Virat Kohli: ರೋಹಿತ್ರನ್ನು ಹೊಗಳಿ ಕೊಹ್ಲಿಯನ್ನು ಟೀಕಿಸಿದ ಗವಾಸ್ಕರ್; ಸಿಟ್ಟಿಗೆದ್ದ ಅಭಿಮಾನಿಗಳು
ಬಾಂಗ್ಲಾದೇಶ ವಿರುದ್ಧದ 2024 ರ ಟಿ 20 ವಿಶ್ವಕಪ್ ಪಂದ್ಯದ ವೇಳೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಔಟಾದ ಬಗ್ಗೆ ವ್ಯತಿರಿಕ್ತ ವಿಶ್ಲೇಷಣೆ ಮಾಡಿದ ದಿಗ್ಗಜ ಬ್ಯಾಟರ್ ಸುನೀಲ್ ಗವಾಸ್ಕರ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ 11 ಎಸೆತಗಳಲ್ಲಿ 23 ರನ್ ಗಳಿಸಿ ಪವರ್ಪ್ಲೇನಲ್ಲಿ ಭಾರತಕ್ಕೆ ಉತ್ತಮ ಆರಂಭವನ್ನು ನೀಡಿದ್ದರು. ಮತ್ತೊಂದೆಡೆ, ಕೊಹ್ಲಿ 28 ಎಸೆತಗಳಲ್ಲಿ 37 ರನ್ ಗಳಿಸಿದರು. ಗವಾಸ್ಕರ್, ರೋಹಿತ್ ಅವರ ನಿಸ್ವಾರ್ಥತೆಯನ್ನು ಹೊಗಳಿದರೆ, ವಿರಾಟ್ ಔಟಾಗಿದ್ದನ್ನು ಕಟುವಾಗಿ ಟೀಕಿಸಿದರು. ಇದು ಕೊಹ್ಲಿ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಶಾಕಿಬ್ ಬೌಲಿಂಗ್ನಲ್ಲಿ ರೋಹಿತ್ ಸಿಕ್ಸರ್ ಬಾರಿಸಲು ಯತ್ನಿಸಿ ಔಟಾದರು. ಆದರೆ ಅದಕ್ಕೂ ಮುನ್ನ ಅವರು ಒಂದೇ ಓವರ್ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ್ದರು. ಗವಾಸ್ಕರ್ ಅವರು ರೋಹಿತ್ ಉದ್ದೇಶ ಮತ್ತು ಆಕ್ರಮಣಕಾರಿ ವಿಧಾನವನ್ನು ಶ್ಲಾಘಿಸಿದರು.
ಎರಡು ಎಸೆತಗಳಲ್ಲಿ 10 ರನ್ ಹೊಡೆದ ಯಾರಾದರೂ ದೊಡ್ಡ ಹೊಡೆತಕ್ಕೆ ಹೋಗುವುದಿಲ್ಲ, ಆದರೆ ರೋಹಿತ್ ಶರ್ಮಾಗೆ ತಂಡದ ಬಗ್ಗೆ ಯೋಚಿಸುತ್ತಾರೆ ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಹೇಳಿದರು.
ರೋಹಿತ್ ಶರ್ಮಾ ಅವರ ಔಟಾಗುವಿಕೆಯು ಭಾರತೀಯ ಅಭಿಮಾನಿಗಳ ಮನಸ್ಸಿಗೆ 2023 ರ ವಿಶ್ವಕಪ್ ಫೈನಲ್ನ ನೆನಪುಗಳನ್ನು ಮರಳಿ ತರುವುದರಲ್ಲಿ ಸಂದೇಹವಿಲ್ಲ, ಆ ಸಂದರ್ಭದಲ್ಲಿಯೂ ಸಹ, ರೋಹಿತ್ ಈಗಾಗಲೇ ಅದೇ ಓವರ್ನಲ್ಲಿ ಉತ್ತಮ ರನ್ ಗಳಿಸಿದ ಬಳಿಕ ಔಟಾಗಿದ್ದರು.
ವಿರಾಟ್ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ 37 ರನ್ ಗಳಿಸಿದರು. ಆದರೆ, ಬಾಂಗ್ಲಾದೇಶದ ವೇಗಿ ತಂಜಿಮ್ ಹಸನ್ ಸಾಕಿಬ್ ಅವರ ಅಪರೂಪದ ನಿಧಾನಗತಿಯ ಎಸೆತದಲ್ಲಿ ಕೊಹ್ಲಿ ಕ್ಲೀನ್ ಬೌಲ್ಡ್ ಆದರು.
ಕೊಹ್ಲಿ ಔಟಾಗುತ್ತಿದ್ದಂತೆ ಗವಾಸ್ಕರ್, ಆತ ಏನು ಯೋಚನೆ ಮಾಡುತ್ತಿದ್ದ? ಇನ್ ಅಂಡ್ ಔಟ್ ಶಾಟ್ ಆಡಬೇಕಿತ್ತು ಎಂದು ಗವಾಸ್ಕರ್ ಹೇಳಿದರು.
ಅಭಿಮಾನಿಗಳ ಆಕ್ರೋಶ
ರೋಹಿತ್ ಮತ್ತು ಕೊಹ್ಲಿಯ ಔಟಾದ ಬಗ್ಗೆ ಗವಾಸ್ಕರ್ ಪ್ರತಿಕ್ರಿಯೆ ನಿಡುವಲ್ಲಿ ಪಕ್ಷಪಾತ ಮಾಡಿದ್ದು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಯಿತು. ಸುನಿಲ್ ಗವಾಸ್ಕರ್ ಅವರನ್ನು ಪಕ್ಷಪಾತಿ, ಕಪಟಿ ಎಂದು ಜರಿದಿದ್ದಾರೆ.
"ಸುನಿಲ್ ಗವಾಸ್ಕರ್ ಅವರಂತಹ ಕಾಮೆಂಟೇಟರ್ಗಳು ಅಭಿಮಾನಿಗಳು ಮತ್ತು ಆಟಗಾರರ ನಡುವೆ ವ್ಯತ್ಯಾಸವನ್ನು ಸೃಷ್ಟಿಸುತ್ತಾರೆ" ಎಂದು ಒಬ್ಬ ಬಳಕೆದಾರರು ಗವಾಸ್ಕರ್ ಅವರ ಅಭಿಪ್ರಾಯವನ್ನು ಟೀಕಿಸಿದರು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications