Get Updates
Get notified of breaking news, exclusive insights, and must-see stories!

ODI World Cup: ಈತ ಪಂದ್ಯಾವಳಿಯ ಶ್ರೇಷ್ಠ ಆಟಗಾರ ಎಂದ ಯುವರಾಜ್ ಸಿಂಗ್

ಏಕದಿನ ವಿಶ್ವಕಪ್ 2023ರ ಅಂತಿಮ ಕದನಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿದೆ. 2 ಬಾರಿ ವಿಶ್ವಕಪ್ ಗೆದ್ದಿರುವ ಭಾರತ ಮತ್ತು ಐದು ಬಾರಿ ಚಾಂಪಿಯನ್‌ಗಳಾಗಿರುವ ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಸೆಣೆಸಲಿದ್ದು, ರೋಚಕ ಪಂದ್ಯವನ್ನು ನಿರೀಕ್ಷೆ ಮಾಡಲಾಗಿದೆ.

ಈ ಬರಿ ವಿಶ್ವಕಪ್‌ನಲ್ಲಿ ಒಂದೂ ಪಂದ್ಯವನ್ನು ಸೋಲದೆ ಫೈನಲ್‌ಗೆ ಪ್ರವೇಶ ಪಡೆದಿರುವ ಭಾರತವೇ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿದೆ. ತವರಿನ ಅಂಗಳದ ಲಾಭ, ಪ್ರೇಕ್ಷಕರು, ಅಭಿಮಾನಿಗಳ ಭಾರಿ ಬೆಂಬಲ ಭಾರತಕ್ಕೆ ಸಿಗಲಿದೆ. ಆದರೂ 5 ಬಾರಿ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಸುಲಭವಾಗಿ ಸೋಲೊಪ್ಪಿಕೊಳ್ಳುವ ತಂಡವಲ್ಲ.

Yuvraj Singh Selects Mohammed Shami as Player of the Tournament

ಇನ್ನು ಹಲವು ಮಾಜಿ ಕ್ರಿಕೆಟಿಗರು, ಕ್ರಿಕೆಟ್ ವಿಶ್ಲೇಷಕರು ಭಾರತವೇ ಕಪ್ ಗೆಲ್ಲುವ ನೆಚ್ಚಿನ ತಂಡ ಎಂದು ಹೇಳಿದ್ದಾರೆ. ಜೊತೆಗೆ ಹಲವರು ಈ ಪಂದ್ಯಾವಳಿಯಲ್ಲಿ ತಮ್ಮ ನೆಚ್ಚಿನ ಆಟಗಾರನ ಹೆಸರನ್ನೂ ಹೇಳಿದ್ದಾರೆ.

ಈ ಬಾರಿ ಭಾರತ ತಂಡದಲ್ಲಿ ಒಬ್ಬರೇ ಅತ್ಯುತ್ತಮ ಆಟಗಾರ ಎಂದು ಹೇಳುವುದು ಕಷ್ಟ. ಎಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ತಂಡವಾಗಿ ಭಾರತ ಉತ್ತಮ ಆಟ ಪ್ರದರ್ಶನ ನೀಡಿರುವುದೇ ಸತತವಾಗಿ 10 ಪಂದ್ಯಗಳನ್ನು ಗೆಲ್ಲಲು ಕಾರಣವಾಗಿದೆ.

ವಿರಾಟ್ ಕೊಹ್ಲಿ ಪ್ರಸ್ತುತ ವಿಶ್ವಕಪ್‌ನಲ್ಲಿ 711 ರನ್ ಗಳಿಸಿ ಮಿಂಚಿದ್ದರೆ, ಏಕದಿನ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಇದುವರೆಗೂ ಯಾವೊಬ್ಬ ಆಟಗಾರ ಕೂಡ 700 ರನ್‌ ಗಳಿಸಿರಲಿಲ್ಲ ವಿರಾಟ್ ಆ ಸಾಧನೆ ಮಾಡಿದ ಮೊದಲ ಆಟಗಾರ.ಇದರಲ್ಲಿ ಮೂರು ಶತಕ ಮತ್ತು ಐದು ಅರ್ಧಶತಕಗಳು ಸೇರಿವೆ. ರೋಹಿತ್ ಶರ್ಮಾ 550 ರನ್ ಗಳಿಸಿದ್ದು, 124.15 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಭಾರತ ತಂಡದ ಇನ್ನಿಂಗ್ಸ್‌ಗೆ ಉತ್ತಮ ಆರಂಭ ಒದಗಿಸಿಕೊಟ್ಟಿರುವುದು ರೋಹಿತ್ ಶರ್ಮಾ.

