ಬೆಂಗಳೂರು ತಂಡ ಆರ್ಸಿಬಿ ಅಬ್ಬರ, 7 ನಿಮಿಷ ಇಂಟರ್ನೆಟ್ ಉಡೀಸ್... Virat Kohli
ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ ಭರ್ಜರಿಯಾಗಿ ಗೆದ್ದು ಬೀಗಿದೆ, ಬೆಂಗಳೂರು ತಂಡ ಕಪ್ ಗೆದ್ದಿಲ್ಲ ಅಂತಾ ಹೇಳುತ್ತಿದ್ದ ಅಂಕಲ್ ಮಕ್ಕಳು ಇದೀಗ ಊರು ಬಿಟ್ಟು ಹೋಗಿದ್ದಾರೆ... ಅಂತಾ ಬೆಂಗಳೂರು ತಂಡ ಆರ್ಸಿಬಿ ಅಭಿಮಾನಿಗಳು ಆರೋಪ ಮಾಡ್ತಿದ್ದಾರೆ. ಆರ್ಸಿಬಿ ಗೆದ್ದ ನಂತರ ಹೊಸ ಇತಿಹಾಸ ನಿರ್ಮಾಣ ಆಗಿದೆ. ಹೀಗಿದ್ದಾಗಲೇ, ಬೆಂಗಳೂರು ತಂಡ ಆರ್ಸಿಬಿ ಅಬ್ಬರ, 7 ನಿಮಿಷ ಇಂಟರ್ನೆಟ್ ಉಡೀಸ್...
ಅಂದಹಾಗೆ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಬೆಂಗಳೂರು ತಂಡ ಆರ್ಸಿಬಿ ಗೆದ್ದು ಬೀಗಿದ ನಂತರ ಭರ್ಜರಿಯಾಗಿ ಜಗತ್ತಿನಾದ್ಯಂತ ಸೆಲೆಬ್ರೇಷನ್ ಮಾಡಲಾಗಿದೆ. ಇದೇ ಸಮಯದಲ್ಲಿ ಆರ್ಸಿಬಿ ಕಪ್ನ ಗೆಲ್ಲೋದು ಗ್ಯಾರಂಟಿ ಆಗುತ್ತಿದ್ದಂತೆ, ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಈಗ ಎಲ್ಲೆಲ್ಲೂ ವೈರಲ್ ಆಗುತ್ತಿದ್ದು, ವಿರಾಟ್ ಕೊಹ್ಲಿ ಕಣ್ಣೀರು ಹಾಕಿರುವ ಬಗ್ಗೆ ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ. ಅಲ್ಲದೆ ಆರ್ಸಿಬಿ ಅಭಿಮಾನಿಗಳು ಕೂಡ ಕೊಹ್ಲಿ ಕಣ್ಣೀರು ಹಾಕಿದ್ದನ್ನು ನೋಡಿ ತಾವು ಕೂಡ ಕಣ್ಣೀರು ಹಾಕಿದ್ದಾರೆ. ಈ ಮೂಲಕ ಆರ್ಸಿಬಿ ತಂಡದ ಬಗ್ಗೆ ಮಾತನಾಡುತ್ತಿದ್ದ ಶತ್ರುಗಳ ಅಹಂಕಾರ ಉಡೀಸ್ ಆಗಿದೆ. ಇದೇ ಸಮಯದಲ್ಲಿ ಇಂಟರ್ನೆಟ್ ಕೂಡ 7 ನಿಮಿಷ ಅಲ್ಲಾಡಿ ಹೋಗಿತ್ತು...

2025 ಐಪಿಎಲ್ ಅಖಾಡದಲ್ಲಿ ಅದ್ಭುತ ಪ್ರದರ್ಶನ...
ಕನ್ನಡಿಗರ ಬೆಂಗಳೂರು ತಂಡ ಆರ್ಸಿಬಿ ಆಟಗಾರರಿಗೆ ವಿಜಯ್ ಮಲ್ಯ ಭರ್ಜರಿಯಾಗಿ ಈಗ ಶುಭಾಶಯ ಕೋರಿದ್ದು, ಟ್ವೀಟ್ ಮೂಲಕ ಭಾರಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. '18 ವರ್ಷಗಳ ನಂತರ ಆರ್ಸಿಬಿ ಐಪಿಎಲ್ ಚಾಂಪಿಯನ್ ಆಗಿದೆ. 2025 ಐಪಿಎಲ್ ಅಖಾಡದಲ್ಲಿ ಅದ್ಭುತ ಪ್ರದರ್ಶನ. ಅತ್ಯುತ್ತಮ ಕೋಚ್ ಮತ್ತು ಸಹಾಯಕ ಸಿಬ್ಬಂದಿ ಜೊತೆ ಉತ್ತಮ ಸಮತೋಲನ ಹೊಂದಿರುವ ತಂಡವಾಗಿದೆ. ಕಪ್ ಗೆದ್ದಿರುವ ಆರ್ಸಿಬಿ ತಂಡಕ್ಕೆ ಅಭಿನಂದನೆ! ಈ ಸಲ ಕಪ್ ನಮ್ದೆ!!' ಅಂತಾ ಇದೀಗ ಟ್ವೀಟ್ ಮಾಡಿದ್ದಾರೆ ಆರ್ಸಿಬಿ ತಂಡದ ಮಾಜಿ ಮಾಲೀಕ ಮತ್ತು ಉದ್ಯಮಿ ವಿಜಯ್ ಮಲ್ಯ.












Click it and Unblock the Notifications