ವೆಸ್ಟ್ ಇಂಡೀಸ್ ಪ್ರವಾಸ ಟೀಂ ಇಂಡಿಯಾ ಪ್ರಕಟ, ಧವನ್ ನಾಯಕ
ಮುಂಬೈ, ಜುಲೈ 6: ಟಿ20 ವಿಶ್ವಕಪ್ಗೆ ಕೇವಲ ಮೂರು ತಿಂಗಳಷ್ಟೇ ಬಾಕಿಯಿದ್ದು, ಸಶಕ್ತ ಟಿ20 ತಂಡ ಕಟ್ಟುವತ್ತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಯೋಜನೆ ಹಾಕಿಕೊಂಡಿದೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಇಂದು ಟೀಂ ಇಂಡಿಯಾ ಪ್ರಕಟಿಸಲಾಗಿದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಹಾರ್ದಿ ಪಾಂಡ್ಯ ನಾಯಕತ್ವದಲ್ಲಿ ಐರ್ಲೆಂಡ್ ಸರಣಿ ಗೆದ್ದ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಸದ್ಯ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಟಿ20ಐ ಸರಣಿ ಜುಲೈ 7ರಿಂದ ಆರಂಭವಾಗಲಿದೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರಿಷಬ್ ಪಂತ್, ಜಸ್ ಪ್ರೀತ್ ಬೂಮ್ರಾ ಮೊದಲ ಟಿ20ಐ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಉಳಿದೆರಡು ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಅವರು ಮೆಕ್ಕಾಗೆ ಹಜ್ ಯಾತ್ರೆ ಮಾಡಲು ಇಸಿಬಿ ಅನುಮತಿ ನೀಡಿದ ನಂತರ ಏಕದಿನ ಸರಣಿಯಲ್ಲಿ ಭಾಗಿಯಾಗುವುದಿಲ್ಲ.
ಕೋವಿಡ್ನಿಂದ ಗುಣಮುಖ, ನೆಟ್ ಪ್ರಾಕ್ಟೀಸ್ ಆರಂಭಿಸಿದ ರೋಹಿತ್ ಶರ್ಮಾ
ವೆಸ್ಟ್ ಇಂಡೀಸ್ ಪ್ರವಾಸದ ಟಿ20ಐ ಹಾಗೂ ಏಕದಿನ ಸರಣಿಯಿಂದ ಆಟಗಾರರಿಗೆ ವಿಶ್ರಾಂತಿ ನೀಡಲು ಆಯ್ಕೆಗಾರರು ನಿರ್ಧರಿಸಿದ್ದಾರೆ. ಆದರೆ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಆಟಗಾರರಿಗೆ ಏಕದಿನ ಸರಣಿಯಲ್ಲಿ ಅವಕಾಶ ಸಿಕ್ಕಿದೆ.
ರಾಹುಲ್
ದ್ರಾವಿಡ್
ಮತ್ತೊಮ್ಮೆ
ಹೊಸ
ನಾಯಕನೊಂದಿಗೆ
ತಂಡವನ್ನು
ಮುಂದಕ್ಕೆ
ಕೊಂಡೊಯ್ಯಬೇಕಾಗಿದೆ.
ನಾಯಕ
ರೋಹಿತ್
ಶರ್ಮಾ
ಮತ್ತು
ವಿರಾಟ್
ಕೊಹ್ಲಿ
ಸೇರಿದಂತೆ
ಇತರ
ಹಿರಿಯ
ಆಟಗಾರರೊಂದಿಗೆ
ಮಾತನಾಡಿದ
ನಂತರ,
ಏಕದಿನ
ಸರಣಿಯಿಂದ
ಹಿರಿಯ
ಆಟಗಾರರಿಗೆ
ವಿಶ್ರಾಂತಿ
ನೀಡಲು
ಆಯ್ಕೆಗಾರರು
ನಿರ್ಧರಿಸಿದ್ದಾರೆ.
ಶಿಖರ್
ಧವನ್
ವೆಸ್ಟ್
ಇಂಡೀಸ್
ಪ್ರವಾಸದಲ್ಲಿ
ಯುವ
ತಂಡವನ್ನು
ಮುನ್ನಡೆಸಲಿದ್ದಾರೆ.
ರವೀಂದ್ರ
ಜಡೇಜಾ
ಅವರನ್ನು
ಉಪನಾಯಕರನ್ನಾಗಿ
ನೇಮಿಸಲಾಗಿದೆ.
ಭಾರತ
ವಿರುದ್ಧ
ವೆಸ್ಟ್
ಇಂಡೀಸ್
ಟಿ20
ಸರಣಿಗೆ
ಕೆಎಲ್
ರಾಹುಲ್,
ಜಸ್ಪ್ರೀತ್
ಬುಮ್ರಾ,
ಮೊಹಮ್ಮದ್
ಶಮಿ,
ವಿರಾಟ್
ಕೊಹ್ಲಿ
ಮತ್ತು
ರಿಷಬ್
ಪಂತ್
(3ನೇ
ಟಿ20)
ವಿಶ್ರಾಂತಿ
ಪಡೆಯಲಿದ್ದಾರೆ.
3 ಏಕದಿನ ಪಂದ್ಯಗಳಿಗೆ ಭಾರತ ತಂಡ: ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (WK), ಸಂಜು ಸ್ಯಾಮ್ಸನ್ (WK), ರವೀಂದ್ರ ಜಡೇಜಾ (ಉಪನಾಯಕ), ಶಾರ್ದೂಲ್ ಠಾಕೂರ್ ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಜುಲೈ 22ರಂದು ನಡೆಯಲಿದ್ದು, ಜುಲೈ 24 ಹಾಗೂ ಜುಲೈ 27ರಂದು ಉಳಿದೆರಡು ಪಂದ್ಯ ನಿಗದಿಯಾಗಿದೆ. ಜುಲೈ 29ರಿಂದ 5 ಪಂದ್ಯಗಳ ಟಿ20ಐ ಸರಣಿ ಆರಂಭವಾಗಲಿದೆ.