ಶಮಿ ಶ್ರೇಷ್ಠ ಆಟಗಾರ ಎಂದ ಯುವಿ

2011 ರ ವಿಶ್ವಕಪ್ ವಿಜೇತ ಭಾರತ ತಂಡದ ಆಲ್‌ರೌಂಡರ್ ಯುವರಾಜ್ ಸಿಂಗ್ ಪ್ರಕಾರ ಈ ಬಾರಿ ವಿಶ್ವಕಪ್‌ನ ಪಂದ್ಯಾವಳಿಯ ಶ್ರೇಷ್ಠ ಆಟಗಾರ ಮೊಹಮ್ಮದ್ ಶಮಿ. ಕೇವಲ 6 ಪಂದ್ಯಗಳನ್ನು ಆಡಿರುವ ಶಮಿ ಬರೋಬ್ಬರಿ 23 ವಿಕೆಟ್ ಪಡೆದಿದ್ದಾರೆ. ವಿಶ್ವಕಪ್‌ನಲ್ಲಿ ಮೂರು ಪಂದ್ಯಗಳಲ್ಲಿ 5 ವಿಕೆಟ್ ಪಡೆದ ಮೊದಲ ಬೌಲರ್ ಆಗಿದ್ದಾರೆ.

"ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದು ತಂಡಕ್ಕೆ ಒಳ್ಳೆಯದಾಯಿತು ಎಂದು ಹೇಳಲಾರೆ, ಎಲ್ಲರೂ ಶಮಿ ಆಟವನ್ನು ನೋಡಲು ಕಾಯುತ್ತಿದ್ದರು, ಶಮಿ ಸಿಕ್ಕ ಅವಕಾಶವನ್ನು ಬಳಸಿಕೊಂಡರು. ಅವರದ್ದು ಅದ್ಭುತ ಬೌಲಿಂಗ್, ಈ ಬಾರಿ ಪಂದ್ಯಾವಳಿ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಆತ ಅರ್ಹನಾಗಿದ್ದಾನೆ" ಎಂದು ಹೇಳಿದ್ದಾರೆ.

2003 ರಲ್ಲಿ ರಾಹುಲ್ ದ್ರಾವಿಡ್ ಪ್ರಶಸ್ತಿ ಗೆಲ್ಲುವ ಸನಿಹ ಬಂದಿದ್ದರು, ರೋಹಿತ್ ಶರ್ಮಾ 2011ರಲ್ಲಿ ತಂಡಕ್ಕೆ ಆಯ್ಕೆಯಾಗಲಿಲ್ಲ, ನಂತರ ಎರಡು ಬಾರಿ ಸೆಮಿಫೈನಲ್‌ನಲ್ಲಿ ಭಾರತ ಸೋತಿತ್ತು, ಈಗ ಇವರಿಬ್ಬರಿಗೂ ಪ್ರಶಸ್ತಿ ಗೆಲ್ಲಲು ಉತ್ತಮ ಅವಕಾಶ ಸಿಕ್ಕಿದೆ ಎಂದಿದ್ದಾರೆ.

ಏಷ್ಯಾಕಪ್‌ಗೆ ಮೊದಲು ಭಾರತ ತಂಡ ವಿಶ್ವಕಪ್‌ ಗೆಲ್ಲುತ್ತೆ ಎನ್ನುವ ನಂಬಿಕೆ ಇರಲಿಲ್ಲ, ತಂಡದ ಕಾಂಬಿನೇಷನ್ ಏನು ಎನ್ನುವುದೇ ಪ್ರಶ್ನೆಯಾಗಿತ್ತು. ಕೆಎಲ್ ರಾಹುಲ್, ಅಯ್ಯರ್, ಬುಮ್ರಾ ಮರಳಿದ ನಂತರ ತಂಡ ಬಲಿಷ್ಠವಾಗಿದೆ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+