತು ಮತ್ತು 2017 ರ ನವೆಂಬರ್‌ನಲ್ಲಿ ಮಾನವೀಯ ಆಧಾರದ ಮೇಲೆ ಅವನನ್ನು ಮತ್ತೆ ಪಾಕಿಸ್ತಾನಕ್ಕೆ ಕಳುಹಿಸಲಾಯಿತು" ಎಂದು ಸೇನೆಯ ಟಿಪ್ಪಣಿ ಹೇಳಿದೆ.

ವಿಫಲವಾದ ಮತ್ತೊಂದು ಬಿಡ್‌ನಲ್ಲಿ, ಆಗಸ್ಟ್ 22 ರಂದು ರಾತ್ರಿ ಎರಡರಿಂದ ಮೂರು ಭಯೋತ್ಪಾದಕರ ಗುಂಪು" ಅದೇ ಪ್ರದೇಶದ ಲ್ಯಾಮ್ ಸೆಕ್ಟರ್‌ನಲ್ಲಿ ನುಸುಳಲು ಪ್ರಯತ್ನಿಸಿತು. ನಮ್ಮ ಎಚ್ಚರಿಕೆಯ ಪಡೆಗಳು ಭಯೋತ್ಪಾದಕರನ್ನು ಗಮನಿಸಲು ಸಾಧ್ಯವಾಯಿತು ಎಂದು ಸೇನೆ ಹೇಳಿದೆ.

 ನೆಲಬಾಂಬ್‌ ಸ್ಫೋಟದಲ್ಲಿ ಇಬ್ಬರು ಭಯೋತ್ಪಾದಕರು ಸಾವು

ನೆಲಬಾಂಬ್‌ ಸ್ಫೋಟದಲ್ಲಿ ಇಬ್ಬರು ಭಯೋತ್ಪಾದಕರು ಸಾವು

ಅವರು ನಮ್ಮ ಮೈನ್‌ಫೀಲ್ಡ್‌ಗಳಿಗೆ ಮುಂದೆ ಹೋದಂತೆ, ನೆಲಬಾಂಬ್‌ಗಳನ್ನು ಸಕ್ರಿಯಗೊಳಿಸಲಾಯಿತು ಮತ್ತು ಇಬ್ಬರು ಭಯೋತ್ಪಾದಕರು ಸ್ಥಳದಲ್ಲೇ ಸಾವನ್ನಪ್ಪಿದರು ಸೇನೆ ಹೇಳಿದೆ. ಸಾವನ್ನಪ್ಪಿದ ಭಯೋತ್ಪಾದಕರ ಸಹಚರರು ಬಹುಶಃ ಗಾಯಗೊಂಡಿದ್ದಾರೆ ಮತ್ತು ಪ್ರತಿಕೂಲ ಹವಾಮಾನ ಮತ್ತು ದಟ್ಟವಾದ ಎಲೆಗಳ ಲಾಭವನ್ನು ಪಡೆದು ಅವರು ವಾಪಸ್ ಹೋಗಿರಬಹುದು ಎಂದು ಭಾರತೀಯ ಸೇನೆ ಹೇಳಿದೆ.

ಮರುದಿನ ಬೆಳಿಗ್ಗೆ ಶವಗಳನ್ನು ಕ್ವಾಡ್‌ಕಾಪ್ಟರ್ ಬಳಸಿ ಗುರುತಿಸಲಾಯಿತು ಮತ್ತು ನಂತರ ಒಂದು AK-56 ರೈಫಲ್ ಜೊತೆಗೆ ಬುಲೆಟ್‌ಗಳು ಮತ್ತು ಪಡಿತರವನ್ನು ವಶಪಡಿಸಿಕೊಳ್ಳಲಾಯಿತು.

 ಇನ್ನೂ ನಡೆಯುತ್ತಿರುವ ಶೋಧ ಕಾರ್ಯ

ಇನ್ನೂ ನಡೆಯುತ್ತಿರುವ ಶೋಧ ಕಾರ್ಯ

"ಈ ಪ್ರದೇಶದಲ್ಲಿ ಲ್ಯಾಂಡ್‌ಮೈನ್ ಇರುವುದರಿಂದ, ಶೋಧ ಕಾರ್ಯಾಚರಣೆಯನ್ನು ಎಚ್ಚರಿಕೆಯಿಂದ ನಡೆಸಲಾಗುತ್ತಿದೆ ಮತ್ತು ಇನ್ನೂ ಪ್ರಗತಿಯಲ್ಲಿದೆ" ಎಂದು ಸೇನೆಯು ಹೇಳಿದೆ.

ಈ ಮೊದಲು ಹಲವು ಬಾರಿ ಪಾಕಿಸ್ತಾನದ ಉಗ್ರರು ಭಾರತದ ಒಳನುಸುಳಲು ವಿಫಲ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಲವು ಉಗ್ರ ಶಿಬಿರಗಳಿದ್ದು, ತರಬೇತಿ ಪಡೆದಿರುವ ಉಗ್ರರು ದೇಶದೊಳಗೆ ನುಸುಳಲು ಕಾಯುತ್ತಿದ್ದಾರೆ ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ಈ ಮೊದಲು ಸಂದೇಹ ವ್ಯಕ್ತಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+