ಸೆಲ್ಫಿಗಾಗಿ ಬಂದ ಸಿಬ್ಬಂದಿಯನ್ನು ತಳ್ಳಿದ ಗಾಯಕ್ವಾಡ್: ಆಟಿಟ್ಯೂಡ್ ಒಳ್ಳೆಯದಲ್ಲ ಅಂದ ಫ್ಯಾನ್ಸ್
ಬೆಂಗಳೂರು, ಜೂನ್ 21: ಟೀಮ್ ಇಂಡಿಯಾದಲ್ಲಿ ಈಗಷ್ಟೇ ಅವಕಾಶ ಪಡೆಯುತ್ತಿರುವ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಸಿಬ್ಬಂದಿಯನ್ನು ಅವಮಾನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಯುವ ಕ್ರಿಕೆಟಿಗನ ಈ ವರ್ತನೆಯನ್ನು ಸರಿಯಾದದ್ದಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.
ಭಾನುವಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5ನೇ ಪಂದ್ಯ ಮಳೆಯಿಂದ ರದ್ದಾಗುವ ಮುನ್ನ ಋತುರಾಜ್ ಗಾಯಕ್ವಾಡ್ ಬ್ಯಾಟಿಂಗ್ ಡಗ್ಔಟ್ನಲ್ಲಿ ಕುಳಿತಿದ್ದರು. ಈ ವೇಳೆ ಸಿಬ್ಬಂದಿಯೊಬ್ಬ ಅವರ ಬಂದು ಗಾಯಕ್ವಾಡ್ ಜೊತೆ ಸೆಲ್ಫಿ ತೆಗೆಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಈ ವೇಳೆ ಗಾಯಕ್ವಾಡ್ ದೂರ ಸರಿಯುವಂತೆ ಸೂಚಿಸಿದ್ದಾರೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಪಂದ್ಯ ನಡೆಯುವುದಕ್ಕಾಗಿ ಮೈದಾನದ ಸಿಬ್ಬಂದಿ ಮಳೆಯ ಮಧ್ಯೆಯೂ ಶ್ರಮಿಸಿದ್ದಾರೆ. ಅಂತಹ ವ್ಯಕ್ತಿ ಒಂದು ಸೆಲ್ಫಿ ಕೇಳಲು ಬಂದರೆ ನಿರಾಕರಿಸಿದ್ದಲ್ಲದೆ, ತಳ್ಳಿ ಅವಮಾನಿಸಿದ್ದಕ್ಕೆ ಆಟಗಾರನ ವಿರುದ್ಧ ಟ್ವಿಟರ್ನಲ್ಲಿ ಇಂತಹ ದುರಹಂಕಾರ ಒಳ್ಳೆಯದಲ್ಲ ಎಂದು ಕಿಡಿಕಾರಿದ್ದಾರೆ.

"ಋತುರಾಜ್ , ಮೈದಾನ ಸಿಬ್ಬಂದಿಗಳು ರಿಯಲ್ ಹೀರೋಸ್, ಅವರ ವಿರುದ್ಧ ನಿಮ್ಮ ನಡೆ ಸ್ವೀಕಾರಾರ್ಹವಲ್ಲ, ನಿಮ್ಮ ಈ ನಾಚಿಕೆಗೇಡಿನ ವರ್ತನೆ ಸಹಿಸಲಾಗುವುದಿಲ್ಲ. ತಂಡದಲ್ಲಿರುವ ಇತರ ಆಟಗಾರರಿಂದ ಕ್ರಿಕೆಟ್ನ ಕಾಣದ ಹೀರೋಗಳನ್ನು ಹೇಗೆ ಗೌರವಿಸಬೇಕು ಎಂದು ತಿಳಿದುಕೊಳ್ಳಿ" ಎಂದು ಟ್ವಿಟರ್ನಲ್ಲಿ ಅಭಿಮಾನಿಯೊಬ್ಬರು ಧೋನಿ ಮತ್ತು ರೋಹಿತ್ ಶರ್ಮಾ ಮೈದಾನದ ಸಿಬ್ಬಂದಿಯೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
@Ruutu1331 the gesture you have shown to the real heroes (Groundsman) is unacceptable in gentleman's game. Your shameful behavior will not be tolerated. Learn from @ImRo45 and other teammates how to treat with Unsung heroes. #RuturajGaikwad #INDvsSA @BCCI @JayShah @SGanguly99 pic.twitter.com/JPbTTYW7VE
— Koushik Chakraborty (@koushik_95) June 20, 2022
ವಿಕಿ ಶಿಂದೆ ಎಂಬ ಟ್ವಿಟರ್ ಬಳಕೆ ದಾರ, ಋತುರಾಜ್ ಗಾಯಕ್ವಾಡ್ ಮೈದಾನದ ಸಿಬ್ಬಂದಿಯಗೆ ಅಗೌರವ ತೋರಿದ್ದಾರೆ. ಇಂತಹ ಅಹಂಕಾರ ಮತ್ತು ವರ್ತನೆ ತುಂಬಾ ಕೆಟ್ಟದ್ದು. ಮೊದಲು ನೀವು ಜನರಿಗೆ ಹೇಗೆ ಗೌರವ ಕೊಡಬೇಕೆಂದು ಕಲಿಯಿರಿ ಎಂದು ಬರೆದುಕೊಂಡಿದ್ದಾರೆ.
ಕೆಲವು ಮಂದಿ ಭಾರತೀಯ ಕ್ರಿಕೆಟಿಗನ ಪರವಾಗಿಯೂ ಮಾತನಾಡಿದ್ದಾರೆ. ಬಯೋಬಬಲ್ ಇದ್ದಿದ್ದರಿಂದ ಗಾಯಕ್ವಾಡ್ ಈ ರೀತಿ ನಡೆದುಕೊಂಡಿರಬಹುದು ಎಂದು ಟ್ವೀಟ್ ಮಾಡಿಕೊಂಡಿದ್ದಾರೆ. ಆದರೆ ಈ ಸರಣಿಯಲ್ಲಿ ಬಯೋಬಬಲ್ ಇರಲಿಲ್ಲವೆಂದು ತಿಳಿದುಬಂದಿದೆ.
Ruturaj Gaikwad disrespecting Groundsman. This arrogance and attitude is very bad man. First learn respecting People.
— Vicky Shinde (@iamshinde83) June 19, 2022
And no bio bubble this series.#INDvsSA #chinnaswamystadium #rain #RuturajGaikwad pic.twitter.com/yux4fGq26a
ಇನ್ನು ಈ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಜಯ ಸಾಧಿಸಿದರೆ, ನಂತರದ ಎರಡು ಪಂದ್ಯಗಳಲ್ಲಿ ಅದ್ಭುತವಾಗಿ ತಿರುಗಿ ಬಿದ್ದು 2-2ಕ್ಕೆ ತಂದು ನಿಲ್ಲಿಸಿತ್ತು. ಆದರೆ ಸರಣಿ ಗೆಲ್ಲಲು ನಿರ್ಣಾಯಕವಾಗಿದ್ದ ಪಂದ್ಯದ ವರುಣನ ಅವಕೃಪೆಗೆ ಒಳಗಾಗಿ ರದ್ಧಾಯಿತು. 2-2ರಲ್ಲಿ ಸರಣಿಯನ್ನು ಎರಡು ತಂಡಗಳು ಹಂಚಿಕೊಂಡವು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications