ಬಿಸಿಸಿಐ ಪ್ರಯೋಜಕತ್ವ ವರ್ಗಾವಣೆಗೆ ಪೇಟಿಎಂ ಮನವಿ
ನವದೆಹಲಿ, ಜುಲೈ,22: ಭಾರತೀಯ ಕ್ರಿಕೆಟ್ ಆಟಗಾರರ ಜೆರ್ಸಿ ಪಾಯೋಜಕತ್ವ ಪಡೆದಿರುವ ಬೈಜುಸ್ 82.21 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪವಾದ ನಂತರ ಟೈಟಲ್ ಪ್ರಯೋಜಕತ್ವದ ಹಕ್ಕುಗಳನ್ನು ಬೇರೆ ಕಂಪೆನಿಗೆ ವರ್ಗಾಯಿಸುವಂತೆ ಬಿಸಿಸಿಐಗೆ ಪೇಟಿಎಂ ಸಂಸ್ಥೆ ಮನವಿ ಮಾಡಿಕೊಂಡಿದೆ.
ಭಾರತದಲ್ಲಿ 2023ರ ಏಕದಿನ ವಿಶ್ವಕಪ್ನ ಅಂತ್ಯದವರೆಗೆ ಬೈಜುಸ್ ಕಂಪನಿ ಮತ್ತು ಬಿಸಿಸಿಐ ತಮ್ಮ ಪಾಲುದಾರಿಕೆಯನ್ನು ವಿಸ್ತರಿಸಲು ಏಪ್ರಿಲ್ನಲ್ಲಿ ಮಾತ್ರ ಒಪ್ಪಿಕೊಂಡಿದ್ದವು. ಈ ವಿಷಯವನ್ನು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಗುರುವಾರ ಚರ್ಚಿಸಿದೆ.
ಇಂದಿನವರೆಗೂ ಬೈಜು ಅವರು ಮಂಡಳಿಗೆ 86.21 ಕೋಟಿ ರೂ. ಬಾಕಿ ಪಾವತಿಸಬೇಕಿದೆ ಎಂದು ಬಿಸಿಸಿಐ ಮೂಲಗಳು ಸಭೆಯ ನಂತರ ಪಿಟಿಐಗೆ ತಿಳಿಸಿದೆ. ಆದರೆ ಬೈಜು ವಕ್ತಾರರು, ನಾವು ಬಿಸಿಸಿಐ ಜೊತೆಗಿನ ಒಪ್ಪಂದವನ್ನು ವಿಸ್ತರಿಸಿದ್ದೇವೆ. ಆದರೆ ಇನ್ನೂ ಸಹಿ ಮಾಡಿಲ್ಲ. ಒಪ್ಪಂದದ ಸಹಿ ಮಾಡಿದ ನಂತರ, ಒಪ್ಪಂದದ ಪಾವತಿ ನಿಯಮಗಳ ಪ್ರಕಾರ ಪಾವತಿಗಳು ನಡೆಯುತ್ತವೆ. ಆದ್ದರಿಂದ ನಮ್ಮಿಂದ ಯಾವುದೇ ಬಾಕಿ ಉಳಿದಿಲ್ಲ ಎಂದು ತಿಳಿಸಿದ್ದಾರೆ.

2019ರಲ್ಲಿ ಮೊಬೈಲ್ ತಯಾರಕ ಒಪ್ಪೋ ಬೈಜು ಸಂಸ್ಥೆಗೆ ಪ್ರಾಯೋಜಕತ್ವದ ಹಕ್ಕುಗಳನ್ನು ವರ್ಗಾಯಿಸಿದಾಗ ಬೈಜು ಮೊದಲ ಬಾರಿಗೆ ಕಣಕ್ಕೆ ಬಂದಿತು. ಫಿನ್ಟೆಕ್ ಕಂಪನಿ ಪೇಟಿಎಂ ತಮ್ಮ ಇಂಡಿಯಾ ಹೋಮ್ ಕ್ರಿಕೆಟ್ ಟೈಟಲ್ ಹಕ್ಕುಗಳನ್ನು ಮಾಸ್ಟರ್ಕಾರ್ಡ್ಗೆ ವರ್ಗಾಯಿಸಲು ಬಿಸಿಸಿಐಗೆ ವಿನಂತಿಸಿದೆ ಎಂದು ತಿಳಿದು ಬಂದಿದೆ.
ಪೇಟಿಎಂ ಮತ್ತು ಬಿಸಿಸಿಐ ನಡುವಿನ ಪ್ರಸ್ತುತ ಒಪ್ಪಂದವು ಸೆಪ್ಟೆಂಬರ್ 2019 ರಿಂದ ಮಾರ್ಚ್ 31, 2023 ರವರೆಗೆ ಮುಂದುವರಿಯುತ್ತದೆ. ಆದಾಗ್ಯೂ, ಎರಡು ಸಂಸ್ಥೆಗಳ ನಡುವಿನ ದೀರ್ಘಕಾಲದ ಸಂಬಂಧವನ್ನು ಪರಿಗಣಿಸಿ ಬಿಸಿಸಿಐ ಪೇಟಿಎಂನ ವಿನಂತಿಯನ್ನು ಪರಿಗಣಿಸುತ್ತದೆ ಎಂಬ ಸುದ್ದಿ ಇದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications