Get Updates
Get notified of breaking news, exclusive insights, and must-see stories!

ವಿರಾಟ್ ಕೊಹ್ಲಿ ದಿಢೀರ್ ನಿವೃತ್ತಿ ಘೋಷಣೆ ವಾಪಸ್ ಪಡೆದು ಟೆಸ್ಟ್ ಕ್ರಿಕೆಟ್ ಆಡಲು ಬರುವಂತೆ... Virat Kohli

ನಮ್ಮ ಬೆಂಗಳೂರು ದತ್ತು ಪುತ್ರ... ಕ್ರಿಕೆಟ್ ಲೋಕದ ರಿಯಲ್ ಕಿಂಗ್, ವಿರಾಟ್ ಕೊಹ್ಲಿ ಅವರಿಗೆ ಶತಕೋಟಿ ಅಭಿಮಾನಿಗಳು ಇದ್ದಾರೆ... ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ವಿರಾಟ್ ಕೊಹ್ಲಿ ಅವರಿಗೆ ಭಾರಿ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳು ಇದ್ದು, ವಿರಾಟ್ ಕೊಹ್ಲಿ ಅಂದ್ರೆ ಪ್ರಾಣ ಬೇಕಾದರೂ ಬಿಡುವಷ್ಟು ಅಭಿಮಾನ ಕೋಟಿ ಕೋಟಿ ಫ್ಯಾನ್ಸ್ ಎದೆಯಲ್ಲಿ ತುಂಬಿಕೊಂಡಿದೆ.. ಹೀಗೆ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಹೊಗಳುತ್ತಾರೆ. ಈ ರೀತಿ ಕನ್ನಡ ನಾಡಿನ ದತ್ತು ಪುತ್ರ ಆದ ವಿರಾಟ್ ಕೊಹ್ಲಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ಹೀಗಿದ್ದಾಗಲೇ, ವಿರಾಟ್ ಕೊಹ್ಲಿ ದಿಢೀರ್ ನಿವೃತ್ತಿ ಘೋಷಣೆ ವಾಪಸ್ ಪಡೆದು ಟೆಸ್ಟ್ ಕ್ರಿಕೆಟ್ ಆಡಲು ಬರುವಂತೆ...

ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಪರವಾಗಿ ಕಳೆದ 18 ವರ್ಷಗಳಿಂದ ನಿರಂತರವಾಗಿ ತಮ್ಮ ತನು & ಮನ & ಧನ ಅರ್ಪಿಸಿ ಆಟ ಆಡುತ್ತಿರುವ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಅವರು, 2025 ಐಪಿಎಲ್ ಕಪ್ ಬೆಂಗಳೂರು ತಂಡ ಆರ್‌ಸಿಬಿ ಗೆಲ್ಲುವಂತೆ ಮಾಡಲು ಸಾಕಷ್ಟು ಶ್ರಮ ವಹಿಸಿದ್ದರು. ಹೀಗಾಗಿ ಮತ್ತೆ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ ವಿರಾಟ್ ಕೊಹ್ಲಿ. ಇಂತಹ ಸಮಯದಲ್ಲೇ ಟಿ20 & ಟೆಸ್ಟ್ ಕ್ರಿಕೆಟ್ ಬಿಟ್ಟು ದಿಢೀರ್ ನಿವೃತ್ತಿ ಘೋಷಣೆ ಮಾಡಿ ಆತಂಕ ಹುಟ್ಟಿಸಿದ್ದರು ವಿರಾಟ್ ಕೊಹ್ಲಿ...

Virat Kohli Fans Are Requesting This And Fans Discussion Become Trend Now

ವಿರಾಟ್ ಕೊಹ್ಲಿ ದಿಢೀರ್ ನಿವೃತ್ತಿ ಘೋಷಣೆ ವಾಪಸ್...

ಹೌದು, ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದಿಂದಲೇ ದಿಢೀರ್ ನಿವೃತ್ತಿ ಘೋಷಣೆ ಮಾಡಲು ಗೌತಮ್ ಗಂಭೀರ್ ಕಾರಣ ಅನ್ನೋ ಗಂಭೀರ ಆರೋಪ ಕೂಡ ಕೇಳಿ ಬಂದಿತ್ತು. ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ಇಬ್ಬರೂ ಲೆಜೆಂಡ್ ಆಟಗಾರರನ್ನು ದಿಢೀರ್ ಟಾರ್ಗೆಟ್ ಮಾಡಿ ಭಾರತ ಕ್ರಿಕೆಟ್ ತಂಡದಿಂದಲೇ ಹೊರಗಡೆ ಹಾಕಲಾಗಿದೆ, ಎಂಬ ಆರೋಪ ಕೇಳಿಬಂದ ನಂತರ ಅಭಿಮಾನಿಗಳು ಕೂಡ ರೊಚ್ಚಿಗೆದ್ದಿದ್ದರು. ಹೀಗಿದ್ದಾಗಲೇ, ವಿರಾಟ್ ಕೊಹ್ಲಿ ದಿಢೀರ್ ನಿವೃತ್ತಿ ಘೋಷಣೆ ವಾಪಸ್ ಪಡೆದು ಟೆಸ್ಟ್ ಕ್ರಿಕೆಟ್ ಆಡಲು ಬರುವಂತೆ...

