Sunil Chhetri: 19 ವರ್ಷಗಳ ಸುದೀರ್ಘ ಫುಟ್ಬಾಲ್ ಪ್ರಯಾಣ ಅಂತ್ಯ; ಸುನಿಲ್ ಚೆಟ್ರಿಗೆ ಕಣ್ಣೀರಿನ ವಿದಾಯ
ಭಾರತದ ಖ್ಯಾತ ಫುಟ್ಬಾಲ್ ತಾರೆ, ದಿಗ್ಗಜ ಆಟಗಾರ ಸುನಿಲ್ ಚೆಟ್ರಿ ತಮ್ಮ 19 ವರ್ಷಗಳ ಫುಟ್ಬಾಲ್ ಪ್ರಯಾಣವನ್ನು ಅಂತ್ಯಗೊಳಸಿದ್ದಾರೆ. ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಕುವೈತ್ ವಿರುದ್ಧ ಆಡಿದ ಅವರು, ಅಪಾರ ಜನಸ್ತೋಮದ ಬೆಂಬಲದೊಂದಿಗೆ ಬೀಳ್ಕೊಡುಗೆ ಪಡೆದುಕೊಂಡರು.
ಕೋಲ್ಕತಾದ ಸಾಲ್ಟ್ಲೇಕ್ ಮೈದಾನದಲ್ಲಿ 2026ರ ಫಿಫಾ ಫುಟ್ಬಾಲ್ ವಿಶ್ವಕಪ್ನ 2ನೇ ಸುತ್ತಿನ ಕುವೈತ್ ವಿರುದ್ಧ ಅರ್ಹತಾ ಪಂದ್ಯದಲ್ಲಿ ಗೋಲಿಲ್ಲದೆ ಡ್ರಾನಲ್ಲಿ ಅಂತ್ಯಗೊಂಡಿತು. ಗೆಲುವಿನ ಮೂಲಕ ಸುನಿಲ್ ಚೆಟ್ರಿ ಅವರಿಗೆ ಬೀಳ್ಕೊಡುಗೆ ನೀಡುವ ಭಾರತ ಫುಟ್ಬಾಲ್ ತಂಡದ ಆಸೆ ನೆರವೇರಲಿಲ್ಲ. ಆದರೂ ಸೋಲಿನ ಕಹಿ ಇಲ್ಲದೆ ಅವರು ನಿರ್ಗಮಿಸಿದರು.

ಆಟದ ನಂತರ, ಕೈ ಮುಗಿದು, ಕಣ್ಣುಗಳಲ್ಲಿ ಕಣ್ಣೀರು ಸುರಿಸುತ್ತಾ ನಿರ್ಗಮಿಸುವ ನಾಯಕ ವಿದಾಯ ಹೇಳಲು ಇಡೀ ಮೈದಾನವನ್ನು ಸುತ್ತಿ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ಇಡೀ ಸ್ಟೇಡಿಯಂ ಅವರ ನಾಮಸ್ಮರಣೆಯಲ್ಲಿ ಮಿಂದೆದ್ದಿತು.
ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು
ಉಕ್ಕಿ ಹರಿಯುತ್ತಿದ್ದ ಭಾವನೆಗಳು ಮತ್ತು ಕಣ್ಣೀರಿನಿಂದ ಮುಖವನ್ನು ಮರೆಸಿಕೊಂಡಿದ್ದ ಚೆಟ್ರಿಗೆ ಅಮರಿಂದರ್ ಸಿಂಗ್ ಅಪ್ಪುಗೆ ನೀಡಿದರು. ಬಳಿಕ ತಂಡದ ಆಟಗಾರರಿಂದ ಗಾರ್ಡ್ ಆಫ್ ಹಾನರ್ ಗೌರವ ಪಡೆದರು.
59 ಸಾವಿರ ಅಭಿಮಾನಿಗಳು ಭಾರತ ಫುಟ್ಬಾಲ್ ದಂತಕತೆಯ ಕೊನೆಯ ಪಂದ್ಯವನ್ನು ನೋಡಲು ಹಾಜರಿದ್ದರು. ಭಾರತ ಫುಟ್ಬಾಲ್ ಅಭಿಮಾನಿಗಳ ಆರಾಧ್ಯ ದೈವ ಸುನಿಲ್ ಚೆಟ್ರಿ ಅವರಿಗೆ ಅಭಿಮಾನಿಗಳು ಭಾವುಕ ಬೀಳ್ಕೊಡುಗೆ ನಿಡಿದರು.
ಅಂತಾರಾಷ್ಟ್ರೀಯ ಫುಟ್ಬಾಲ್ ಜೀವನದಲ್ಲಿ ಸುನಿಲ್ ಚೆಟ್ರಿ 94 ಗೋಲು ಗಳಿಸಿದ್ದಾರೆ. 4 ಬಾರಿ ಹ್ಯಾಟ್ರಿಕ್ ಗಳಿಸಿದ ಸಾಧನೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕೂಡ ಸುನಿಲ್ ಚೆಟ್ರಿ ಅವರಿಗೆ ಅಭಿಮಾನಿಗಳು ಭಾವನಾತ್ಮಕ ವಿದಾಯ ತಿಳಿಸಿದ್ದಾರೆ. ಭಾರತದಲ್ಲಿ ಫುಟ್ಬಾಲ್ ಜನಪ್ರಿಯಗೊಳಿಸುವಲ್ಲಿ ಸುನಿಲ್ ಚೆಟ್ರಿ ಅವರ ಪಾತ್ರ ದೊಡ್ಡದು. ದೇಶಾದ್ಯಂತ ಅವರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ












Click it and Unblock the Notifications