ವೆಸ್ಟ್ ಇಂಡೀಸ್ ಪ್ರವಾಸ: ಕೆಎಲ್ ರಾಹುಲ್ ಕಮ್ಬ್ಯಾಕ್, ಕೊಹ್ಲಿ, ಬುಮ್ರಾ, ಚಾಹಲ್ಗೆ ಬ್ರೇಕ್
ಮುಂಬೈ, ಜುಲೈ 13: ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಗೆ ಭಾರತ ತಂಡದ ಪ್ರಕಟವಾಗಿದ್ದು, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ಪ್ರವಾಸ ತಪ್ಪಿಸಿಕೊಂಡಿದ್ದ ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಸೇರಿಕೊಂಡಿದ್ದಾರೆ.
ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಕನ್ನಡಿಗ ಕೆಎಲ್ ರಾಹುಲ್ ತವರಿನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ , ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಟಿ20 ಮತ್ತು ಏಕದಿನ ಸರಣಿಯನ್ನು ತಪ್ಪಿಸಿಕೊಂಡಿದ್ದರು. ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಹುಲ್ ಸದ್ಯ ಚೇತರಿಸಿಕೊಂಡಿದ್ದು 16 ಸದಸ್ಯರ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಬೆಂಗಳೂರಲ್ಲಿ ನಡೆದ ಕಿಕ್ ಬಾಕ್ಸಿಂಗ್ ಸ್ಪರ್ಧೆ ವೇಳೆ ಮೈಸೂರು ಸ್ಪರ್ಧಿ ನಿಖಿಲ್ ದಾರುಣ ಸಾವು
ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಲ್ಲದೆ, ಉಪನಾಯಕನ ಪಟ್ಟವನ್ನು ಮೆರಳಿ ಪಡೆದಿದ್ದಾರೆ. ಆದರೆ, ರಾಹುಲ್ ಮತ್ತು ಕುಲದೀಪ್ ಫಿಟ್ನೆಸ್ ಸಾಬೀತು ಪಡಿಸಿದ ನಂತರವಷ್ಟೇ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಕುಲದೀಪ್ ಯಾದವ್ ಇತ್ತೀಚೆಗಷ್ಟೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಿದ್ದರು. ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಬೆರಳಿನ ಗಾಯಕ್ಕೆ ಒಳಗಾಗಿದ್ದರು.
ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 8 ತಿಂಗಳ ಬಳಿಕ ಭಾರತ ಟಿ20 ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಆದರೆ ಮಾಜಿ ನಾಯಕ ವಿರಾಟ್ ಕೊಹ್ಲಿ, ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ಗೆ ವಿಶ್ರಾಂತಿ ನೀಡಲಾಗಿದೆ. ಸತತ ಕ್ರಿಕೆಟ್ ಆಡುತ್ತಿರುವ ಬುಮ್ರಾಗೆ ಮುಂಬರುವ ವಿಶ್ವಕಪ್ ದೃಷ್ಠಿಯಿಂದ ವರ್ಕ್ಲೋಡ್ ನಿಯಂತ್ರಿಸುವ ಸಲುವಾಗಿ ವಿಶ್ರಾಂತಿ ನೀಡಲಾಗಿದೆ.
ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿ ಹನಿಮೂನ್ಗೆ ಸಿದ್ದರಾದ 66 ವರ್ಷದ ಅರಣ್ ಲಾಲ್
ಜುಲೈ 29ರಿಂದ ವಿಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ ಟ್ರಿನಿಡಾಡ್ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯಲಿದೆ, ಸೇಂಟ್ ಕಿಟ್ಸ್ನ ವಾರ್ನರ್ ಪಾರ್ಕ್ನಲ್ಲಿ 2 ಮತ್ತು 3ನೇ ಪಂದ್ಯ ಹಾಗೂ ಕೊನೆಯ ಎರಡು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ.
ಈಗಾಗಲೇ ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಘೋಷಿಸಲಾಗಿದ್ದು, ಶಿಖರ್ ಧವನ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಆಲ್ರೌಂಡರ್ ರವೀಂದ್ರ ಜಡೇಜಾರ ಉಪನಾಯಕರಾಗಿದ್ದಾರೆ. ಈ ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ.
ವಿಂಡೀಸ್
ಪ್ರವಾಸಕ್ಕೆ
ಭಾರತ
ಟಿ20
ತಂಡ
ರೋಹಿತ್
ಶರ್ಮಾ
(
ನಾಯಕ),
ಇಶಾನ್
ಕಿಶನ್,
ಕೆಎಲ್
ರಾಹುಲ್,
ಸೂರ್ಯಕುಮಾರ್
ಯಾದವ್,
ದೀಪಕ್
ಹೂಡಾ,
ಶ್ರೇಯಸ್
ಅಯ್ಯರ್,
ದಿನೇಶ್
ಕಾರ್ತಿಕ್,
ರಿಷಭ್
ಪಂತ್,
ಹಾರ್ದಿಕ್
ಪಾಂಡ್ಯ,
ರವೀಂದ್ರ
ಜಡೇಜಾ,
ಅಕ್ಷರ್
ಪಟೇಲ್,
ರವಿಚಂದ್ರನ್
ಅಶ್ವಿನ್,
ರವಿ
ಬಿಷ್ಣೋಯ್,
ಕುಲದೀಪ್
ಯಾದವ್*,
ಭುವನೇಶ್ವರ್
ಕುಮಾರ್,
ಅವೇಶ್
ಖಾನ್,
ಹರ್ಷಲ್
ಪಟೇಲ್,
ಅರ್ಷದೀಪ್
ಸಿಂಗ್.