408 ರನ್‌ ಸೋಲು, ಅಭಿಮಾನಿಗಳ ಕಣ್ಣೀರು...

ಭಾರತ ಕ್ರಿಕೆಟ್ ತಂಡದಿಂದ ವಿರಾಟ್ ಕೊಹ್ಲಿ ಅವರನ್ನ ಹೊರಗೆ ಹಾಕಲು ಕುತಂತ್ರ ಮಾಡಿದ್ದು ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮಾ ಅವರು ಭಾರತ ಕ್ರಿಕೆಟ್ ತಂಡ ಬಿಟ್ಟಿದ್ದು ಕೂಡ ಇದೇ ಗೌತಮ್ ಗಂಭೀರ್ ಕಾರಣಕ್ಕೆ ಎಂಬ ಆರೋಪವನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ಈ ನಡುವೆ ದಕ್ಷಿಣ ಆಫ್ರಿಕಾ ವಿರುದ್ಧ ಬೃಹತ್ 408 ರನ್‌ಗಳಿಂದ ಸೋಲು ಕಂಡಿರುವ ಭಾರತ ಕ್ರಿಕೆಟ್ ತಂಡದ ಭೀಕರ ಸೋಲು, ಕೋಟಿ ಕೋಟಿ ಅಭಿಮಾನಿಗಳ ಕಣ್ಣಲ್ಲಿ ರಕ್ತ ಸುರಿಯುವಂತೆ ಮಾಡಿದೆ. ಇದೇ ಸಮಯದಲ್ಲಿ ಕೋಚ್ ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡ ಬಿಟ್ಟು ಹೋಗಲಿ ಅಂತಾ ದಿಢೀರ್ ಭಾರಿ ದೊಡ್ಡ ಅಭಿಯಾನವೇ ಶುರುವಾಗಿ ಹೋಗಿದೆ. ಇದರ ಜೊತೆಯಲ್ಲೇ ವಿರಾಟ್ ಕೊಹ್ಲಿ ದಿಢೀರ್ ನಿವೃತ್ತಿ ಘೋಷಣೆ ವಾಪಸ್ ಪಡೆದು, ಟೆಸ್ಟ್ ಕ್ರಿಕೆಟ್ ಆಡಲು ಬರುವಂತೆ ಕೋಟಿ ಕೋಟಿ ಅಭಿಮಾನಿಗಳು ಪ್ರೀತಿಯಿಂದ ಭಾವುಕರಾಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಇದೀಗ ಆಗ್ರಹ ಮಾಡುತ್ತಿದ್ದಾರೆ...

ಕೋಚ್ ಗೌತಮ್ ಗಂಭೀರ್ ರಾಜೀನಾಮೆ?

ವಿರಾಟ್ ಕೊಹ್ಲಿ ಅವರು ದಿಢೀರ್ ಟಿ20 ಹಾಗೂ ಟೆಸ್ಟ್ ಕ್ರಿಕೆಟ್ ಬಿಟ್ಟು ಹೋಗಲು ಕಾರಣ ಕೋಚ್ ಗೌತಮ್ ಗಂಭೀರ್ ಅವರೇ ಕಾರಣ ಅಂತಾ ವಿರಾಟ್ ಕೊಹ್ಲಿ ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್ ಲೋಕ ನಲುಗಿ ಹೋಗಿದ್ದು, ಸಾಲು ಸಾಲು ಹೀನಾಯ ಸೋಲಿನ ಪರಿಣಾಮ ಜಾಗತಿಕ ಮಟ್ಟದಲ್ಲಿ ಭಾರತ ಕ್ರಿಕೆಟ್ ತಂಡದ ಘನತೆಗೆ ಧಕ್ಕೆ ಉಂಟಾಗಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಅದರಲ್ಲೂ, ದಕ್ಷಿಣ ಆಫ್ರಿಕಾ ವಿರುದ್ಧ ಬರೋಬ್ಬರಿ 408 ರನ್‌ಗಳಿಂದ ಸೋಲು ಕಂಡಿರುವ ಭಾರತ ಕ್ರಿಕೆಟ್ ತಂಡದ ಆಟಗಾರರು ಮಾನಸಿಕವಾಗಿ ಕುಸಿದು ಬಿದ್ದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಕ್ರಿಕೆಟ್ ತಂಡದ ಕೋಚ್ ಗೌತಮ್ ಗಂಭೀರ್ ವಿರುದ್ಧ ಆಕ್ರೋಶ ಬೆಂಕಿ ಕೂಡ ಹೊತ್ತಿಕೊಂಡಿದೆ. ಅಲ್ಲದೆ ಕೋಚ್ ಗೌತಮ್ ಗಂಭೀರ್ ರಾಜೀನಾಮೆ ಕೊಡಬೇಕು ಎಂಬ ಆಗ್ರಹ ಕೂಡ ವಿರಾಟ್ ಕೊಹ್ಲಿ ಅವರ ಕೋಟಿ ಕೋಟಿ ಅಭಿಮಾನಿಗಳ ಕಡೆಯಿಂದ ಕೇಳಿ ಬಂದಿದೆ....

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+