ರೆಫ್ರಿ ಮೇಲೆ ಹಲ್ಲೆ; ಕುಸ್ತಿಪಟು ಸತೇಂದರ್ ಮಲಿಕ್ಗೆ ಅಜೀವ ನಿಷೇಧ
ನವದೆಹಲಿ, ಮೇ 19; ಕಾಮನ್ವೆಲ್ತ್ ಗೇಮ್ಸ್ ಟ್ರೈಯಲ್ಸ್ ಫೈನಲ್ನಲ್ಲಿ ಸೋಲುಕಂಡ ಕುಸ್ತಿಪಟು ಸತೇಂದರ್ ಮಲಿಕ್ ರೆಫರಿ ಜಗಬೀರ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಮಗಳವಾರ ನಡೆದಿದೆ.
ನವದೆಹಲಿಯ ಕೆಡಿ ಜಾಧವ್ ಸ್ಟೇಡಿಯಂನಲ್ಲಿ ನಡೆದ 125 ಕೆಜಿ ವಿಭಾಗದ ಫೈನಲ್ ಬೌಟ್ನಲ್ಲಿ ಸತೇಂದರ್ ಮತ್ತು ಏರ್ಫೋರ್ಸ್ನ ಮೋಹಿತ್ ನಡುವ ಹಣಾಹಣಿ ನಡೆದಿತ್ತು. ಬೌಟ್ ಕೊನೆಗೊಳ್ಳಲು 18 ಸೆಕೆಂಡ್ಗಳಿದ್ದಾಗ ಸತೇಂದರ್ 3-0ಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು.
ಈ ಸಂದರ್ಧದಲ್ಲಿ ಟೇಕ್ಡೌನ್ ನಡೆ ಪ್ರಯೋಗಿಸಿದ ಎದುರಾಳಿ ಮೋಹಿತ್ ಸತೇಂದರ್ರನ್ನು ಮ್ಯಾಟ್ನಿಂದ ಹೊರದೂಡಿದರು. ಆದರೆ ರೆಫರಿ ವಿರೇಂದರ್ ಮಲಿಕ್ ಟೇಕ್ಡೌನ್ಗೆ ಎರಡು ಪಾಯಿಂಟ್ ನೀಡದೇ, ಹೊರದೂಡಿದ್ದಕ್ಕೆ ಕೇವಲ ಒಂದು ಪಾಯಿಂಟ್ ನೀಡಿದರು. ಈ ನಿರ್ಧಾರ ಅಸಮಾಧಾನಗೊಂಡ ಮೋಹಿತ್ ಉಳಿದ ಎರಡು ಪಾಯಿಂಟ್ಗಾಗಿ ಮೇಲ್ಮನವಿ ಸಲ್ಲಿಸಿದರು.
I was in charge of the mat & when the game had come under suspicious circumstances the main judge asked me to watch the video & give a decision on the basis of that. After I announced the decision, the wrestler (Satender Malik) started to fight & attacked me: Referee Jagbir Singh pic.twitter.com/l2XhB2zWoH
— ANI (@ANI) May 17, 2022
ಬೌಟ್ನ ಜ್ಯೂರಿ ಆಗಿದ್ದ ಸತ್ಯದೇವ್ ಮಲಿಕ್, ರೆಫರಿಯ ನಿರ್ಧಾರಕ್ಕೆ ಕ್ಷಮೆ ಕೋರಿ ಸೀನಿಯರ್ ರೆಫರಿ ಆಗಿದ್ದ ಜಗಬೀರ್ ಸಿಂಗ್ ಮೋಹಿತ್ ಮನವಿಯನ್ನು ಪರಿಗಣಿಸಿ ಟಿವಿ ರಿವ್ಯೂವ್ಗೆ ಸೂಚಿಸಿದರು. ಟಿವಿ ರಿಪ್ಲೇ ನೋಡಿದ ಬಳಿಕ ಜಗಬೀರ್, ಮೋಹಿತ್ಗೆ ಮೂರು ಪಾಯಿಂಟ್ಸ್ ನೀಡಿದ್ದಾರೆ.
ನಂತರ ಪಂದ್ಯ 3-3ರಲ್ಲಿ ಸಮಬಲದಲ್ಲೇ ಕೊನೆಯಾಯಿತು. ಆದರೆ ನಿಯಮದಂತೆ ಬೌಟ್ನ ಕೊನೆಯ ಪಾಯಿಂಟ್ ಗಳಿಸಿದ್ದ ಮೋಹಿತ್ ಅವರನ್ನು ಜಯಶಾಲಿ ಎಂದು ಪ್ರಕಟಿಸಲಾಯಿತು. ಇದರಿಂದ ಸಂಯಮ ಕಳೆದುಕೊಂಡ ಸತೇಂದರ್ ಮಲಿಕ್, ರವಿ ದಹಿಯಾ ಮತ್ತು ಅಮನ್ ನಡುವೆ ಇನ್ನೊಂದು ಮ್ಯಾಟ್ನಲ್ಲಿ ಬೌಟ್ ನಡೆಯುತ್ತಿದ್ದ ಜಾಗಕ್ಕೆ ತೆರಳಿ ಅಲ್ಲಿದ್ದ ಸೀನಿಯರ್ ರೆಫರಿ ಜಗಬೀರ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ.

ಮೊದಲು ಜಗಬೀರ್ರನ್ನು ನಿಂದಿಸಿದ ಸತೇಂದರ್, ನಂತರ ಕಪಾಲಕ್ಕೆ ಹೊಡೆದರು. ತಕ್ಷಣವೇ ರೆಫರಿ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಕುಸ್ತಿ ವೀಕ್ಷಣೆಗೆ ಬಂದಿದ್ದ ನೂರಾರು ಅಭಿಮಾನಿಗಳು, ಸ್ಪರ್ಧೆಗಳು ಹಾಗೂ ಪಂದ್ಯದ ಅಧಿಕಾರಿಗಳು ಈ ಅಚಾನಕ್ ಘಟನೆ ನೋಡಿ ಒಂದು ಕ್ಷಣ ಆಘಾತಕ್ಕೆ ಒಳಗಾಗದರು. ತಕ್ಷಣ 57 ಕೆಜಿ ವಿಭಾಗದ ಫೈನಲ್ ಬೌಟ್ಅನ್ನು ಸ್ಥಗಿತಗೊಳಿಸಲಾಯಿತು. ಬಳಿಕ ಸತೇಂದರ್ ಅವರನ್ನು ಹೊರಗೆ ಕಳುಹಿಸಿ ಬೌಟ್ ಪುನರಾರಂಭಿಸಲಾಯಿತು.
Recommended Video
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications